ಮಧುಬನಿ: ಪ್ರಧಾನಿ ನರೇಂದ್ರ ಮೋದಿ ಅವರ ರೂ. 500 ಮತ್ತು 1000 ಮುಖಬೆಲೆಯ ನೋಟು ನಿಷೇಧದ ನಡೆಗೆ ಬೆಂಬಲ ಸೂಚಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ಬೇನಾಮಿ ಆಸ್ತಿ’ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಎರಡನೇ ಹಂತದ ‘ನಿಶ್ಚಯ್ ಯಾತ್ರಾ’ ಆರಂಭಕ್ಕೂ ಮುನ್ನ ನಡೆದ ಚೇತನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ನಾನು ರೂ. 500 ಮತ್ತು 1000 ನೋಟುಗಳ ನಿಷೇಧದ ನಿರ್ಧಾರದ ಪರ ಬೆಂಬಲಿಸುತ್ತಿದ್ದು, ಇದು ‘2 ನಂಬರ್ ಕಾ ದಂಧಾ’ (ಅಕ್ರಮ ವ್ಯವಹಾರ)ವನ್ನು ಶೀಘ್ರದಲ್ಲೇ ಕೊನೆಗೊಳಿಸಲಿದೆ ಎಂದು ಹೇಳಿದ್ದಾರೆ.
ಕಪ್ಪು ಹಣದ ವಿರುದ್ಧ ಹೆಚ್ಚು ಪರಿಣಾಮಕಾರಿ ಫಲಿತಾಂಶಗಳಿಗೆ ಅಕ್ರಮವಾಗಿ ಗಳಿಸಲಾಗುತ್ತಿರುವ ಬೇನಾಮಿ ಆಸ್ತಿ ವಿರುದ್ಧ ದಾಳಿ ನಡೆಸುವುದನ್ನು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ರೈತರು ಈಗ ಸುಖನಿದ್ರೆಯನ್ನು ಅನುಭವಿಸುತ್ತಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ವಿರೋಧಿಸಿದ ನಿತೀಶ್ ಕುಮಾರ್, ರೈತರು ಹಾಗೂ ಜನಸಾಮಾನ್ಯರು ತಮ್ಮ ಗದ್ದೆಗಳು ಮತ್ತು ಕ್ಷೇತ್ರಗಳಲ್ಲಿ ಬೆವರು ಸುರಿಸಿ ಶ್ರಮಿಸುತ್ತಿದ್ದಾರೆ. ಆದರೆ ಅಕ್ರಮ ವ್ಯಾಪಾರ ನಡೆಸಿ ಬೇನಾಮಿ ಆಸ್ತಿ ಖರೀದಿಸುವವರು ದೀರ್ಘ ನಿದ್ರೆ ಅನುಭವಿಸುತ್ತಿದ್ದಾರೆ ಎಂದು ನಿತೀಶ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.