ನವದೆಹಲಿ: ಬ್ಯಾಂಕಿಂಗ್ ವ್ಯವಸ್ಥೆಗೆ ಠೇವಣಿ ಮಾಡದ ಹಳೆ ನೋಟುಗಳ ಲಾಭಾಂಶವನ್ನು ಕೇಂದ್ರ ಬ್ಯಾಂಕ್ನಿಂದ ಸರ್ಕಾರ ಪಡೆಯಲಿದೆ ಎಂಬ ಊಹಾಪೋಹಗಳನ್ನು ತಳ್ಳಿ ಹಾಹಿದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್, ಸರ್ಕಾರ ಇದರಿಂದ ಯಾವುದೇ ಲಾಭಾಂಶ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಆರ್ಬಿಐ ಹೊಂದಲಿರುವ ಹಳೆ ನೋಟುಗಳ ಲೆಕ್ಕಾಚಾರ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿ ಬಾರದೇ ಇದ್ದು, ಇದರ ಲಾಭಾಂಶವನ್ನು ಆರ್ಬಿಐ ಸರ್ಕಾರಕ್ಕೆ ನೀಡಲಿದೆ ಎಂಬ ವಿಚಾರದಲ್ಲಿ ಊಹೆಗಳು ಉಂಟಾಗಿದೆ.
ನಿಷೇಧಿತ ಹಳೆ ನೋಟುಗಳು ಚಲಾವಣೆಯಲ್ಲಿ ಇಲ್ಲದೇ ಇದ್ದರೂ, ಅದರ ಕಾನೂನಾತ್ಮಕ ವಿಶಿಷ್ಠ ದರ್ಜೆಯನ್ನು ರದ್ದುಗೊಳಿಸುವ ವರೆಗೆ ಆರ್ಬಿಐ ಅದರ ಹೊಣೆಗಾರಿಕೆ ವಹಿಸಲಿದೆ ಎಂದು ಊರ್ಜಿತ್ ಪಟೇಲ್ ಹೇಳಿದ್ದಾರೆ.
ಹಳೆ ನೋಟುಗಳು ಕಾನೂನಾತ್ಮಕ ದರ್ಜೆಯನ್ನು ಹಿಂಪಡೆಯುವುದರಿಂದ ಆರ್ಬಿಐಯ ಆಯವ್ಯಯದಲ್ಲಿ ಯವುದೇ ಬದಲಾವಣೆ ಆಗುವುದಿಲ್ಲ. ಆದ್ದರಿಂದ ಆಯವ್ಯಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಆರ್ಬಿಐ ಹೊಸ ನೋಟುಗಳನ್ನು ಮುದ್ರಿಸುತ್ತಿದ್ದರೂ, ದಾಖಲೆರಹಿತ ಹಳೆ ನೋಟುಗಳ ಲಾಭಾಂಶವನ್ನು ಸರ್ಕಾರಕ್ಕೆ ವರ್ಗಾಯಿಸುತ್ತಿಲ್ಲ. ಬದಲಾಗಿ ಕೇಂದ್ರ ಬ್ಯಾಂಕ್ ಭವಿಷ್ಯದಲ್ಲಿ ಸಂಭವನೀಯ ಬಾಧ್ಯತೆಯನ್ನು ಪೂರೈಸಲು ಇದನ್ನು ಮೀಸಲಿಡಲಿದೆ ಎಂದು ರೇಟಿಂಗ್ಸ್ನ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.