ನವದೆಹಲಿ: ಹಳೆಯ ನೋಟುಗಳ ನಿಷೇಧಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಅಡ್ಡಿ ಉಂಟುಮಾಡುತ್ತಿರುವ ವಿಪಕ್ಷಗಳ ಮೇಲೆ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಅವರು ಕೂಡ ನೋಟು ನಿಷೇಧ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಅದೇ ನಿಲುವನ್ನು ಕಾಂಗ್ರೆಸ್ ಇಂದಿಗೂ ಮುಂದುವರೆಸಿಕೊಂಡು ಬಂದಿದೆ ಎಂದರು.
ಇಂದಿರಾ ಗಾಂಧಿ ಆಳ್ವಿಕೆಯ ಅವಧಿಯಲ್ಲಿ ನಿರಂಜನ್ ನಾಥ್ ವಾಂಛೂ ನೇತೃತ್ವದ ಸಮಿತಿ ಅನಾಣ್ಯೀಕರಣದ ಶಿಫಾರಸ್ಸು ಮಾಡಿತ್ತು. ಆಗ ‘ನೀವು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲವೇ?’ ಎಂದು ಇಂದಿರಾ ಗಾಂಧಿ ಅವರು ವೈ.ಬಿ. ಚವಾನ್ಗೆ ಪ್ರಶ್ನಿಸಿದ್ದರು. ಅದು ಕಾಂಗ್ರೆಸ್ ರಾಜಕಾರಣವಾಗಿದ್ದು, ಅವರು ಅನಾಣ್ಯೀಕರಣನ್ನು ಕಾರ್ಯಗತಗೊಳಿಸಿರಲಿಲ್ಲ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸಂಸತ್ ಅಧಿವೇಶನ ಅಡ್ಡಿಪಡಿಸಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮೋದಿ ಅವರು, ಈ ಹಿಂದೆ ವಿಪಕ್ಷಗಳು ವಂಚನೆಗಳ ವಿರುದ್ಧ ಸಂಸತ್ ಅಧಿವೇಶನ ಸ್ಥಗಿತಗೊಳಿಸಿದ್ದ ರೀತಿಯಲ್ಲೇ ಕಾಂಗ್ರೆಸ್ ಪಕ್ಷಗಳು ಮತ್ತು ಅದರ ಮಿತ್ರ ಪಕ್ಷಗಳು ಕಪ್ಪು ಹಣ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರದ ಕ್ರಮಗಳನ್ನು ವಿರೋಧಿಸುತ್ತಿವೆ ಎಂದು ಬಿಜೆಪಿ ಸಂಸದೀಯ ಸಭೆಯಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷ ದೇಶದ ಬದಲು ಸದಾ ತನ್ನ ಪಕ್ಷದ ಒಳಿತನ್ನೇ ನೋಡುತ್ತಿದೆ. ಆದರೆ ಬಿಜೆಪಿ ಪಕ್ಷಕ್ಕೆ ದೇಶದ ಹಿತಾಸಕ್ತಿಯೇ ಸರ್ವೋಚ್ಚ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ವಿರುದ್ಧ ದಾಳಿ ಮಾಡಿದ ಮೋದಿ ಅವರು, ಸಿಂಗ್ ಅವರು ಅನಾಣ್ಯೀಕರಣದ ಬಗ್ಗೆ ಟೀಕಿಸಿದ್ದರು. ಸಿಂಗ್ ಅವರ ಅವಧಿಯಲ್ಲಿ ಕಪ್ಪು ಹಣ ಮತ್ತು ಭ್ರಷ್ಟಾಚಾರದ ಕ್ರಮಗಳನ್ನು ಪ್ರತಿಪಾದಿಸಿದ್ದರೂ ತನ್ನ ಆಳ್ವಿಕೆಯ 10 ವರ್ಷಗಳ ಅವಧಿಯಲ್ಲಿ ಏನನ್ನೂ ಮಾಡಿಲ್ಲ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಎಡಪಕ್ಷದ ಅಗ್ರಮಾನ್ಯ ನಾಯಕ ಹರ್ಕಿಧನ್ ಸಿಂಗ್ ಸುರ್ಜೀತ್ ಅವರು ಸರ್ಕಾರದ ಕ್ರಮಗಳನ್ನು ಬೆಂಬಲಿಸುವಂತೆ ಈ ವೇಳೆ ಮೋದಿ ಅವರು ಉಲ್ಲೇಖಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.