ನವದೆಹಲಿ : ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದ ನೋಟು ನಿಷೇಧ ನಿರ್ಧಾರವನ್ನು ದೇಶದ ಶೇ. 80 ಕ್ಕಿಂತ ಹೆಚ್ಚು ಜನರು ಇದನ್ನು ಸ್ವಾಗತಿಸಿದ್ದಾರೆ ಎಂದು ಸಿ-ವೋಟರ್ ನಡೆಸಿದ ಸಮೀಕ್ಷೆ ಹೇಳಿದೆ.
ನೋಟು ರದ್ದತಿಯಿಂದ ಅಲ್ಪ ಸ್ವಲ್ಪ ಅನಾನುಕೂಲತೆಗಳು ಆಗಿದ್ದರೂ ಕಪ್ಪು ಹಣ ವಾಪಸ್ ತರಲು ಸಹಕಾರಿಯಾಗಿದೆ ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಜನರು ತಿಳಿಸಿದ್ದಾರೆ.
ಭಾರತದಲ್ಲಿ ಅಂತರಾಷ್ಟ್ರೀಯ ಕೇಂದ್ರ ಕಛೇರಿಯನ್ನು ಹೊಂದಿರುವ ಸಿ-ವೋಟರ್ ಸಂಸ್ಥೆ, ಲೋಕಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆಯನ್ನು ನಡೆಸಿತ್ತು ಎಂದು ವರದಿಯಾಗಿದೆ.
ವಸತಿ ಪ್ರದೇಶ, ಆದಾಯ ಮಟ್ಟ ಅಥವಾ ವಯಸ್ಸಿನ ಆಧಾರದ ಮೇಲೆ ವಿಂಗಡಿಸಿ ನೋಡಿದರೂ ದೇಶದೆಲ್ಲೆಡೆ ನೋಟು ರದ್ದತಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಶೇ. 86 ರಷ್ಟು ಜನರು ಈ ನಿರ್ಧಾರವನ್ನು ಬೆಂಬಲಿಸಿದ್ದು, ಆಗಿರುವ ತೊಂದರೆಗಳು ಮುಂದಿನ ದಿನಗಳಲ್ಲಿ ಲಾಭದಾಯಕವಾಗಿರಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅರೆ-ನಗರದ ಶೇ. 80.6 ರಷ್ಟು ಜನರು ಇದೇ ಅಭಿಪ್ರಾಯ ಹೊಂದಿದ್ದಾರೆ.
ಹೆಚ್ಚು ಆದಾಯ ಮಟ್ಟ ಹೊಂದಿರುವ ಜನರು ಅತೀ ಹೆಚ್ಚಿನ ಬೆಂಬಲ ನೀಡಿದ್ದಾರೆ ಅದು ಶೇ. 90.6 ರಷ್ಟು ಆಗಿದೆ.
ಈ ಸಮೀಕ್ಷೆಯಲ್ಲಿ ನಗರದ 71 % ಜನ, ಅರೆ-ಗ್ರಾಮೀಣ ಪ್ರದೇಶದ 65.1% ಜನರು ಹಾಗೂ 59.4% ರಷ್ಟು ಗ್ರಾಮೀಣದ ಜನರು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ.
ನೋಟು ನಿಷೇಧ ಒಳ್ಳೆಯ ನಡೆ ಆಗಿದ್ದರೂ ಇದನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ ಎನ್ನುವ ಪ್ರಶ್ನೆಗೆ ಶೇ. 23.8 ರಷ್ಟು ನಗರದ, ಶೇ. 24.3 ರಷ್ಟು ಅರೆ-ನಗರದ ಮತ್ತು 36% ಗ್ರಾಮೀಣ ಭಾಗದ ಜನರು ಪ್ರತಿಕ್ರಿಯಿಸಿದ್ದಾರೆ.
ಸಿ ವೋಟರ್ನ ಈ ಸಮೀಕ್ಷೆಯಲ್ಲಿ ’ನೋಟು ರದ್ದತಿಯಿಂದ ಆಗಿರುವ ತೊಂದರೆಗಳು ಸಣ್ಣದಾಗಿದ್ದು, ಸುಲಭವಾಗಿ ನಿಭಾಯಿಸಬಹುದು’ ಎಂದು ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.