ಕೌಲಾಲಂಪುರ: ಸುಧಾರಣಾ ವ್ಯವಸ್ಥೆ, ಭ್ರಷ್ಟಾಚಾರ ಮತ್ತು ಕಪ್ಪು ಹಣ ತಡೆ ನನ್ನ ಕಾರ್ಯಸೂಚಿಯ ಪ್ರಮುಖ ಅಂಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಏಷ್ಯನ್ ಬಿಸಿನೆಸ್ ಲೀಡರ್ಸ್ ಕಾಂಕ್ಲೇವ್ 2016 ಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಪ್ರಸ್ತುತ ಆರ್ಥಿಕ ರೂಪಾಂತರಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ನಮ್ಮ ಪ್ರಯತ್ನಗಳ ಪರಿಣಾಮಗಳನ್ನು ಭಾರತದ ಜಾಗತಿಕ ಶ್ರೇಯಾಂಕದ ವಿವಿಧ ಸೂಚಕಗಳಿಂದ ತಿಳಿಯಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತ ಒಂದು ಉತ್ತಮ ತಾಣ ಮಾತ್ರಲ್ಲ. ಭಾರತದಲ್ಲಿರುವುದು ಒಂದು ಉತ್ತಮ ನಿರ್ಧಾರವೂ ಹೌದು. ಇದು ಏಕೀಕರಣದ ಸಮಯ. ಮುಕ್ತ ಸಮಗ್ರ ಆರ್ಥಿಕತೆಗೆ ಭಾರತ ಸೇರಿದೆ. ಜಾರಿ ನಿರ್ಬಂಧಗಳನ್ನು ತೆಗೆದು ಹಾಕುವಲ್ಲಿ ಗಮನ ಹರಿಸಲಾಗುತ್ತಿದೆ. ದೇಶದಾದ್ಯಂತ ರಸ್ತೆ, ರೈಲ್ವೆ ಮತ್ತು ಬಂದರುಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಮೂಲಸೌಕರ್ಯ ಅಭಿವೃದ್ಧಿ ನಾವು ಕೈಗೆತ್ತಿಕೊಂಡಿರುವ ಮಹತ್ಕಾರ್ಯವಾಗಿದೆ. ಭಾರತದಲ್ಲಿ ಪಂಚಕೋನ ಮಾದರಿಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯ ಸಾಂವಿಧಾನಿಕ ತಿದ್ದುಪಡಿ ಬಿಲ್ ಜಾರಿಗೆ ತರಲಾಗಿದ್ದು, ಇದು 2017ರಲ್ಲಿ ಜಾರಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತ ಈಗ ವಿಶ್ವದಲ್ಲೇ ಬೃಹತ್ ಉತ್ಪಾದನಾ ರಾಷ್ಟ್ರವಾಗಿ ಮಾರ್ಪಟ್ಟಿದೆ. ಮೇಕ್ ಇನ್ ಇಂಡಿಯಾ ತನ್ನ 2ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಭಾರತವನ್ನು ಉತ್ಪಾದನೆ, ವಿನ್ಯಾಸ ಮತ್ತು ಸಂಶೋಧನೆಯ ಜಾಗತಿಕ ಕೇಂದ್ರವನ್ನಾಗಿಸುವ ಗುರಿ ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಮುಖ ಎಫ್ಡಿಐ ಸುಧಾರಣೆ ನೀತಿಯಲ್ಲಿ ಸುಧಾರಣೆಯ ಸತತ ಪ್ರಯತ್ನಗಳು ಮುಂದುವರೆಯಲಿದ್ದು, ಹೂಡಿಕೆ ಮೇಲಿನ ನಿರ್ಬಂಧಗಳನ್ನು ಸರಳೀಕರಿಸಲಾಗಿದೆ. ಭಾರತದ ನೀತಿ, ನಿಯಂತ್ರಣ ಮತ್ತು ಹೂಡಿಕೆ ಪರಿಸರವು ದೇಶಿಯ ಮತ್ತು ವಿದೇಶಿ ಹೂಡಿಕೆದಾರರಿಂದ ಗುರುತಿಸಲ್ಪಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.