ಕೊಯಂಬತ್ತೂರು : ಕೇಂದ್ರ ಸರ್ಕಾರ ನವೆಂಬರ್ 8 ರಿಂದ ಜಾರಿಗೆ ತಂದಿರುವ ಹಳೇ ನೋಟುಗಳ ನಿಷೇಧದ ಹಿನ್ನೆಲೆಯಲ್ಲಿ ಜನರು ತಮ್ಮ ಹತ್ತಿರವಿರುವ ಹಳೆಯ 500, 1000 ರೂ.ಗಳ ನೋಟುಗಳನ್ನು ಬ್ಯಾಂಕ್ ಮತ್ತು ಅಂಚೆ ಕಛೇರಿಗಳ ಮುಖಾಂತರ ಬದಲಿಸಿಕೊಳ್ಳಲು ತಿಳಿಸಿತ್ತು. ಆದರೆ ಬಹಳಷ್ಟು ದೂರದ ಹಳ್ಳಿಗಳಲ್ಲಿರುವವರಿಗೆ ಇದು ಕಷ್ಟಸಾಧ್ಯವೂ ಆಗಿತ್ತು.
ಹಣ ಬದಲಾವಣೆಗೆ, ಅಗತ್ಯತೆಗಳಿಗೆ ಬೇಕಾಗುವ ಹಣಕ್ಕಾಗಿ ಎಟಿಎಂ ಕೂಡಾ ಕೆಲವು ಕುಗ್ರಾಮಗಳಲ್ಲಿ ಲಭ್ಯವಿಲ್ಲ. ಅಂತಹುದರಲ್ಲಿ ಅಲ್ಲಿರುವವರಿಗೆ ಕೇವಲ ಅಂಚೆ ಕಛೇರಿಗಳೇ ಆಶಾದಾಯಕ. ಹತ್ತಿರದಲ್ಲಿರುವ ಅಂಚೆ ಕಛೇರಿಗಳಿಗೆ ಬರಲು ಕೂಡಾ ಕೆಲವರಿಗೆ ತೊಂದರೆ ಇರುವಂತಹ ಪರಿಸ್ಥಿತಿ ಕೆಲವು ಕುಗ್ರಾಮಗಳಿಗಿದೆ.
ಇದರಿಂದಾಗಿ ಸಾಕಷ್ಟು ತೊಂದರೆ ಉಂಟಾಗುತ್ತಿರುವುದನ್ನು ಗಮನಿಸಿದ ಅಂಚೆ ಕಛೇರಿ, ಜನರ ಗಡಿಬಿಡಿ ಮತ್ತು ನೂಕುನುಗ್ಗಲನ್ನು ಪರಿಗಣಿಸಿ ಕೆಲವು ದೂರದ ಹಳ್ಳಿಗಳಿಗೆ, ಎಟಿಎಂ, ಬ್ಯಾಂಕ್ ಸೌಲಭ್ಯ ಸುಲಭದಲ್ಲಿ ದೊರೆಯದಂತಹ ಕುಗ್ರಾಮಗಳಿಗೆ ಮೊಬೈಲ್ ಕರೆನ್ಸಿ ಎಕ್ಸಚೇಂಜ್ ವ್ಯಾನ್ಗಳನ್ನು ಕಳುಹಿಸುವ ಮೂಲಕ ಅಲ್ಲಿನ ಜನರಿಗೆ ಹಳೇ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸುತ್ತಿದೆ.
ಇಂತಹದೊಂದು ಸೇವೆಯನ್ನು ಆರಂಭಿಸಿರುವುದು ಕೊಯಂಬತ್ತೂರಿನಲ್ಲಿ.
ಈ ಸೇವೆಯನ್ನು ಸರ್ಕಾರಿ ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ಬುಡಕಟ್ಟು ಪ್ರದೇಶಗಳು ಮತ್ತು ಕೊಯಂಬತ್ತೂರಿನ ದೂರದ ಹಳ್ಳಿಗಳಿಗೆ ಒದಗಿಸಲಾಗುತ್ತದೆ.
ಬುಧವಾರ ಕೊಯಂಬತ್ತೂರಿನ ಮೆಡಿಕಲ್ ಕಾಲೇಜ್ ಆಸ್ಪತ್ರೆ ಹತ್ತಿರ ನಿಲ್ಲಿಸಿದ ಈ ವ್ಯಾನ್ ಮೂಲಕ ಸುಮಾರು 3.5 ಲಕ್ಷಗಳವರೆಗೆ ಹಣ ಬದಲಾವಣೆಯಾಗಿದೆ ಎಂದು ಪಶ್ಚಿಮ ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ಆಗಿರುವ ಶಾರದಾ ಸಂಪತ್ ಹೇಳಿದ್ದಾರೆ.
ಜನರ ಅವಶ್ಯಕತೆ ಮತ್ತು ಹಣದ ಲಭ್ಯತೆಯ ಆಧಾರದ ಮೇಲೆ ಕೆಲವು ಸ್ಥಳಗಳಲ್ಲಿ ಕೆಲವು ದಿನಗಳವರೆಗೆ ಈ ರೀತಿಯ ಸೌಲಭ್ಯ ನೀಡಲಾಗುವುದು ಎಂದು ಸಂಪತ್ ಹೇಳಿದ್ದಾರೆ.
ಮೊಬೈಲ್ ಕರೆನ್ಸಿ ಎಕ್ಸ್ಚೇಂಜ್ ವ್ಯಾನ್ನ್ನು ಸ್ಥಳೀಯ ಅಂಚೆ ಕಛೇರಿಯ ಹತ್ತಿರ ನಿಲ್ಲಿಸಲಾಗುವುದು, ಜನ ತಮ್ಮ ID ಪ್ರೂಪ್ ನೀಡಿ ಈ ಸೇವೆಯ ಉಪಯೋಗ ಪಡೆದುಕೊಳ್ಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.