ಕಾನ್ಪುರ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಚಳಿಗಾಲದ ಸಂಸತ್ ಅಧಿವೇಶನ ಬಿಕ್ಕಟ್ಟಿಗೆ ವಿರೋಧ ಪಕ್ಷ ಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.
ದೇಶದ ಮೊದಲ ಕೌಶಲ್ಯ ಅಭಿವೃದ್ಧಿ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್, ಐಐಎಸ್) ಉದ್ಘಾಟಿಸಿದ ಬಳಿಕ ಪರಿವರ್ತನ್ ಯಾತ್ರೆ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಅವರು, ನಾನು ಉತ್ತರ ಪ್ರದೇಶದಲ್ಲಿ ಭೇಟಿ ನೀಡಿದ ಎಲ್ಲ ಭಾಗಗಳಲ್ಲೂ ರಾಜ್ಯದ ಜನತೆ ಬದಲಾವಣೆಯನ್ನು ಬಯಸಿರುವುದನ್ನು ಗಮನಿಸಿದ್ದೇನೆ. ಇದು ಜನರು ಬದಲಾವಣೆಯನ್ನು ಬಯಸಿದ ತಂಗಾಳಿಯಲ್ಲ, ಬಿರುಗಾಳಿ ಎಂದು ಹೇಳಿದ್ದಾರೆ.
ವಿರೋಧ ಪಕ್ಷವನ್ನು ತೀಎನ್ಡಿಎ ಸರ್ಕಾರ ಪ್ರಾಮಾಣಿಕರಿಂದ, ಪ್ರಮಾಣಿಕರಿಗಾಗಿ ಹಾಗೂ ಪ್ರಮಾಣಿಕರಿಗೋಸ್ಕರವಾಗಿದ್ದು, ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಮುಂದುವರೆಸಲಿದೆ. ಉತ್ತರ ಪ್ರದೇಶವನ್ನು ನೋಡುವ ಅವಕಾಶ ನನಗೆ ಸಿಕ್ಕಿದೆ. ಉತ್ತರ ಪ್ರದೇಶದಲ್ಲಾಗುತ್ತಿರುವ ಪರಿವರ್ತನೆಯನ್ನು ನೋಡುತ್ತಿದ್ದೇನೆ. ಯುವಕರೇ ದೇಶದ ಶಕ್ತಿಯಾಗಿದ್ದು, ಯುವಕರು ಕೈಜೋಡಿಸಿದಲ್ಲಿ ಭಾರತದ ಅಭಿವೃದ್ಧಿಖಚಿತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವ್ರವಾಗಿ ಟೀಕಿಸಿದ ಮೋದಿ ಅವರು, ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಕೊನೆಗೊಳಿಸುವುದು ನಮ್ಮ ಕಾರ್ಯಸೂಚಿಯಾದರೆ, ಸಂಸತ್ ಕಲಾಪವನ್ನು ಅಡ್ಡಿಪಡಿಸಿ ಕಲಾಪ ಮುಂದೂಡುವುದು ವಿಪಕ್ಷಗಳ ಅಜೆಂಡಾ ಆಗಿದೆ. ಸರ್ಕಾರ ಭ್ರಷ್ಟರನ್ನು ಬಹಿರಂಗಪಡಿಸಲು ಮಾಡುತ್ತಿದ್ದರೆ, ವಿಪಕ್ಷಗಳು ಅವರನ್ನು ಬೆಂಬಲಿಸಿ, ರಕ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ.
ವಿಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿ ಅವರು, ವಿಪಕ್ಷಗಳು ಸಂಸತ್ನಲ್ಲಿ ಗದ್ದಲ ಸೃಷ್ಟಿಸಿ, ಘೋಷಣೆಗಳನ್ನು ಕೂಗಿದರು. ಅವರ ಭ್ರಷ್ಟಾಚಾರ ಬಹಿರಂಗಗೊಳ್ಳುವ ಭಯದಿಂದ ಸ್ಪೀಕರ್ ಎದುರು ಕಾಗದಗಳನನು ಎಸೆದರು. ಪುರಸಭೆಗಳಿಗೆ ಆಯ್ಕೆಯಾದ ಸದಸ್ಯರು ಕೂಡ ಸಂಸತ್ನಲ್ಲಿ ಇಂತಹ ಕೃತ್ಯಗಳನ್ನು ನಡೆಸಲು ೫೦ ಬಾರಿ ಯೋಚಿಸುತ್ತಾರೆ ಎಂದು ಹೇಳಿದ್ದಾರೆ.
ಉತ್ತರ ಪ್ರದೆಶದ ಜನರು ಗೂಂಡಾಗಿರಿಯಿಂದ, ಕಳಪೆ ಕಾನೂನು ವ್ಯವಸ್ಥೆಯಿಂದ ಬೇಸಗೊಂಡಿದ್ದರೆ, ಅಲ್ಲಿಯ ಸರ್ಕಾರ ಗೂಂಡಾಗಳಿಗೆ ಸವಿಯಲು ಜೇನುತುಪ್ಪ ನೀಡಿ ಪೋಷಿಸುತ್ತಿದೆ. ಲಖ್ವೌದಲ್ಲಿ ಸರ್ಕಾರ ಬದಲಾಗದೆ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.