ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಲೋಕಸಭೆಯ ಬಿಕ್ಕಟ್ಟಿನಿಂದ ಸಂಭವಿಸಿದ ಸಮಯದ ನಷ್ಟವನ್ನು ಸರಿದೂಗಿಸಲು ತಮ್ಮ ಸಂಬಳ ಮತ್ತು ದೈನಂದಿನ ಭತ್ಯೆಯ ಪಾಲನ್ನು ನೀಡುವುದಾಗಿ ಬಿಜು ಜನತಾ ದಳ ಸಚಿವ ಬೈಜಯಂತ್ ಜಯ್ ಪಾಂಡಾ ಹೇಳಿದ್ದಾರೆ.
ಅವರು ಕಳೆದ ಹಲವು ವರ್ಷಗಳಿಂದ ಇದನ್ನು ಮಾಡುತ್ತಲೇ ಬಂದಿದ್ದಾರೆ.
ತಾನು ಕಳೆದ 4-5 ವರ್ಷಗಳಿಂದ ಇದನ್ನು ಮಾಡುತ್ತಲೇ ಬರುತ್ತಿದ್ದು, ಪ್ರತಿ ಸಂಸತ್ ಅಧಿವೇಶನದ ಬಳಿಕ ಲೋಕಸಭೆಯ ಸಮಯ ನಷ್ಟದ ಅನುಪಾತವನ್ನು ಸರಿದೂಗಿಸಲು ತನ್ನ ಸಂಬಳ ಮತ್ತು ದೈನಂದಿನ ಭತ್ಯೆಯ ಪಾಲನ್ನು ನೀಡುತ್ತಲಿದ್ದೇನೆ ಎಂದು ಜಯ್ ಪಾಂಡಾ ಹೇಳಿದ್ದಾರೆ.
ಸಾಂಕೇತಿಕ ಸೂಚಕದಂತೆ ನಾವು ಸಂಸತ್ನಲ್ಲಿ ಏನನ್ನು ಮಾಡಬೇಕೋ ಅದನ್ನು ಮಾಡುತ್ತಿಲ್ಲ. ನಾನು ಸಂಸತ್ ಅಧಿವೇಶನಕ್ಕೆ ಅಡ್ಡಿ ಉಂಟು ಮಾಡದೇ ಇದ್ದರೂ ಇದನ್ನು ನೀಡುತ್ತಿದ್ದೇನೆ ಎಂದು ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಸಂಸತ್ ಅಧಿವೇಶನದ ಅಡಚಣೆಯಿಂದ ದೇಶ ಬಹಳಷ್ಟು ಹಣವನ್ನು ಕಳೆದುಕೊಳ್ಳುತ್ತಿದೆ. ನನ್ನ 16 ವರ್ಷಗಳ ಅವಧಿಯಲ್ಲಿ ಒಮ್ಮಯೂ ಅಧಿವೇಶನನಕ್ಕೆ ಅಡ್ಡಿ ಪಡಿಸಿಲ್ಲ. ಅಧಿವೇಶನದ ಸಂದರ್ಭ ವ್ಯರ್ಥವಾದ ಬೃಹತ್ ಮೊತ್ತವನ್ನು ಹೋಲಿಸಿದರೆ ಇದು ಏನು ದೊಡ್ಡದಲ್ಲ. ಇದು ನನ್ನ ವೈಯಕ್ತಿಕ ಆತ್ಮಸಾಕ್ಷಿಯ ವಿಷಯವಾಗಿದೆ ಎಂದು ಜಯ್ ಪಾಂಡಾ ಹೇಳಿದ್ದಾರೆ.
ಡಿ.16ರಂದು ಕೊನೆಗೊಂಡ ಒಂದು ತಿಂಗಳ ಕಾಲದ ಚಳಿಗಾಲದ ಸಂಸತ್ ಅಧಿವೇಶನ, ಅನಾಣ್ಯೀಕರಣ ವಿಚಾರದ ಬಿಕ್ಕಟ್ಟಿನಿಂದ ಸಂಪೂರ್ಣ ವಿಫಲವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.