ನವದೆಹಲಿ: ಕಪ್ಪು ಹಣದ ಮೇಲೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚರಿಯ ಘೋಷಣೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಅಕ್ರಮ ಕಪ್ಪು ಹಣ ದಾಸ್ತಾನಿಗೆ ಅಡ್ಡಿ ಉಂಟು ಮಾಡಲಿದೆ. ಅಲ್ಲದೇ ಖೋಟಾ ನೋಟು ಬಳಕೆ, ಭಯೋತ್ಪಾದಕರಿಗೆ ನಕಲಿ ಹಣದ ರಫ್ತು ಚಟುವಟಿಕೆ ಮತ್ತು ಪ್ರತ್ಯೇಕತಾವಾದಿಗಳ ಚಳುವಳಿಯ ಹರಿದು ಬರುವ ನಿಧಿಗೆ ಕಡಿವಾಣ ಬೀಳಲಿದೆ. ಇದು ಪ್ರತ್ಯೇಕವಾಗಿ ಐಎಸ್ಐ ಸಂಘಟನೆಗೆ ಹೊಡೆತ ಬೀಳಲಿದೆ.
ಆರ್ಥಿಕ ಗುಪ್ತಚರ ಘಟಕ (ಎಫ್ದ) ನೀಡಿದ ವರದಿಯಂತೆ ಕಪ್ಪು ಹಣ ಅಥವಾ ಸಂಶಯಾಸ್ಪದ ವ್ಯವಹಾರಗಳ ಶೇ.೧೫ರಷ್ಟು ಹಣ ಭಯೋತ್ಪಾದಕರ ಕೈಸೇರುತ್ತಿದೆ ಎಂದು ಮೂಲಗಳು ತಿಳಿಸಿವೆ.
ಆರ್ಥಿಕ ಗುಪ್ತಚರ ಘಟಕ ನೀಡಿದ ಅಂಕಿ ಅಂಶಗಳ ಪ್ರಕಾರ 2011ರಿಂದ 2016ರ ನಡುವೆ ರೂ. 500 ಮುಖಬೆಲೆಯ ಶೇ.76ರಷ್ಟು ನೋಟುಗಳು ಚಲಾವಣೆಯಲ್ಲಿದ್ದರೆ ರೂ.1000 ಮುಖಬೆಲೆಯ ಶೇ.109 ನೋಟುಗಳು ಚಲಾವಣೆಯಲ್ಲಿದ್ದವು ಎಂದು ಅದು ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 100 ಕೋಟಿ ರೂ. ಗುಪ್ತವಾಗಿ ಹಂಚಲಾಗಿರುವುದು ಪತ್ತೆಹಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜತಾಂತ್ರಿಕ ಮತ್ತು ಮಿಲಿಟರಿ ಸಕಾಯದಿಂದ ಪಾಕಿಸ್ಥಾನವನ್ನು ಜಾಗತಿಕವಾಗಿ ಪ್ರತ್ಯೇಕಿಸಿದ ಬಳಿಕ ಗಡಿಯಲ್ಲಿ ಸರ್ಜಿಕಲ್ ದಾಳಿ ನಡೆಸಲಾಗಿದೆ. ಭಾರತದ ಕಾರ್ಯತಾಂತ್ರಿಕ ಸಮುದಾಯದ ಪ್ರಕಾರ ಈ ಹೊಸ ಹೆಜ್ಜೆಯಿಂದ ಹಣದ ನಿಧಿ ಒಳಹರಿವು ತಡೆಗಟ್ಟುವ ಮೂಲಕವೇ ಭಯೋತ್ಪಾದನೆ ತಡಗಟ್ಟಲು ಸಾಧ್ಯ ಎಂದು ನಂಬಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.