ಅಮೃತಸರ: ಎರಡು ದಿನಗಳ ಬಹುಪಕ್ಷೀಯ ಜಾಗತಿಕ ಶೃಂಗಸಭೆ ‘ಹಾರ್ಟ್ ಆಫ್ ಏಷ್ಯಾ’ಗೆ ಪಂಜಾಬ್ನ ಅಮೃತಸರದಲ್ಲಿ ಶನಿವಾರ ಚಾಲನೆ ನೀಡಲಾಗಿದೆ. ಯುದ್ಧ ಪೀಡಿತ ಅಫ್ಘಾನಿಸ್ಥಾನದ ಸ್ಥಿರತೆ ಕಾಪಾಡುವ ಬಗ್ಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.
ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಸ್ವಸ್ಥರಾಗಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಫ್ಘಾನಿಸ್ಥಾನ ಅಧ್ಯಕ್ಷ ಅಶ್ರಫ್ ಘನಿ ಅವರು ರವಿವಾರ ಸಚಿವರ ಸಭೆಯನ್ನು ಉದ್ಘಾಟಿಸಲಿದ್ದು, ಇದು ಆರನೇ ಶೃಂಗಸಭೆಯಾಗಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಅಫ್ಘಾನ್ ವಿದೇಶಾಂಗ ಸಚಿವ ಸಲಾಹುದ್ದೀನ್ ರಬ್ಬಾನಿ ಜಂಟಿ ಅಧ್ಯಕ್ಷತೆಯಲ್ಲಿ ಸಚಿವರ ಸಭೆ ನಡೆಯಲಿದೆ. ಪಾಕಿಸ್ಥಾನ ಪ್ರಧಾನಿ ನವಾಜ್ ಶರೀಫ್ ಅವರ ವಿದೇಶ ನೀತಿಗಳ ಸಲಹೆಗಾರ ಸರ್ತಾಜ್ ಅಜೀಜ್ ಅವರು ಏಷ್ಯಾದ ೧೪ ರಾಷ್ಟ್ರಗಳ ಸಚಿವರ ಸಮ್ಮೇಳನಕ್ಕೆ ಭಾನುವಾರ ಅಮೃತಸರಕ್ಕೆ ಆಗಮಿಸಲಿದ್ದಾರೆ.
ಈ ವೇಳೆ ಭಾರತ ಮತ್ತು ಪಾಕಿಸ್ಥಾನ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರಗಳ ನಡುವೆ ವಿಶ್ವಾಸ ಹೆಚ್ಚಿಸುವ ಕುರಿತು ಕ್ರಮಗಳನ್ನು ಬಲಪಡಿಸುವುದು, ಭಯೋತ್ಪಾದನೆ ಮತ್ತು ಮಾದಕ ದ್ರವ್ಯ ನಿರ್ಮೂಲನೆ, ಅಫ್ಘಾನಿಸ್ಥಾನದಲ್ಲಿ ವ್ಯಾಪಾರ, ವಾಣಜ್ಯ ಮತ್ತು ಹೂಡಿಕೆ ಅವಕಾಶಗಳನ್ನು ವಿಸ್ತರಿಸುವುದು ಈ ಸಭೆಯ ಮುಖ್ಯ ಗುರಿಯಾಗಿದೆ ಎಂದು ನವೆಂಬರ್ 2011ರಲ್ಲಿ ಇಸ್ತಾನ್ಬುಲ್ ನಲ್ಲಿ ಸ್ಥಾಪಿಸಲಾದ ಹಾರ್ಟ್ ಆಫ್ ಏಷ್ಯಾ ಸಮ್ಮೇಳನದ ಆಯೋಜಕರಾದ ಹಾರ್ಟ್ ಆಫ್ ಏಷ್ಯಾ-ಇಸ್ತಾನ್ಬುಲ್ ಪ್ರೋಸೆಸ್ ಹೇಳಿದ್ದಾರೆ.
ರಷ್ಯಾ, ಚೀನಾ, ಅರಬ್, ಇರಾನ್ ಹಾಗೂ ಬೆಂಬಲಿಗ ರಾಷ್ಟ್ರಗಳಾದ ಅಮೇರಿಕಾ, ಫ್ರಾನ್ಸ್, ಯೂರೋಪ್ ಮ್ತಿತರ ರಾಷ್ಟ್ರಗಳ 40ಕ್ಕೂ ಹೆಚ್ಚು ವಿದೇಶಿ ಸಚಿವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.