ಮುಂಬಯಿ: ಮುಂಬಯಿ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮರಾಠಾ ರಾಜ ಛತ್ರಪತಿ ಶಿವಾಜಿ ಅವರ ಭವ್ಯ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದರು.
16ನೇ ಶತಮಾನದ ಮಹಾನ್ ದೊರೆ ಶಿವಾಜಿ ಅವರ ಪ್ರಸ್ತಾಪಿತ 192 ಮೀ. (630 ಅಡಿ ಎತ್ತರ) ಪ್ರತಿಮೆ ಒಳಗೊಂಡ ಸ್ಮಾರಕವನ್ನು ಇಲ್ಲಿ ನಿರ್ಮಿಸಲಾಗುತ್ತಿದೆ.
ತಮ್ಮ ಹೋರಾಟದ ನಡುವೆಯೂ ಶಿವಾಜಿ ಮಹಾರಾಜರು ಉತ್ತಮ ಆಡಳಿತದ ವಿಧ್ಯುಕ್ತರಾಗಿದ್ದರು. ಅವರಿಗೆ ನನ್ನ ಗೌರವಪೂರ್ಣ ನಮನಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಶಿವಸೇನೆಯ ಅಧ್ಯಕ್ಷ ಉದ್ದವ್ ಠಾಕ್ರೆ ಅವರು ಕೂಡ ಈ ವೇಳೆ ಉಪಸ್ಥಿತರಿದ್ದರು.
ಅರಬ್ಬಿ ಸಮುದ್ರದಲ್ಲಿ ಈ ಭವ್ಯ ಸ್ಮಾರಕದ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಸಾಂಕೇತಿಕವಾಗಿ ‘ಭೂಮಿಪೂಜನ್’ ಹಾಗೂ ‘ಜಲಪೂಜನ್’ ನೆರವೇರಿಸಿದರು. ಇದು ವಿಶ್ವದಲ್ಲೇ ಅತಿ ಎತ್ತರದ ಸ್ಮಾರಕವಾಗಿರಲಿದೆ ಎಂದು ಹೇಳಲಾಗಿದೆ.
ಸಂಸದರಾದ ಶಿವಾಜಿ ವಂಶಸ್ಥರಾದ ಉದಯನ್ರಾಜೆ ಭೋಸಲೆ ಹಾಗೂ ಸಂಭಾಜಿ ರಾಜೆ ಈ ವೇಳೆ ಉಪಸ್ಥಿತರಿದ್ದರು. ಸಮುದ್ರದಲ್ಲಿ ‘ಕಲಶ’ವನ್ನು ಇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ನಂತರ ಶಿವಾಜಿ ಅವರ ಪಟ್ಟಾಭಿಷೇಕದ ಚಿತ್ರವೊಂದನ್ನು ಪರಿಶೀಲಿಸಿದರು.
ಈ ಯೋಜನೆ ೨೦೧೯ರಲ್ಲಿ ಪೂರ್ಣಗೊಳ್ಳುವ ಬಗ್ಗೆ ನಿರೀಕ್ಷಿಸಲಾಗಿದ್ದು, ಮಹಾರಾಷ್ಟ್ರ ಸರ್ಕಾರ ಇದರ ನಿರ್ಮಾಣಕ್ಕೆ ಸುಮಾರು ರೂ. 36 ಬಿಲಿಯನ್ ವ್ಯಯಿಸಲುದೆ ಎಂದು ಅಂದಾಜಿಸಲಾಗದೆ.
ಇದಕ್ಕೂ ಮುನ್ನ ಶಿವಾಜಿ ಸ್ಮಾರಕ್ಕೆ ಭೂಮಿ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ ಅವರು, ಈ ಅವಕಾಶ ದೊರೆತಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.