ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ನಡೆಯಿಂದ ಪಾಕಿಸ್ಥಾನದ ಐಎಸ್ಐ ಸಂಘಟನೆಯ ಖೋಟಾ ನೋಟು ಮುದ್ರಣ ನೆಟ್ವರ್ಕ್ಗೆ ಭಾರೀ ಹೊಡೆತ ಬಿದ್ದಿದೆ ಎನ್ನಲಾಗಿದೆ.
ಫಸ್ಟ್ ಪೋಸ್ಟ್ನ ಒಂದು ವರದಿ ಪ್ರರದಿ ಪ್ರಕಾರ ಪ್ರಧಾನಿ ಮೋದಿ ಅವರ ಕಪ್ಪು ಹಣದ ವಿರುದ್ಧದ ನಡೆಯಿಂದ ರಾವಲ್ಪಿಂಡಿಯಲಲಿರುವ ಐಎಸ್ಐ ಪ್ರಧಾನ ಕಚೇರಿಯ ಒಂದು ವಿಭಾಗ ನಿಷ್ಕ್ರಿಯಗೊಂಡಿದೆ.
ರಾವಲ್ಪಿಂಡಿಯಲ್ಲಿ ಬಬ್ಬರ್ ಖಾಲಾ, ಇಂಡಿಯನ್ ಮುಜಾಹಿದ್ದೀನ್, ಖಲೀಸ್ಥಾನ್ ಜಿನಾಬಾದ್ ಫೋರ್ಸ್ ಮತ್ತಿತರ ಉಗ್ರ ಸಂಘಟನೆಗಳ ಮುಖಂಡರು ಸಭೆ ನಡೆಸಿ ಭಾರತೀಯ ಆರ್ಥಿಕ ವ್ಯವಸ್ಥೆಯಲ್ಲಿ ಖೋಟಾ ನೋಟು ಸೇರ್ಪಡೆಗೆ ಪ್ರಯತ್ನಿಸಿದ್ದರು ಎನ್ನಲಾಗಿದೆ.
ಭಾರತದಲ್ಲಿ ಆರ್ಥಿಕ ಅಸ್ಥಿರತೆಯ ತರುವ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಒದಗಿಸುವುದು ಇದರ ಉದ್ದೇಶವಾಗಿದೆ. ಪಾಕಿಸ್ಥಾನದ ಉತ್ತಮ ಗುಣಮಟ್ಟದ ಫೇಕ್ ಇಂಡಿಯನ್ ಕರೆನ್ಸಿ ನೋಟ್ಗಳ ಕೋಡ್ ವರ್ಡ್ ‘ಆರ್ಬಿಐ’-ಭಾರತೀಯ ರಿಸರ್ವ್ ಬ್ಯಾಂಕ್ ಆಗಿತ್ತು ಎಂದು ವರದಿ ತಿಳಿಸಿದೆ.
ಐಎಸ್ಐ ಪ್ರತಿ 1000 ರೂ. ನಕಲಿ ನೋಟಿಗೆ 300 ರೂ. ಲಾಭ ಒದಗಿಸುತ್ತಿದ್ದು, ಮುನಾಬಾವೊ-ಖಾಕ್ರಾಪರ್, ಅತ್ತಾರಿ ಗಡಿ ಮಾರ್ಗವಾಗಿ ಕಳ್ಳ ನೋಟು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.