ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿ ಭಾರತ ನಡೆಸಿದ ಸರ್ಜಿಕಲ್ ದಾಳಿ ನಂತರ ಪಾಕಿಸ್ಥಾನದಿಂದ ಗಡಿ ಉಲ್ಲಂಘನೆ ಮತ್ತು ಒಳನುಸುಳುವಿಕೆ ಹೆಚ್ಚಿದೆ. ಪಾಕ್ ರೇಂಜರ್ಗಳ ದಾಳಿಗೆ ಹಲವು ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಈ ಹಿನ್ನಿಲೆಯಲ್ಲಿ ಸೈನಿಕರ ಕುಟುಂಬಗಳಿಗೆ ನೀಡಲಾಗುವ ಪರಿಹಾರ ಧನವನ್ನು ದುಪ್ಪಟ್ಟು ಮಾಡುವುದಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಸೈನಿಕರ ಕುಟುಂಬಗಳಿಗೆ ಸರ್ಕಾರದ ನಿಧಿಯಿಂದ ನೀಡಲಾಗುವ ಪರಿಹಾರ ಧನದ ಪರಿಷ್ಕರಣೆಯನ್ನು ಈ ಹಿಂದೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಸಂದರ್ಭ ಮಾಡಲಾಗಿತ್ತು. ಇದನ್ನು 16 ವರ್ಷಗಳ ಬಳಿಕ ಮತ್ತೆ ಪರಿಷ್ಕರಿಸಲಾಗಿದೆ.
ಇತ್ತೀಚೆಗೆ ರಕ್ಷಣಾ ಸಚಿವಾಲಯ ಜಾರಿಗೊಳಿಸಿದ ಸುತ್ತೋಲೆಯ ಪ್ರಕಾರ, ಸೈನಿಕರ ಕುಟುಂಬಗಳಿಗೆ ನೀಡಲಾಗುವ ಪರಿಹಾರ ಮೊತ್ತವನ್ನು 5 ವಿಭಾಗಗಳಾಗಿ ಪರಿಷ್ಕರಿಸಲಾಗಿದೆ.
ರಸ್ತೆ ಮತ್ತಿತರ ಅಪಘಾತಗಳಲ್ಲಿ ಮೃತಪಟ್ಟ ಕರ್ತವ್ಯನಿರತ ಸೈನಿಕರ ಪರಿಹಾರ ಮೊತ್ತವನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ ರೂ. 10 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಗಡಿಯಲ್ಲಿ ಉಗ್ರರು, ಭಯೋತ್ಪಾದಕರು ಮತ್ತು ಕದನಗಳಲ್ಲಿ ನೇರವಾಗಿ ಪಾಲ್ಗೊಂಡ ಸಂದರ್ಭ ಸಾವನ್ನಪ್ಪುವ ಸೈನಿಕರ ಪರಿಹಾರವನ್ನು ರೂ. 20 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಅಲ್ಲದೇ ಇತ್ತೀಚೆಗೆ ಗಡಿ ನಿಯಂತ್ರಣ ರೇಖೆಯಲ್ಲಿ ಸಂಭವಿಸಿದ ಕದನಗಳಲ್ಲಿ ಮೃತಪಟ್ಟ ಸೈನಿಕರ ಪರಿಹಾರವನ್ನು ರೂ. 15 ಲಕ್ಷದಿಂದ 35 ಲಕ್ಷಕ್ಕೆ ಏರಿಸಲಾಗಿದೆ.
ಸಿಯಾಚಿನ್ನಂತಹ ಎತ್ತರದ ಪರ್ವತ ಪ್ರದೇಶಗಳಲ್ಲಿ ಸಾವನ್ನಪ್ಪುವ ಕಾರ್ಯನಿರತ ಸೈನಿಕರ ಕುಟುಂಬಗಳಿಗೆ ನೀಡಲಾಗುವ ಪರಿಹಾರವನ್ನು ರೂ. 15 ರಿಂದ 35 ಲಕ್ಷಕ್ಕೆ ಏರಿಸಲಾಗಿದೆ. ದೇಶದಲ್ಲಿ ಸಂಭವಿಸುವ ಯುದ್ಧದ ಸಂದರ್ಭಗಳು ಅಥವಾ ವಿದೇಶಗಳಲ್ಲಿ ನಿಯೋಜಿತರಾಗಿರುವ ಸೈನಿಕರು ಯುದ್ಧ ಸಂದರ್ಭಗಳಲ್ಲಿ ಮೃತಪಟ್ಟಲ್ಲಿ ನೀಡಲಾಗುವ ಪರಿಹಾರವನ್ನು ರೂ. 20 ರಿಂದ 45 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಬಿಕ್ಕಟ್ಟು ಸಂಭವಿಸಿದಲ್ಲಿ ವಿದೇಶಗಳಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ಭಾರತ ಸರ್ಕಾರ ವಾಯು ಸೇನೆ ಮತ್ತು ನೌಕಾ ಪಡೆಗಳನ್ನು ಭೂಸೇನೆ ಜೊತೆ ಸೇರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.