ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಸತ್ನಲ್ಲಿ ಕಳೆದ ೧೫ ದಿನಗಳಿಂದ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ವಿಪಕ್ಷಗಳು ಬಹುಮತದ ಮತದಾನಕ್ಕೆ ಈಡುಮಾಡದೇ ಅನಾಣ್ಯೀಕರಣ ವಿಚಾರದ ಬಗ್ಗೆ ಚರ್ಚಿಸಲು ಒಪ್ಪಿಕೊಂಡಿವೆ.
ಸಂಸತ್ನಲ್ಲಿ ಕಳೆದ ೧೫ ದಿನಗಳಿಂದ ವಿಪಕ್ಷಗಳು ಏರಡೂ ಸದನಗಳ ಚರ್ಚೆಗೆ ಅಡ್ಡಿ ಉಂಟು ಮಾಡಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಧ್ಯಸ್ಥಿಕೆ ವಹಿಸುವಂತೆ ಹೇಳಿದ್ದರು.
ನಣ್ಯೀಕರಣದ ಕುರಿತ ಚರ್ಚೆ ವೇಳೆ ಲೋಕಸಭೆ ಮತ್ತು ರಾಜ್ಯಸಭೆ ಈ ಎರಡೂ ಸದನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಾಜರಿರುವಂತೆ ವಿಪಕ್ಷಗಳು ಆಗ್ರಹಿಸಿದ್ದರು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಸತ್ ಸದನವು ಅಲ್ಪಸಂಖ್ಯಾತ ಪಕ್ಷಗಳು ಬಹುಸಂಖ್ಯಾತ ಪಕ್ಷದ ಮೇಲೆ ಕಡಿವಾಣ ಹಾಕಲು ಧರಣಿ ನಡೆಸಿ ಚರ್ಚೆ ಅಡ್ಡಿ ಉಂಟು ಮಾಡುವ ಸ್ಥಳವಲ್ಲ ಎಂದು ಹೇಳಿದ್ದರು.
ಸಂಸದರು ವ್ಯವಹಾರಗಳನ್ನು ನಿರ್ವಹಿಸುವ ಬಗ್ಗೆ ಚರ್ಚೆಗಳನ್ನು ನಡೆಸಲು ಇರುವವರೇ ಹೊರತು ಅಡ್ಡಿಪಡಿಸುವುದಕಲ್ಲ ಎಂದು ಹೇಳಿದ್ದರು.
ಸಂಸದೀಯ ವ್ಯವಸ್ಥೆಯಲ್ಲಿ ಬಿಕ್ಕಟ್ಟು ಸಂಪೂರ್ಣವಾಗಿ ಅಸ್ವೀಕಾರ್ಹವಾದುದು. ಜನರು ಪ್ರತಿನಿಧಿಗಳನ್ನು ಚರ್ಚೆ ನಡೆಸಲು ಕಳುಹಿಸುತ್ತಾರೆಯೇ ಹೊರತು ಧರಣಿಗೆ ಕುಳಿತು ತೊಂದರೆ ನೀಡುವುದಕ್ಕಲ್ಲ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಕಾಂಗ್ರೆಸ್ ಉಪಧ್ಯಕ್ಷ ರಾಹುಲ್ ಗಾಂಧಿ ವಿರೋಧ ಪಕ್ಷದ ನೇತೃತ್ವ ವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸದನದ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.