ನವದೆಹಲಿ : ಕಪ್ಪು ಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಮಂಗಳವಾರ (ನ. 8) ಮಧ್ಯರಾತ್ರಿಯಿಂದಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಬಂದ್ ಮಾಡಿರುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ಧಾರೆ.
ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ, ದೇಶದ ಅಭಿವೃದ್ಧಿಗಾಗಿ, ಸಬ್ ಕಾ ಸಾಥ್ ವಿಕಾಸ್ ಎನ್ನುವ ಧ್ಯೇಯವಾಕ್ಯದೊಂದಿಗೆ ಕೆಲ ನಿರ್ಧಾರಗಳನ್ನು ಇಂದು ಘೋಷಿಸಲಾಗುತ್ತಿದೆ. ಬಡ ಜನರ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ತರಲಾಗಿದೆ. ಪ್ರಧಾನ್ಮಂತ್ರಿ ಜನ್ ಧನ್ ಯೋಜನಾ, ಜನ ಸುರಕ್ಷಾ ಯೋಜನಾ, ಸಣ್ಣ ಉದ್ಯಮಿಗಳಿಗಾಗಿ ಪ್ರಧಾನ್ ಮಂತ್ರಿ ಮುದ್ರಾ ಯೋಜನಾ, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ, ಬಡವರ ಮನೆಗಳಿಗೆ ಅಡುಗೆ ಅನಿಲ ನೀಡುವ ಯೋಜನೆಯಾದ ಪ್ರಧಾನ್ ಮಂತ್ರಿ ಉಜ್ವಲ್ ಯೋಜನಾ, ಕೃಷಿಕರ ಆದಾಯ ಸಂರಕ್ಷಿಸಲು ಫಸಲ್ ಬೀಮಾ, ಕೃಷಿ ಸಿಂಚಾಯೀ ಯೋಜನಾ, ರೈತರು ತಮ್ಮ ಹೊಲಗಳಲ್ಲಿ ಹೆಚ್ಚು ಬೆಳೆಯುವ ಸಲುವಾಗಿ ಸಾಯಿಲ್ ಹೆಲ್ತ್ ಕಾರ್ಡ್ ಸ್ಕೀಂ, ರೈತರು ತಮ್ಮ ಬೆಳೆಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳು e-NAM ಯೋಜನೆ ಇವುಗಳೆಲ್ಲವೂ ನಾವು ದೇಶದ ಪ್ರಗತಿಗಾಗಿ ತೆಗೆದುಕೊಂಡ ಮಾರ್ಗದ ಪ್ರತಿಬಿಂಬಗಳು.
ಕೆಲ ದಶಕಗಳಲ್ಲಿ ಭ್ರಷ್ಟಾಚಾರ ಮತ್ತು ಕಪ್ಪು ಹಣ ಅವ್ಯಾಹತವಾಗಿ ಹೆಚ್ಚಾಗಿದೆ, ಹೆಚ್ಚಾಗುತ್ತಲೇ ಇದೆ. ಇದು ಬಡತನವನ್ನು ನಿರ್ಮೂಲನೆ ಮಾಡಲು ದುರ್ಬಲವಾಗಿದೆ. ಒಂದೆಡೆ ನಾವು ಆರ್ಥಿಕ ಬೆಳವಣಿಗೆಯ ಪಟ್ಟಿಯಲ್ಲಿ ನಂ. 1 ಸ್ಥಾನದಲ್ಲಿದ್ದರೆ, ಜಾಗತಿಕ ಶ್ರೇಯಾಂಕದಲ್ಲಿ 100 ರೊಳಗೆ ಇದ್ದೇವೆ. ಅನೇಕ ಕ್ರಮಗಳನ್ನು ತೆಗೆದುಕೊಂಡ ಹೊರತಾಗಿಯೂ ನಾವು ಜಾಗತಿಕ ಶ್ರೇಯಾಂಕದಲ್ಲಿ 76 ನೇ ಸ್ಥಾನದಲ್ಲಿ ತಲುಪಲು ಸಾಧ್ಯವಾಗಿದೆಯಷ್ಟೇ.
ಕಪ್ಪು ಹಣ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಭ್ರಷ್ಟಾಚಾರ ನಿಂತರೆ ಮಾತ್ರ ದೇಶದ ಪ್ರಗತಿ ಸಾಧ್ಯ.
ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಹತ್ತಿಕ್ಕಲು ನಾವು ಕಠಿಣ ನಿರ್ಧಾರವನ್ನು ಇಂದು ತೆಗೆದುಕೊಂಡಿದ್ದೇವೆ. ಇಂದಿನಿಂದ 500 ಮತ್ತು 1000 ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಲಾಗುತ್ತಿದ್ದು, ಡಿ. 31 ರೊಳಗೆ ಎಲ್ಲಾ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬೇಕು. ಹೊಸ ನೋಟುಗಳ ಮುದ್ರಣವನ್ನು ಮಾಡಲಾಗಿದೆ. 100, 50, 20, 10, 5, 2, 1 ರೂ.ಗಳು ಹಾಗೆಯೇ ಚಲಾವಣೆಯಲ್ಲಿರಲಿದೆ.
ಹಳೆ ನೋಟುಗಳನ್ನು ಬ್ಯಾಂಕ್, ಪೋಸ್ಟ್ ಆಫೀಸ್ಗಳಲ್ಲಿ ನೀವು 50 ದಿನಗಳಲ್ಲಿ ಜಮಾ ಮಾಡಬಹುದು. ಯಾವುದೇ ರೀತಿಯ ಗಾಬರಿಗೊಳಗಾಗಬೇಡಿ. ಹೊಸ ನೋಟುಗಳ ನೀಡುವಿಕೆ 10,000 ರೂ. ಪ್ರತಿದಿನಕ್ಕೆ ಮತ್ತು ರೂ.20,000 ರೂ. ಪ್ರತಿ ವಾರಕ್ಕೆ ನೀಡುವ ನಿಯಮವನ್ನು ಕೆಲ ಕಾಲ ತರಲಾಗುವುದು. ತದನಂತರ ಇದರ ಲಿಮಿಟ್ನ್ನು ಹೆಚ್ಚಳ ಮಾಡುತ್ತೇವೆ.
ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ಗಳನ್ನು ತೋರಿಸಿ ನ. 10 ರಿಂದ ನ. 24 ರವರೆಗೆ ಬದಲಾವಣೆಯ ಹಣ 4,000 ರೂ. ಗೆ ಮಾತ್ರ ನಿಗದಿಪಡಿಸಲಾಗಿದೆ. ನ. 25 – ಡಿ. 31 ಲಿಮಿಟ್ ಜಾಸ್ತಿ ಮಾಡಲಾಗುವುದು.
ನವೆಂಬರ್ 9 ಮತ್ತು ಕೆಲವೆಡೆ ನವೆಂಬರ್ 10 ರವರೆಗೆ ಎಟಿಎಂನ್ನು ಸ್ಥಗಿತಗೊಳಿಸಲಾಗುವುದು. ನಂತರದ ದಿನಗಳಲ್ಲಿ ಎಟಿಎಂಗಳಲ್ಲಿ 4,000 ರೂ.ವರೆಗೆ ಮಾತ್ರ ಡ್ರಾ ಮಾಡಬಹುದು.
72 ಗಂಟೆಗಳವರೆಗೆ ಅಂದರೆ ನವೆಂಬರ್ 11 ರವರೆಗೆ ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಮೆಡಿಕಲ್ ಶಾಪ್ 500 ರೂ, ಮತ್ತು 1000 ರೂ.ಗಳನ್ನು ಪಡೆಯಬಹುದು. ರೈಲ್ವೆ ಟಿಕೆಟ್ ಬುಕ್ಕಿಂಗ್ ಕೌಂಟರ್, ಏರ್ಲೈನ್ ಟಿಕೆಟ್, ಸರ್ಕಾರಿ ಬಸ್ ಕೌಂಟರ್ಗಳಲ್ಲಿ ಮಾತ್ರ 72 ಗಂಟೆಗಳ ಕಾಲ ಮಾತ್ರ ಸ್ವೀಕರಿಸಲಾಗುವುದು. ಪೆಟ್ರೋಲ್ ಬ್ಯಾಂಕ್, ಗ್ಯಾಸ್ ಬಂಕ್, ಸರ್ಕಾರಿ ಮಿಲ್ಕ್ ಬೂತ್ ಇವುಗಳಲ್ಲಿ ಸ್ವೀಕರಿಸಲಾಗುವುದು.
ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ಕಷ್ಟವಾಗದಂತೆ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ.
