ನವದೆಹಲಿ: ದೇಶದಾದ್ಯಂತ ಜನರು ತಮ್ಮ ಹಳೆ ನೋಟುಗಳ ಬದಲಾವಣೆಗೆ ಬ್ಯಾಂಕ್ ಶಾಖೆಗಳಿಗೆ ಮುಗಿಬೀಳುತ್ತಿದ್ದು, ಬ್ಯಾಂಕ್ಗಳು ಇದನ್ನು ನಿರ್ವಹಿಸಲು ಪ್ರಯತ್ನಿಸುತ್ತಿವೆ. ಈ ನಡುವೆ ೨೨,೫೦೦ ಎಟಿಎಂಗಳ ಮರು ಮಾಪನ ಮಾಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಏತನ್ಮಧ್ಯೆ ಸರ್ಕಾರ ರೂ.1000 ಮುಖಬೆಲೆಯ ಹೊಸ ನೋಟುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.
ನೋಟು ನಿಷೇಧದ ಹಿನ್ನೆಲೆಯಲ್ಲಿ ದೇಶದಲ್ಲಿಯ ಪರಿಸ್ಥಿಯ ಬಗ್ಗೆ ಗಮನಹರಿಸಿದ್ದು, ನೋಟು ಬದಲಾವಣೆಗೆ ದೀರ್ಘ ಸಾಲಿನಲ್ಲಿ ನಿಲ್ಲುವ ಜನಸಂದಣಿ ಸುಧಾರಿಸಿರುವ ಬಗ್ಗೆ ಮಾಹಿತಿ ಪಡೆದರು.
ಕೇಂದ್ರ ಸರ್ಕಾರ ಬ್ಯಾಂಕ್ಗಳು, ಎಟಿಎಂ ಹಾಗೂ ಈ ಬ್ಯಾಂಕ್ ಮತ್ತು ಎಟಿಎಂಗಳಿಗೆ ಹಣ ಸಾಗಿಸುವ ವಾಹನಗಳಿಗೆ ಸೂಕ್ತ ಭದ್ರತೆ ಒದಗಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ನವೆಂಬರ್ 18ರಿಂದ ಬ್ಯಾಂಕ್ ಕೌಂಟರ್ಗಳಿಂದ ಪಡೆಯಲಾಗುವ ಹಣದ ಮಿತಿಯನ್ನು 4,500ರಿಂದ 2,000ಕ್ಕೆ ಇಳಿಸಲಾಗುವುದು. ಇನ್ನು ಮದುವೆಗಳಿಗೆ 2.5 ಲಕ್ಷದ ವರೆಗೆ ಪಡೆಯಬಹುದಾಗಿದ್ದು, ಕುಟುಂಬದ ಓರ್ವ ಸದಸ್ಯ (ತಂದೆ/ತಾಯಿ) ಮಾತ್ರ ಹಣವನ್ನು ವಿಥ್ಡ್ರಾ ಮಾಡಬಹುದು ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ರೈತರು ವಾರಕ್ಕೆ ರೂ. 25,000 ವರೆಗೆ ಬೆಳೆ ಸಾಲ ಪಡೆಯಲು ಸರ್ಕಾರ ಅನುಮತಿಸಿದೆ ಎಂದು ದಾಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.