ನವದೆಹಲಿ: ಪಂ.ದೀನ್ದಯಾಳ್ ಉಪಾಧ್ಯಾಯ್ ಗ್ರಾಮ ಜ್ಯೋತಿ ಯೋಜನೆಯಡಿ ಕೇಂದ್ರ ಸರ್ಕಾರ 18,452 ಗ್ರಾಮಗಳ ಪೈಕಿ 13,002 ಗ್ರಾಮಗಳ ವಿದ್ಯುದೀಕರಣ ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲು ತಲುಪಿದೆ. ಇದರೊಂದಿಗೆ ಸರ್ಕಾರ ಪ್ರತಿ ಗ್ರಾಮಕ್ಕೂ ವಿದ್ಯುತ್ ಪೂರೈಸುವ ಕೊನೆ ಹಂತ ತಲುಪಿದಂತಾಗಿದೆ.
18,452 ಗ್ರಾಮಗಳ ಪೈಕಿ 13,002 ಗ್ರಾಮಗಳ ವಿದ್ಯುದೀಕರಣ ಮಾಡಲಾಗಿದ್ದು, ಇದೊಂದು ಹೆಮ್ಮೆಯ ಸಂಗತಿ. 2018ರ ಮೇ ತಿಂಗಳ ಒಳಗಾಗಿ ಉಳಿದ ಗ್ರಾಮಗಳ ವಿದ್ಯುದೀಕರಣ ಮಾಡಲಾಗುವುದು ಎಂದು ಕೇಂದ್ರದ ವಿದ್ಯುತ್, ಕಲ್ಲಿದ್ದಲು ಮತ್ತು ಗಣಿಗಾರಿಕೆ ರಾಜ್ಯ ಸಚಿವ ಪಿಯುಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.
2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1000 ದಿನಗಳಲ್ಲಿ ಎಲ್ಲ 18,452 ಗ್ರಾಮಗಳ ವಿದ್ಯುದೀಕರಣಕ್ಕೆ ಕರೆ ನೀಡಿದ್ದರು. 18000 ಗ್ರಾಮಗಳಲ್ಲಿ ವಿದ್ಯುತ್ ಕಂಬಗಳಿಲ್ಲದಿದ್ದು, ಈ ಗ್ರಾಮಗಳಿಗೆ ವಿದ್ಯುತ್ ಅಗತ್ಯವಿದೆ ಎಂದು ಪ್ರಸ್ತಾಪಿಸಿ ಅವರು ಮುಂದಿನ 1000 ದಿನಗಳಲ್ಲಿ ಗ್ರಾಮಗಳ ವಿದ್ಯುದೀಕರಣವನ್ನು ಖಚಿತಪಡಿಸಲಾಗುವುದು ಎಂದು ಮೋದಿ ಅವರು ಹೇಳಿದ್ದರು.
ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಯುದ್ಧ ತಯಾರಿಯ ಮೂಲಸೌಕರ್ಯ ಮತ್ತು ಗ್ರಾಮೀಣ ಭಾರತದ ಅಭಿವೃದ್ಧಿಗೆ ಗಣನೀಯ ವೆಚ್ಚ ಸೇರಿದಂತೆ 2018ರ ಒಳಗೆ ಭಾರತದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಪೂರೈಸುವ ಬಗ್ಗೆ ಒತ್ತು ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.