ನವದೆಹಲಿ: ಅನಾಣ್ಯೀಕರಣದ ಬಳಿಕ ಕೇಂದ್ರ ಸರ್ಕಾರ ನೀಡಿರುವ 50 ದಿನಗಳ ಡೆಡ್ಲೈನ್ ಸಮೀಪಿಸುತ್ತಿದ್ದು, ನೋಟು ನಿಷೇಧದ ಬಹಳಷ್ಟು ಪ್ರಯೋಜನಗಳು ಗೋಚರಿಸುತ್ತಿವೆ. ದೊಡ್ಡ ಪ್ರಮಾಣದಲ್ಲಿ ಹಳೆ ಕರೆನ್ಸಿ ನೋಟುಗಳನ್ನು ಬದಲಾಯಿಸಲಾಗಿದ್ದು, ಹೆಚ್ಚನ ಸಂಖ್ಯೆಯಲ್ಲಿ 500 ರೂ. ನೋಟುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಜೇಟ್ಲಿ ಅವರು, ನೋಟುಗಳ ಮರುಚಲಾವಣೆ ಗಣನೀಯವಾಗಿ ಮುಂದುವರೆದಿದೆ. ಅಲ್ಲದೇ ದೇಶದಲ್ಲಿ ಅಶಾಂತಿಗೆ ಸಂಬಂಧಿಸಿದಂತೆ ಯಾವುದೇ ಘಟನೆಗಳು ವರದಿಯಾಗಿಲ್ಲ ಎಂದು ಹೇಳಿದ್ದಾರೆ.
ಡಿ.19ರ ವರೆಗೆ ಕೇಂದ್ರ ಅಬಕಾರಿ ತೆರಿಗೆ ಶೇ.43.3ರಷ್ಟಟು ಏರಿಕೆಯಾಗಿದ್ದು, ನೇರ ತೆರಿಗೆ ಶೇ.14.4 ಹಾಗೂ ಪರೋಕ್ಷ ತೆರಿಗೆ 26.2ರಷ್ಟು ಮತ್ತು ಕಸ್ಟಮ್ಸ್ ಶೇ.6ರಷ್ಟು ಏರಿಕೆಯಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ. ನೇರ ತೆರಿಗೆಯ ನಿವ್ವಳ ಲಾಭ ಶೇ.13.6ರಷ್ಟು ಹೆಚ್ಚಳವಾಗಿದೆ. ಬಿತ್ತನೆ ಬೆಳೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.6.3ರಷ್ಟು ಹೆಚ್ಚಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಅನಾಣ್ಯೀಕರಣವನ್ನು ಬೆಂಬಲಿಸಿದ ರಾಷ್ಟ್ರದ ಜನತೆಗೆ ನಾವು ಅತ್ಯಂತ ಕೃತಜ್ಞರಾಗಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ನೋಟುಗಳ ಮರು ಚಲಾವಣೆಯಾಗುತ್ತಿದ್ದು, ಬ್ಯಾಂಕ್ಗಳೂ ಅಧಿಕ ಮಟ್ಟದಲ್ಲಿ ಹಣವನ್ನು ವಿತರಿಸುತ್ತಿವೆ. ನೋಟುಗಳ ಮರು ಚಲಾವಣೆ ಜವಾಬ್ದಾರಿ ಈಗ ನಮ್ಮ ಹೊಣೆಯಾಗಿದ್ದು, ಇದರ ುತ್ತಮ ನಿರ್ವಹಣೆ ಬಗ್ಗೆ ಭರವಸೆ ಇದೆ ಎಂದು ಸಚಿವ ಜೇಟ್ಲಿ ಹೇಳಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ಬಳಕೆ, ಪ್ರವಾಸೋದ್ಯಮ, ಜೀವ ವಿಮೆ, ಮ್ಯೂಚುವಲ್ ಫಂಡ್ ಏರಿಕೆಯಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರದಿಂದ ಆಗಿರುವ ಪ್ರಯೋಜನ ಗೋಚರಿಸುತ್ತಿದ್ದು, ಇಂದ ಬ್ಯಾಂಕ್ಗಳಲ್ಲಿ ಏನಿದೆಯೋ ಅವು ತೆರಿಗೆ ಸಂಗ್ರಹದ ಪರಿಣಾಮಗಳು ಎಂದು ಪರಿಗಣಿಸಬಹುದು ಎಂದು ಜೇಟ್ಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.