ನವದೆಹಲಿ: ಚಳಿಗಾಲದ ಅಧಿವೇಶನ ನವೆಂಬರ್ 16ರಂದು ಆರಂಭಗೊಂಡಿದ್ದು, ಇದೇ ಮೊದಲ ಬಾರಿಗೆ ರಾಜ್ಯಸಭೇಯಲ್ಲಿ ದಿವ್ಯಾಂಗ ವ್ಯಕ್ತಿಗಳ ಹಕ್ಕು ಶಾಸನ, 2014 ಜಾರಿಗೆ ತರಲಾಗಿದೆ.
ರಾಜ್ಯಸಭೆಯಲ್ಲಿ ಅನಾರ್ಣಯೀಕರಣ ಚರ್ಚೆಯನ್ನು ಬದಿಗೊತ್ತಿ ಸರ್ಕಾರ ಮತ್ತು ವಿಪಕ್ಷಗಳ ಸದಸ್ಯರು ಒಟ್ಟಾಗಿ ಚರ್ಚೆ ನಡೆಸಿ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ ಶಾಸನ 2014 ಜಾರಿಗೆ ತರಲು ಸಹಕರಿಸಿದರು. ಸಚಿವರು ಸದನದಲ್ಲಿ ಯಾವುದೇ ಗದ್ದಲವಿಲ್ಲದೇ ಅವಿರೋಧವಾಗಿ ಈ ನಿರ್ಣಾಯಕ ಶಾಸನ ಜಾರಿಗೆ ತರಲು ಧ್ವನಿಗೂಡಿಸಿದರು.
ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಕ್ಷಣವೇ ಈ ಬಿಲ್ ಜಾರಿಗೆ ಒಪ್ಪಿಗೆ ನೀಡಿದ್ದು, ದಿವ್ಯಾಂಗ ವ್ಯಕ್ತಿಗಳ ವಿರುದ್ಧ ತಾರತಮ್ಯ ತೋರಿದಲ್ಲಿ 2 ವರ್ಷ ಜೈಲು ಶಿಕ್ಷೆ, 5 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುವುದು.
ಚಳಿಗಾಲದ ಅಧಿವೇಶನ ಮುಕ್ತಾಯಕ್ಕೂ ಮೂರು ದಿನ ಮೊದಲು ಈ ಬಿಲ್ ಜಾರಿಯಾಗಿದ್ದು, ದಿವ್ಯಾಂಗ ವ್ಯಕ್ತಿಗಳ ಹಕ್ಕು ಮತ್ತು ಅಧಿಕಾರದ ಭಧ್ರತೆಯ ಗುರಿಯೊಂದಿಗೆ ಜಾರಿಗೆ ತರಲಾಗಿದೆ. ದಿವ್ಯಾಂಗ ವ್ಯಕ್ತಿಗಳ ವಿರುದ್ಧ ತಾರತಮ್ಯ ತೋರಿದಲ್ಲಿ ಕನಿಷ್ಠ 6 ತಿಂಗಳಿನಿಂದ 2 ವರ್ಷದ ವರೆಗೆ ಜೈಲು ಶಿಕ್ಷೆ, ಜೊತೆಗೆ ರೂ.10,000ದಿಂದ 5 ಲಕ್ಷದ ವರೆಗೆ ದಂಡ ಅನುಭವಿಸಬೇಕಿದೆ.
ಈ ಬಿಲ್ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ ಯುಎನ್ ಕನ್ವೆನ್ಷನ್ನ ಮತ್ತು ಸಂಬಂಧಿತ ವಿಷಯಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.