ಚೆಕ್, ಕೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್ಲೈನ್ ಟ್ರಾನ್ಸಾಕ್ಷನ್ ಇವುಗಳಿಗೆ ಯಾವುದೇ ರೀತಿಯ ತೊಡಕಾಗುವುದಿಲ್ಲ.
ನಿಷ್ಠಾವಂತ, ಪ್ರಾಮಾಣಿಕ ಜನರಿಗೆ ಸ್ವಲ್ಪ ಸಮಯ ಕಷ್ಟವಾಗಬಹುದು. ಆದರೆ ದೇಶದ ಪ್ರಗತಿಗಾಗಿ ನಮ್ಮೆಲ್ಲರ ಸಹಕಾರ, ತ್ಯಾಗ ಅತ್ಯಗತ್ಯ.
ಖೋಟಾ ನೋಟು, ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡೋಣ. ಈ ದೀಪಾವಳಿ ಪರ್ವದ ನಂತರ ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ಸಮಗ್ರತೆಯ ರೂಪದಲ್ಲಿ ಆಚರಿಸೋಣ.
ಬ್ಯಾಂಕ್, ಪೋಸ್ಟ್ ಆಫೀಸ್ನ ಎಲ್ಲಾ ಅಧಿಕಾರಿಗಳೂ ಈ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಲಿದ್ದಾರೆ ಎಂಬ ನಂಬಿಕೆಯಿದೆ. ನಿಮ್ಮೆಲ್ಲಾ ಸಹಕಾರ, ಸಂಯಮ ಅತ್ಯಗತ್ಯ ಎಂದರು.
ರೂ. 500 ಮತ್ತು ರೂ. 2000 ಗಳ ಹೊಸ ನೋಟುಗಳ ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಸರ್ಕಾರದ ಸಮ್ಮತಿಯೊಂದಿಗೆ ಆರ್ಬಿಐ ಶೀಘ್ರದಲ್ಲೇ ಹೊರತರಲಿದೆ.
ನಿಮ್ಮ ವಿಚಾರಗಳಲ್ಲಿ ಬದಲಾವಣೆ ತಂದುಕೊಳ್ಳುವುದರ ಮೂಲಕ ದೇಶದ ಪ್ರಗತಿಯನ್ನು ಕಾಣಬಹುದು. ಪ್ರತಿಯೊಬ್ಬರೂ ಕಪ್ಪು ಹಣ, ಭ್ರಷ್ಟಾಚಾರ ವಿರುದ್ಧದ ಯಜ್ಞದಲ್ಲಿ ಪಾಲ್ಗೊಳ್ಳಿ, 125 ಕೋಟಿ ಜನರ ಮೇಲೆ ನನಗೆ ನಂಬಿಕೆ ಇದೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರದಿಂದ ನಾವು ಯಶಸ್ಸನ್ನು ಸಾಧಿಸಲಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದು ನಿಜವಾಗಿಯೂ ಮೋದಿ ತೆಗೆದುಕೊಂಡು ದಿಟ್ಟ ಹೆಜ್ಜೆ. ಕಪ್ಪು ಹಣದ ವಿರುದ್ಧ ಸಮರ ಸಾರುತ್ತೇವೆ ಎಂಬ ಮಾತನ್ನು ನಿಜ ಮಾಡಿ ತೋರಿಸಿದ್ದಾರೆ. ಕಪ್ಪು ಹಣ, ಭ್ರಷ್ಟಾಚಾರ, ಭಯೋತ್ಪಾದನೆಯ ವಿರುದ್ಧ ಇದು ಮೋದಿಯ ಬ್ರಹ್ಮಾಸ್ತ್ರ. ಈ ಕ್ರಾಂತಿಕಾರಿ ಹೆಜ್ಜೆ ಯಾವುದೇ ಸರ್ಜಿಕಲ್ ಸ್ಟ್ರೈಕ್ಗೂ ಕಡಿಮೆಯಲ್ಲ. ಭಾರತದಲ್ಲಿ ಅಚ್ಚೇ ದಿನ್ ಪ್ರಾರಂಭವಾಗಿದ್ದು, ಮೋದಿ ನೇತೃತ್ವದಲ್ಲಿ ವಿಶ್ವಗುರುವಾಗುವತ್ತ ಭಾರತ ದಾಪುಗಾಲನ್ನಿಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.