ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಿಶನ್ಗಂಗಾ ಮತ್ತು ರ್ಯಾಟಲ್ ಜಲವಿದ್ಯುತ್ ಯೋಜನೆಗಳ ವಿರುದ್ಧ ಪಾಕಿಸ್ಥಾನ ನೀಡಿರುವ ದೂರಿನ ಅನ್ವಯ ನ್ಯಾಯಾಲಯದ ಮಧ್ಯಸ್ಥಿಕೆ ಮತ್ತು ನ್ಯೂಟ್ರಲ್ ತಜ್ಞರ ನೇಮಕದ ಕುರಿತು ವಿಶ್ವ ಬ್ಯಾಂಕ್ನ ತೀರ್ಪಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತ ಸರ್ಕಾರದ ಸಕಲ ಪ್ರಯತ್ನಗಳ ಹೊರತಾಗಿ ಪಾಕಿಸ್ಥಾನದ ಮನವಿಯಂತೆ ಕೋರ್ಟ್ ಮಧ್ಯಸ್ಥಿಕೆಗೆ ಮತ್ತು ನಿಷ್ಪಕ್ಷಪಾತವಾಗಿ ತಜ್ಞರ ನೇಮಕ ಎರಡರ ಬಗ್ಗೆ ಏಕಕಾಲದಲ್ಲಿ ವಿಶ್ವ ಬ್ಯಾಂಕ್ ತೆಗೆದುಕೊಂಡ ನಿರ್ಧಾರ ಅಸಮರ್ಥನೀಯ ಎಂದು ಭಾರತ ಹೇಳಿದೆ.
ಏಕಕಾಲದಲ್ಲಿ ಎರಡು ಸಮಾನಾಂತರ ವಿಚಾರಗಳ ಬಗ್ಗೆ ವಿಶ್ವ ಬ್ಯಾಂಕ್ ತೆಗೆದಿರುವ ನಿರ್ಧಾರ ಅಸಮರ್ಥನೀಯ. ಭಾರತ ಎಂದೂ ಸಿಂಧು ನದಿ ಒಪ್ಪಂದದ ಕ್ರಮಗಳ ವಿರುದ್ಧದ ನೀತಿಗಳ ಭಾಗವಾಗಲು ಸಾಧ್ಯವಿಲ್ಲ. ಸರ್ಕಾರ ಹಚ್ಚಿನ ಮಾರ್ಗೋಪಾಯಗಳನ್ನು ಒರಿಶೀಲಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಭಾರತ, ಪಾಕಿಸ್ಥಾನ ಮತ್ತು ವಿಶ್ವ ಬ್ಯಾಂಕ್ ೧೯೬೦ ಸಿಂಧು ನದಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರ ವಿವಾದಗಳು ಮತ್ತಿತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಶ್ವ ಬ್ಯಾಂಕ್ ಮಹತ್ವದ ಪಾತ್ರ ವಹಿಸುತ್ತಿದೆ.
ಕಿಶನ್ಗಂಗಾ ಮತ್ತು ರ್ಯಾಟಲ್ ಜಲವಿದ್ಯುತ್ ಯೋಜನೆಯ ಸಮಸ್ಯೆಗಳ ಮತ್ತು ವಿವಾದಗಳನ್ನು ಬಗೆಹರಿಸುವ ವಿಚಾರವಾಗಿ ಭಾರತ ನ್ಯೂಟ್ರಲ್ (ತಟಸ್ಥ ನಿಷ್ಪಕ್ಷಪಾತ) ತಜ್ಞರ ನೇಮಕ್ಕೆ ಮನವಿ ಮಾಡಿದರೆ ಪಾಕಿಸ್ಥಾನ ಕೋರ್ಟ್ ಮಧ್ಯಸ್ಥಿಕೆಗೆ ವಿಶ್ವ ಬ್ಯಾಂಕ್ಗೆ ಕೋರಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.