ನವದೆಹಲಿ: ಕೇಂದ್ರ ಸರ್ಕಾರ ಬ್ಯಾಂಕ್ ಲಾಕರ್ಗಳು ಮತ್ತು ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಳ್ಳುವುದು ಎಂಬ ವದಂತಿಗಳು ಕೇಳಿ ಬರುತ್ತಿವೆ. ಈ ವದಂತಿಗಳು ಸುಳ್ಳು ಎಂದು ಹಣಕಾಸು ಸಚಿವ ಅರುಣ ಜೇಟ್ಲಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ನೋಟು ನಿಷೇಧದ ನಂತರ ಸರ್ಕಾರ ಮುಂದಿನ ಕ್ರಮವಾಗಿ ಬ್ಯಾಂಕ್ ಲಾಕರ್ಗಳು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಿದೆ ಎಂಬ ಸುಳ್ಳು ವದಂತಿಗಳು ಹರಡಿವೆ. ಇದು ಆಧಾರರಹಿತವಾದುದು ಮತ್ತು ಕೇವಲ ಕಟ್ಟು ಕಥೆಯಾಗಿದೆ. ಆದರೆ ಸರ್ಕಾರಕ್ಕೆ ಆ ರೀತಿಯ ಕ್ರಮ ಕೈಗೊಳ್ಳುವಂತೆ ಯಾವುದೇ ಉದ್ದೇಶವಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಹೊಸ ರೂ.2,000 ನೋಟಿನ ಬಣ್ಣ ಹೋಗುತ್ತಿರುವ ಮಾತುಗಳು ಸುಳ್ಳು. 2000 ರೂ. ನೋಟು ಸುರಕ್ಷತಾ ವೈಶಿಷ್ಟಗಳನ್ನು ಹೊಂದಿದ್ದು, ಮುದ್ರಣ ತಂತ್ರಗಳನ್ನು ಹೊಂದಿರುವ ‘ಇಂಟಾಗ್ಲಿಯೋ’ ವಿನ್ಯಾಸದಿಂದ ತಯಾರಿಸಲಾಗಿದೆ. ಎಂದು ಸಚಿವಾಲಯ ಹೇಳಿದೆ.
ಅಸಲಿ ನೋಟನ್ನು ಬಟ್ಟೆಗೆ ಉಜ್ಜಿದಾಗ ಟರ್ಬೋ ವಿದ್ಯುತ್ ಉತ್ಪತ್ತಿಯಾಗುತ್ತದೆ. ಇದರ ಪರಿಣಾಮ ಬಟ್ಟೆಗೆ ನೋಟಿನ ಬಣ್ಣ ಅಂಟಿಕೊಳ್ಳುತ್ತದೆ. ಈ ಮೂಲಕ ಅಸಲಿ ನೋಟುಗಳನ್ನು ಗುರುತಿಸಬಹುದು ಎಂದು ಸಚಿವಾಲಯವು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.