ನವದೆಹಲಿ: ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ಅವರ ಕುಟುಂಬದ ಗುಪ್ತ ಆಸ್ತಿಗಳ ಮಾಹಿತಿಯನ್ನು ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಬಹಿರಂಗಪಡಿಸಿದ್ದಾರೆ.
ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಅವರಿಗೆ ಸಂಬಂಧಿಸಿದ 21 ರಹಸ್ಯ ವಿದೇಶಿ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಬಹಿರಂಗಪಡಿಸಿದ ಬಳಿಕ ಇದೀಗ ಆದಾಯ ತೆರಿಗೆ ಇಲಾಖೆಯ ತನಿಖಾ ಸಂಸ್ಥೆ ಪತ್ತೆ ಹಚ್ಚಿದ ಯುಕೆಯ ಕೇಂಬ್ರಿಡ್ಜ್ನಲ್ಲಿರುವ ಚಿದಬರಂ ಅವರ ಗುಪ್ತ ಆಸ್ತಿಯ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಕಾರ್ತಿ ಅವರ ಕಂಪೆನಿಯಿಂದ ವಶಪಡಿಸಿಕೊಂಡಿದ್ದ ಹಾರ್ಡ್ ಡಿಸ್ಕ್ನ 200 ಪುಟಗಳ ಆದಾಯ ತೆರಿಗೆ ವಿಶ್ಲೇಷಣೆಯ ವಿವರಗಳನ್ನು ಸುಬ್ರಹ್ಮಣಿಯನ್ ಸ್ವಾಮಿ ಬಹಿರಂಗಪಡಿಸಿದ್ದಾರೆ. ಭ್ರಷ್ಟಾಚಾರ ಮತ್ತು ಅಕ್ರಮ ಹಣ ಹರಿವು ಮೂಲಕ ವಿದೇಶಗಳಲ್ಲಿ ಖರೀದಿಸಲಾದ ಆಸ್ತಿಗಳ 20 ವಿವಿಧ ನಿದರ್ಶನಗಳನ್ನು ಸ್ವಾಮಿ ವಿವರಿಸಿದ್ದಾರೆ.
ಚಿದಂಬರಂ, ಅವರ ಪತ್ನಿ ನಳಿನಿ, ಪುತ್ರ ಕಾರ್ತಿ ಹಾಗೂ ಅವರ ಪತ್ನಿ ಶ್ರೀನಿಧಿ 2008ರಲ್ಲಿ ಜಂಟಿಯಾಗಿ ಯುಕೆಯ ಕೇಂಬ್ರಿಡ್ಜ್ನಲ್ಲಿ ಭವ್ಯ ಬಂಗಲೆ ಖರೀದಿಸಿದ್ದರು ಎಂದು ತೆರಿಗೆ ಇಲಾಖೆ ವಶಪಡಿಸಿರುವ ಹಾರ್ಡ್ ಡಿಸ್ಕ್ನಿಂದ ತಿಳಿದು ಬಂದಿದೆ. ಚಿದಂಬರಂ ಅವರ ಕುಟುಂಬ ಕೇಂಬ್ರಿಡ್ಜ್ನಲ್ಲಿರುವ 5, ಹೋಲ್ಬನ್ ಕ್ಲೋಸ್ನಲ್ಲಿದ್ದು, ಎಡ್ಮಂಡ್ ಹೋಲ್ಟ್ ಮತ್ತು ಹೀಥರ್ ಹೋಲ್ಟ್ ಅವರಿಂದ ಖರೀದಿಸಿತ್ತು.
ಆಸ್ತಿ ಖರೀದಿಗಾಗಿ ಲಂಡನ್ನಲ್ಲಿರುವ ಮೆಟ್ರೋ ಬ್ಯಾಂಕ್ನಲ್ಲಿರುವ ಕಾರ್ತಿ ಅವರ ವೈಯಕ್ತಿಕ ಖಾತೆಯಿಂದ ಹಣ ವಿತ್ಡ್ರಾ ಮಾಡಲಾಗಿತ್ತು. ಚಿದಂಬರಂ ಅವರು ಕೇವಲ ತಮ್ಮ ಪತ್ನಿ ನಳಿನಿ ಅವರ ಆಸ್ತಿಯ ಪಾಲನ್ನು ಘೋಷಿಸಿದ್ದರು. ಚಿದಂಬರಂ ಹಾಗೂ ಕಾರ್ತಿ ಕೇಂಬ್ರಿಡ್ಜ್ ಭೂ ವ್ಯವಹಾರದಲ್ಲಿ ತಮ್ಮ ಆಸ್ತಿಯ ಪಾಲನ್ನು ಘೋಷಿಸಿಲ್ಲ ಎಂಬ ಮಾಹಿತಿಯನ್ನು ಸುಬ್ರಹ್ಮಣಿಯನ್ ಸ್ವಾಮಿ ತಿಳಿಸಿದ್ದಾರೆ.
ಚಿದಂಬರಂ ಅವರು ಲೋಕಸಭೆ ಅಥವಾ ರಾಜ್ಯಸಭೆಯ ಚುನಾವಣಾ ಅಭ್ಯರ್ಥಿಯಾಗಿ, ಮಂತ್ರಿಯಾಗಿ, ಸಂಸದರಗಿ ತಮ್ಮ ಆಸ್ತಿ ವಿವರಗಳನ್ನು ಯಾವುದೇ ಕಡ್ಡಾಯ ಅಫಿದಾವಿತ್ಗಳಲ್ಲಿ ವಿವರಿಸಿಲ್ಲ. ಕಾರ್ತಿ ಕೂಡ ಆಸ್ತಿ ವಿವರಗಳನ್ನು ಘೋಷಿಸಿಲ್ಲ. ಇದು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1) (e ) ಅಡಿಯಲ್ಲಿ ಸಂಪೂರ್ಣ ಭ್ರಷ್ಟಾಚಾರವಾಗಿದೆ. ಚಿದಂಬರಂ ಹಾಗೂ ಅವರ ಕುಟುಂದವರ ವಿರುದ್ಧ ಸಿಬಿಐ-ಇಡಿ ತನಿಖೆ ನಡೆಸುವ ಮೂಲಕ ಕಪ್ಪು ಹಣ ಮತ್ತು ಆಸ್ತಿಗಳಿಗೆ ತಕ್ಷಣ ಮುಟ್ಟುಗೋಲು ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಸ್ವಾಮಿ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.