ನವದೆಹಲಿ: ಇತ್ತೀಚೆಗೆ ಬ್ಯಾಂಕ್ಗಳ ಯಾವುದೇ ಒಂದು ಖಾತೆಯಲ್ಲಿ ಡಿ.30ರ ವರೆಗೆ ರೂ. 5000ಕ್ಕಿಂತ ಮೇಲ್ಪಟ್ಟ ಮೊತ್ತವನ್ನು ಕೇವಲ ಒಂದೇ ಬಾರಿ ಠೇವಣಿ ಮಾಡಬಹುದು ಎಂಬ ಬಗ್ಗೆ ವರದಿಯಾಗಿದ್ದು, ರೂ. 5000ಕ್ಕಿಂತ ಮೇಲ್ಪಟ್ಟು ಠೇವಣಿ ಮಾಡಲು ಯಾವುದೇ ಮಿತಿ ಇಲ್ಲ. ಆದರೆ ಒಬ್ಬ ವ್ಯಕ್ತಿ ಪದೇ ಪದೇ ಹಳೆ ನೋಟುಗಳನ್ನು ಠೇವಣಿ ಮಾಡುವಂತಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.
ಬ್ಯಾಂಕ್ಗಳಲ್ಲಿ ಹಳೆ ನೋಟು ಠೇವಣಿ ಮಾಡುವ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಜನರಲ್ಲಿ ಗೊಂದಲ ಸೃಷ್ಟಿಸಿದೆ. ಈವರೆಗೆ ಕೆಲವು ವಿಭಾಗಗಳಲ್ಲಿ ಹಳೆ ನೋಟು ಠೇವಣಿಗೆ ವಿನಾಯಿತಿ ನೀಡಲಾಗಿತ್ತು. ಆದ್ದರಿಂದ ವಿನಾಯಿತಿ ನೀಡಲಾದ ಸ್ಥಳಗಳಲ್ಲಿ ಜನರು ಹಳೆ ನೋಟು ಠೇವಣಿ ಮಾಡುತ್ತಿದ್ದರು. ಪ್ರಸ್ತುತ ಈ ಎಲ್ಲ ವಿಭಾಗಗಳಲ್ಲೂ ಠೇವಣಿಗೆ ನೀಡಲಾದ ವಿನಾಯಿತಿಯನ್ನು ರದ್ದುಪಡಿಸಲಾಗಿದೆ ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಜನರು ಡಿ.19ರಿಂದ ಡಿ.30ರ ವರೆಗೆ ಹಳೆ ನೋಟುಗಳನ್ನು ಬಳಸಿ ವ್ಯವಹಾರ ನಡೆಸುವಂತಿಲ್ಲ. ಆದರೆ ಬ್ಯಾಂಕ್ಗಳಿಗೆ ಠೇವಣಿ ಮಾಡಬಹುದು. ರೂ.5000ಕ್ಕಿಂತ ಮೇಲ್ಪಟ್ಟ ಠೇವಣಿಗೆ ಯಾವುದೇ ಮಿತಿ ಇರುವುದಿಲ್ಲ. ಅಲ್ಲದೇ ಠೇವಣಿ ಮಾಡಿದಲ್ಲಿ ಯಾರೊಬ್ಬರೂ ಪ್ರಶ್ಬಿಸುವದಿಲ್ಲ. ಆದರೆ ಒಂದೇ ವ್ಯಕ್ತಿ ಪದೇ ಪದೇ ಬ್ಯಾಂಕ್ ಖಾತೆಗೆ ಠೇವಣಿ ಮಾಡಿದಲ್ಲಿ ಸಂಶಯಕ್ಕೆ ಈಡಾಗುತ್ತದೆ. ಹಾಗಾಗಿ ಒರ್ವ ವ್ಯಕ್ತಿ ಪದೇ ಪದೇ ಠೇವಣಿ ಮಾಡುವಂತಿಲ್ಲ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.