ನವದೆಹಲಿ: ರಾಷ್ಟ್ರ ಸೇವಿಕಾ ಸಮಿತಿ ನವದೆಹಲಿಯಲ್ಲಿ ಆಯೋಜಿಸಿದ 3 ದಿನಗಳ ಅಖಿಲ ಭಾರತ ಕಾರ್ಯಕರ್ತ ಪ್ರೇರಣಾ ಶಿಬಿರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ದ ಸರಸಂಘಚಾಲಕ್ ಮೋಹನ್ ಭಾಗವತ್ ಅವರು ಉದ್ಘಾಟಿಸಿದರು.
ಮಹಿಳೆಯರ ಸ್ವಯಂಸೇವಾ ಸಂಸ್ಥೆಯಾದ ರಾಷ್ಟ್ರ ಸೇವಿಕಾ ಸಮಿತಿ ಈ ವರ್ಷ ತನ್ನ 80ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ಕಾರ್ಯಕ್ರಮದ ಸ್ಮರಣಾರ್ಥವಾಗಿ ಮೋಹನ್ ಭಾಗವತ್ ಅವರು ‘ಪ್ರೇರಣಾಂಜಲಿ’ ಸ್ಮರಣಸಂಚಿಕೆ ಬಿಡುಗಡೆ ಮಾಡಿದರು.
ಅಖಿಲ ಭಾರತ ಕಾರ್ಯಕರ್ತ ಪ್ರೇರಣಾ ಶಿಬಿರವು ನ.11 ರಿಂದ 13ರ ವರೆಗೆ ನಡೆಯಲಿದೆ.
ಆಧ್ಯಾತ್ಮ ಗುರು ಜಯಂತ್ ಕುಮಾರ್, ರಾಷ್ಟ್ರ ಸೇವಿಕಾ ಸಮಿತಿಯ ಸಂಚಾಲಿಕಾ ಪ್ರಮುಖ್ ವಿ. ಶಾಂತಾ ಕುಮಾರಿ, ಕಾರ್ಯನಿರ್ವಾಹಿಕಾ ಪ್ರಮುಖ್ ಅನ್ನದಾನಂ ಸೀತಾ ಮತ್ತಿತರರು ಉದ್ಘಾಟನಾ ಸಮಾರಭದಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರ ಸೇವಿಕಾ ಸಮಿತಿಯ ಸುಮಾರು 2500 ಕಾರ್ಯಕರ್ತರು 3 ದಿನಗಳ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.