ನವದೆಹಲಿ: ಕತಾರ್ನಲ್ಲಿ ಹೈಡ್ರೋಕಾರ್ಬನ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಕತಾರ್ ಪ್ರಧಾನಿ ಶೇಖ್ ಅಬ್ದುಲ್ಲಾ ಬಿನ್ ನಾಸರ್ ಬಿನ್ ಖಲೀಫಾ ಅಲ್ ಥಾನಿ ಅವರು ದ್ವಿಪಕ್ಷೀಯ ಮಾತುಕತೆಗಾಗಿ ಭಾರತಕ್ಕೆ ಆಗಮಿಸಿದ್ದು, ಈ ವೇಳೆ ಪ್ರಧಾನಿ ಮೋದಿ ಅವರು ಇಂಧನ ವಲಯದಲ್ಲಿ ಹೂಡಿಕೆ ಮಾಡುವ ಭಾರತದ ಉತ್ಸುಕತೆ ಬಗ್ಗೆ ವಿವರಿಸಿದ್ದಾರೆ.
ಭಾರತ ಮತ್ತು ಕತಾರ್ ನಡುವೆ ಭದ್ರತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ವೃದ್ಧಿಸುವುದು, ವಿಶೇಷವಾಗಿ ಸೈಬರ್ ಭದ್ರತೆ ಹಾಗೂ ಹಣ ದುರುಪಯೋಗ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಸಹಾಯ ತಡೆಯುವ ಬಗ್ಗೆ ಒಪ್ಪಂದ ಮಾಡಿಕೊಂಡಿವೆ.
ದ್ವಿಪಕ್ಷೀಯ ಮಾತುಕತೆ ಬಳಿಕ ಎರಡೂ ರಾಷ್ಟ್ರಗಳು ವೀಸಾ, ಸೈಬರ್ ಭದ್ರತೆ, ವಿವಿಧ ಹೂಡಿಕೆ ಸೇರಿದೆಂತೆ ಒಟ್ಟು ೫ ಒಪ್ಪಂದಗಳಿಗೆ ಸಹಿ ಹಾಕಿವೆ.
ಎರಡೂ ರಾಷ್ಟ್ರಗಳು ವ್ಯಾಪಾರ, ಖರೀದಿ ಹೊರತುಪಡಿಸಿ ಅಭಿವೃದ್ಧಿ, ಸಂಶೋಧನೆ, ಜಂಟಿ ಸಂಶೋಧನೆ, ಇಂಧನ ಶೋಧ, ಜಂಟಿ ಹೂಡಿಕೆ, ಭಾರತದ ಮೂಲಸೌಕರ್ಯ ಮತ್ತು ಇಂಧನ ವಲಯದಲ್ಲಿ ಕತಾರ್ನ ಹೂಡಿಕೆ ಅವಕಾಶಗಳ ಬಗ್ಗೆ ಮೋದಿ ಅವರು ಒತ್ತು ನೀಡಿದ್ದಾರೆ.
ಭಾರತದ ಆರ್ಥಿಕತೆ ಅಭಿವೃದ್ಧಿಗೆ ಭಾರತ ಸರ್ಕಾರ ಕೈಗೊಂಡ ಕೆಲವು ಪ್ರಮುಖ ಕ್ರಮಗಳು ಮತ್ತು ವಿದೇಶಿ ನೇರ ಹೂಡಿಕೆ (ಎಫ್ಡಿಐ)ಯನ್ನು ಸ್ವಾಗತಿಸಿದ್ದಾರೆ. ಎರಡೂ ನಾಯಕರು ಸಹಕಾರ ಕ್ಷೇತ್ರದ ವೃದಿಗೆ ನಾಗರಿಕ ವಿಮಾನಯಾನವನ್ನು ಪ್ರಮುಖ ಆದ್ಯತೆಯ ಎಂದು ಗುರುತಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.