ಚಂಡೀಗಢ: ಶ್ರೀಮಂತರು ಮತ್ತು ಬಡವರ ನಡುವಿನ ಸಾಮಾಜಿಕ ತಾರತಮ್ಯ ಚಂಡೀಗಢದಲ್ಲಿ ಇನ್ನು ಮುಂದೆ ಕಾಣಲು ಸಿಗದು.
‘ನೇಕಿ ಕಿ ದೀವಾರ್’ ಎಂದೇ ಕರೆಯಲಾಗುವ ‘ವಾಲ್ ಆಫ್ ಕೈಂಡ್ನೆಸ್’ನ ಪ್ರಾರಂಭದ ಬಳಿಕ ನಡುಗಿಸುವ ಚಳಿಯಲ್ಲಿ ರಸ್ತೆ ಬದಿಗಳಲ್ಲಿ ರಾತ್ರಿ ಕಳೆಯುವವರಿಗೆ ಜೀವನ ಸುಲಭವಾಗಲಿದೆ.
ನಿರ್ಗತಿಕರ ಸಹಾಯಕ್ಕಾಗಿ ಯುವಸತ್ತಾ ಎಂಬ ಎನ್ಜಿಒ ‘ವಾಲ್ ಆಫ್ ಕೈಂಡ್ನೆಸ್’ ಪರಿಕಲ್ಪನೆಯನ್ನು ರೂಪಿಸಿದ್ದು, ಇದನ್ನು ಸೆಪ್ಟೆಂಬರ್ 2016ರಲ್ಲಿ ಆರಂಭಿಸಲಾಯಿತು.
ಈ ಎನ್ಜಿಒ ಶಾಲೆಯೊಂದರ ಗೋಡೆಯ ಮೇಲೆ ಬಟ್ಟೆಗಳನ್ನು ದಾನ ಮಾಡಿ ಎಂಬ ನಾಮಫಲಕ ಹೊಂದಿರುವ ಪೈಪ್ ಒಂದನ್ನು ಅಳವಡಿಸಿದೆ. ಅದರ ಮೇಲೆ ‘ನಿಮಗೆ ಅಗತ್ಯವಿದ್ದಲ್ಲಿ ತೆಗೆದುಕೊಳ್ಳಿ, ಅಗತ್ಯವಿಲ್ಲದ ವಸ್ತು ಹೆಚ್ಚಿದ್ದಲ್ಲಿ ಬಿಟ್ಟು ಹೋಗಿ’ ಎಂಬ ಘೋಷವಾಕ್ಯದೊಂದಿಗೆ ಉಪಕ್ರಮವನ್ನು ಆರಂಭಿಸಿದೆ.
ಇದು ದಾನಿಗಳು ಹಾಗೂ ನಿರ್ಗತಿಕರು, ದಾನ ರೂಪದಲ್ಲಿ ನೀಡಲಾದ ಬಟ್ಟೆಗಳನ್ನು ಪಡೆಯಲು ಇಚ್ಛಿಸುವವರು ಎಲ್ಲರನ್ನೂ ಆಕರ್ಷಿಸುತ್ತಿದೆ. ಪ್ರಸ್ತುತ ಚಂಡೀಗಢದಲ್ಲಿ ಇಂತಹ 7 ‘ವಾಲ್ ಆಫ್ ಕೈಂಡ್ನೆಸ್’ಗಳಿವೆ.
ಜನರು ಈ ಉಪಕ್ರಮವನ್ನು ಬೆಂಬಲಿಸಲು ಬಟ್ಟೆಗಳಲ್ಲದೇ ಶೂಗಳು, ಚಪ್ಪಲ್ಗಳು ಮತ್ತಿತರ ಅಗತ್ಯ ವಸ್ತುಗಳನ್ನು ದಾನ ಮಾಡುತ್ತಿದ್ದಾರೆ.
ಎನ್ಜಿಒ ಯುವಸತ್ತಾ ದೇಣಿಗೆಯ ಸಂಗ್ರಹವನ್ನು ಹೆಚ್ಚಿಸಲು ಈ ಉಪಕ್ರಮವನ್ನು ವಸತಿ ಪ್ರದೇಶಗಳಲ್ಲೂ ಆರಂಭಿಸಲು ಮುಂದಾಗಿದ್ದು, ಈ ಯೋಜನೆಯನ್ನು ಇತರ ನಗರಗಳಿಗೂ ವಿಸ್ತರಿಸುವ ಗುರಿ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.