ನವದೆಹಲಿ: ಅನಾಣ್ಯೀಕರಣದ ನಿರ್ಧಾರದಿಂದ ಕೆಲವು ತೊಂದರೆಗಳು ಉಂಟಾದರೂ, ಮುಂಬರುವ ದಿನಗಳಲ್ಲಿ ದೀರ್ಘಕಾಲದ ಪ್ರಯೋಜನಗಳಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ ಜೆಟ್ಲಿ ಶುಕ್ರವಾರ ಹೇಳಿದ್ದಾರೆ.
ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮಾಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ, ಅನಾಣ್ಯೀಕರಣದ ಕಾರಣದಿಂದ ಭಾರತದ ಆರ್ಥಿಕ ಸ್ಥಿತಿ ಆತಂಕದಲ್ಲಿದೆ ಎನ್ನುವ ವಿರೋಧ ಪಕ್ಷಗಳ ವಾದವನ್ನು ಅವರು ತಳ್ಳಿಹಾಕಿದ್ದಾರೆ.
ನೋಟು ಭದ್ರತಾ ಮುದ್ರಣಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ ಆದರೆ ಆರ್ಬಿಐ ಇದನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದು ಜೆಟ್ಲಿ ಅವರು ಹೇಳಿದ್ದಾರೆ.
2 ಲಕ್ಷ ಎಟಿಎಮ್ಗಳ ಪೈಕಿ ಶೇ.90ರಷ್ಟು ಅಂದರೆ ಸುಮಾರು 1.80ಲಕ್ಷ ಎಟಿಎಮ್ಗಳು ಹೊಸ 500 ರೂ. ಮತ್ತು 2000 ರೂ. ಮುಖಬೆಲೆಯ ನೋಟುಗಳ ವಿತರಣೆಗೆ ಮರು ಮಾಪನ ಮಾಡುತ್ತಿವೆ ಎಂದು ಎಟಿಎಂ ತಯಾರಕ ಕಂಪನಿ ಎನ್ಸಿಆರ್ ಕಾರ್ಪೋರೆಷನ್ನ ವ್ಯವಸ್ಥಾಪಕ ನಿರ್ದೇಶಕ ನವರೋಜ್ ದಸ್ತೂರ್ ನಿನ್ನೆ ಹೇಳಿದ್ದಾರೆ.
ಅನಾಣ್ಯೀಕರಣದ ನಂತರ ವ್ಯಾಪಾರ ಮತ್ತು ವ್ಯವಹಾರಗಳು ವೃದ್ಧಿಸಲಿದ್ದು, ಕಾಗದದ ನಗದು ವಹಿವಾಟು ಕಮ್ಮಿಯಾಗಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
ದೇಶವು ಈ ನಿರ್ಧಾರವನ್ನು ಸ್ವಾಗತಿಸಿದೆ ಹಾಗೂ ಬರುವ ದಿನಗಳಲ್ಲಿ ಎದುರಿಸಬೇಕಾದ ಕೆಲವು ಅಡ್ಡಿಗಳನ್ನು ಅಂದಾಜಿಸಲು ಕಷ್ಟ. ಆದರೆ ಅದರ ಪರಿಣಾಮ ಬಹಳ ದಿನಗಳವರೆಗೆ ಇರಲಾರದು. ನಾವು ರಿಯಲ್ ಟೈಮ್ ಮಾಹಿತಿಗಳ ಹಂಚಿಕೆ ಖಚಿತಪಡಿಸಲು ಅಂತಾರಾಷ್ಟ್ರೀಯ ಹಣಕಾಸು ಸಹಕಾರ ಮಟ್ಟದಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.