ನವದೆಹಲಿ: ಅನಾಣ್ಯೀಕರಣದ ನಂತರ ಕೇಂದ್ರ ಸರ್ಕಾರ ನಗದು ರಹಿತ ವಹಿವಾಟುಗಳತ್ತ ಕೇಂದ್ರೀಕರಿಸುತ್ತಿದ್ದು, ಕೆಲವು ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆಗಳು ಉದ್ಯೋಗಿಗಳಿಗೆ ಚೆಕ್ ಅಥವಾ ಆನ್ಲೈನ್ ಮಾದರಿಯಲ್ಲಿ ಸಂಬಳ ಪಾವವತಿಸುವಂತೆ ಅವಕಾಶ ಕಲ್ಪಿಸುವ ಬಿಲ್ವೊಂದನ್ನು ಲೋಕಸಭೆಯಲ್ಲಿ ಗುರುವಾರ ಪರಿಚಯಿಸಲಾಗಿದೆ.
ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಲೋಕಸಭೆಗೆ ಬಿಲ್ ಪರಿಚಯಿಸಿದರು.
ಉದ್ಯೋಗಿಗಳಿಗೆ ಸಂಬಳವನ್ನು ಚೆಕ್ ಅಥವಾ ನೇರವಾಗಿ ಅವರ ಖಾತೆಗೆ ವರ್ಗಾಯಿಸಿ ಪಾವತಿಸುವ ಕೈಗಾರಿಕೆಗಳು ಹಾಗೂ ಇತರ ಸಂಸ್ಥಗಳನ್ನು ರಾಜ್ಯ ಸರ್ಕಾರಗಳು ಗುರುತಿಸಲು ಈ ಬಿಲ್ ಸಹಕಾರಿಯಾಗಲಿದೆ.
ಉದ್ಯೋಗಿಗಳಿಗೆ ಕನಿಷ್ಠ ವೇತನಕ್ಕಿಂತ ಕಡಿಮೆ ಪಾವತಿ ಅಥವಾ ಸಂಬಳ ಪಾವತಿಸದೇ ಇರುವ ದೂರುಗಳನ್ನು ಕಡಿಮೆಯಾಗಿಸುವ ಬಗ್ಗೆ ಈ ಬಿಲ್ ಸೂಚಿಸುತ್ತದೆ. ಡಿಜಿಟಲ್ ಮತ್ತು ನಗದುರಹಿತ ಆರ್ಥಿಕತೆ ನಿರ್ವಹಿಸುವ ಉದ್ದೇಶದ ಬಗ್ಗೆ ಈ ಬಿಲ್ ಸೂಚಿಸುತ್ತದೆ.
ರಾಜ್ಯ ಮಟ್ಟದ ಮಸೂದೆ ತಿದ್ದುಪಡಿ ಮಾಡುವ ಮೂಲಕ ಕೇರಳ, ಆಂಧ್ರ ಪ್ರದೇಶ, ಉತ್ತರಾಖಂಡ್, ಪಂಜಾಬ್, ಹರ್ಯಾಣ ರಾಜ್ಯಗಳು ಈಗಾಗಲೇ ಚೆಕ್ ಮತ್ತು ಇಲೆಕ್ಟ್ರಾನಿಕ್ ಪಾವತಿ ಮೂಲಕ ವೇತನ ಪಾವತಿಗೆ ಅವಕಾಶ ಮಾಡಿವೆ.
ಪ್ರಸ್ತುತ ಉದ್ಯೋಗಿಯು ಅಧಿಕೃತವಾಗಿ ಲಿಖಿತ ಪತ್ರದ ಸಲ್ಲಿಸಿದಲ್ಲಿ ಮಾತ್ರವೇ ಚೆಕ್ ಅಥವಾ ಖಾತೆಗೆ ನೇರವಾಗಿ ಸಂಬಳ ವರ್ಗಾಯಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.