ನವದೆಹಲಿ : ರೂ. 500 ಮತ್ತು 1000 ಮುಖಬೆಲೆಯ ನೋಟು ನಿಷೇಧದಿಂದಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿಪಕ್ಷಗಳು ‘ಆಕ್ರೋಶ್ ದಿವಸ್’ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿವೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ದೇಶದೆಲ್ಲೆಡೆ ‘ಸಂಭ್ರಮ ದಿವಸ್’ ಹೆಸರಿನಲ್ಲಿ ಸಂಭ್ರಮಾಚರಣೆ ನಡೆಸುತ್ತಿವೆ.
ದೇಶದ ನಾನಾ ಭಾಗಗಳಲ್ಲಿ ಸಂಭ್ರಮ ದಿವಸ್ ಆಚರಣೆ ನಡೆಯುತ್ತಿದ್ದು, ಕಪ್ಪು ಹಣ, ಭ್ರಷ್ಟಾಚಾರ, ಭಯೋತ್ಪಾದನೆಯ ವಿರುದ್ಧ ಕಠಿಣ ನಿಲುವು ತಾಳಿರುವ ಕೇಂದ್ರ ಸರ್ಕಾರದ ನೋಟು ನಿಷೇಧದ ನಿಲುವನ್ನು ಬೆಂಬಲಿಸಿ ಅನೇಕರು ಇಂದು ವಿಪಕ್ಷಗಳು ಕರೆ ನೀಡಿದ್ದ ಆಕ್ರೋಶ್ ದಿವಸಕ್ಕೆ ಬೆಂಬಲ ನೀಡಲಿಲ್ಲ. ಬೆಂಬಲ ನೀಡದೆ, ನೋಟು ನಿಷೇಧದ ನಿಲುವನ್ನು ಸ್ವಾಗತಿಸಿ, ಮೋದಿಯವರ ದಿಟ್ಟ ನಿಲುವಿಗೆ ಬೆಂಬಲ ನೀಡಿರುವ ಜನರಿಗೆ ಬಿಜೆಪಿ ಮತ್ತು ಯುವಾ ಬ್ರಿಗೇಡ್ ಸಂಘಟನೆಯ ಕಾರ್ಯಕರ್ತರು ಎಲ್ಲೆಡೆ ಸಿಹಿ ಹಂಚಿ ಸಂಭ್ರಮ ದಿನವನ್ನಾಗಿ ಆಚರಣೆ ಮಾಡಿದ್ದಾರೆ.
ಅನೇಕ ಸಾರ್ವಜನಿಕ ಸ್ಥಳಗಳು, ಬ್ಯಾಂಕ್, ಅಂಚೆ ಕಛೇರಿ, ಮುಂತಾದೆಡೆ ಪಕ್ಷ ಮತ್ತು ಸಂಘಟನೆಯ ಕಾರ್ಯಕರ್ತರು ತೆರಳಿ ಜನರಿಗೆ ಸಿಹಿ ಹಂಚಿ ಸಂಭ್ರಮಾಚರಿಸಿದರು.
ಮಂಗಳೂರಿನ ಬಂಟ್ವಾಳದಲ್ಲೂ ಬಿಜೆಪಿ ಕಾರ್ಯಕರ್ತರು ಕೆಲವು ಕಛೇರಿಗಳಿಗೆ ತೆರಳಿ ಸಿಹಿ ವಿತರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.