ಅಲಹಾಬಾದ್ : ಆಧಾರ್ಕಾರ್ಡ್ ಮಾಡಿಸಲು ಮುಖ್ಯವಾಗಿ ಬೇಕಾಗಿರುವುದೇ ಬೆರಳುಗಳು, ಆದರೆ ಬೆರಳುಗಳೇ ಇಲ್ಲದವರು ಆಧಾರ್ಕಾರ್ಡ್ ಮಾಡಿಸುವುದು ಹೇಗೆ?
ಅಲಹಾಬಾದ್ನ ದಿವ್ಯಾಂಗ ವ್ಯಕ್ತಿಯೋರ್ವರಿಗೆ ಈ ಪರಿಸ್ಥಿತಿ ಎದುರಾಗಿದೆ.
ರಾಜ್ಕುಮಾರ್ ಅವರು ಬಾಲ್ಯದಲ್ಲಿರುವಾಗಲೇ ತನ್ನ ಎರಡು ಕೈಗಳ ಮುಂಗೈಗಳನ್ನು ಕಳೆದುಕೊಂಡಿದ್ದರು. ತದನಂತರ ಅವರಿಗೆ ಸರ್ಕಾರದಿಂದ ತಕ್ಕಮಟ್ಟಿಗೆ ಹಣಕಾಸಿನ ಸಹಾಯ ದೊರಕುತ್ತಿತ್ತು. ಅವರು ಅದನ್ನು ಬ್ಯಾಂಕಿನಿಂದ ತೆಗೆದುಕೊಳ್ಳುತ್ತಿದ್ದರು. ಆದರೆ ಕೆಲ ತಿಂಗಳಿನಿಂದ ಅವರು ಸಹಾಯಧನವನ್ನು ತೆಗೆದುಕೊಳ್ಳಲು ಆಗುತ್ತಿಲ್ಲ. ಕಾರಣ ಅವರ ಹತ್ತಿರ ಆಧಾರ್ಕಾರ್ಡ್ ಇಲ್ಲದಿರುವುದು.
ಸಹಾಯಧನದ ಅನಿವಾರ್ಯತೆ ಇರುವ ದಿವ್ಯಾಂಗ ರಾಜ್ಕುಮಾರ್ ಅವರು ಆಧಾರ್ಕಾರ್ಡ್ ಮಾಡಿಸಲು ಹೋಗಿದ್ದಾರೆ. ಆದರೆ ಆಧಾರ್ಕಾರ್ಡ್ ಮಾಡಿಕೊಡುವವರು ಮೊದಲು ಬೆರಳು ತನ್ನಿ ಅಮೇಲೆ ನಿಮಗೆ ಕಾರ್ಡ್ ಎಂದು ಹೇಳುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ. ಎಷ್ಟೇ ಅಂಗಲಾಚಿದರೂ ಏನೂ ಪ್ರಯೋಜನವಾಗುತ್ತಿಲ್ಲ. ಇದರಿಂದ ಕಂಗಾಲಾದ ರಾಜ್ಕುಮಾರ್ ಅವರ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.
ರಾಜ್ಕುಮಾರ್ ಅವರಿಗೆ ಪತ್ನಿ ಮತ್ತು ಐದು ಮಕ್ಕಳಿದ್ದು, ಅವರ ಎರಡು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.
ದಿವ್ಯಾಂಗ ರಾಜ್ಕುಮಾರ್ ಅವರು ಆಧಾರ್ಕಾರ್ಡ್ ಮಾಡಿಸಬೇಕೆಂದರೆ ಚಮತ್ಕಾರವೇ ನಡೆಯಬೇಕಾಗಿದೆ. ಆಧಾರ್ಕಾರ್ಡ್ ಮಾಡಿಸಿದರೆ ಮಾತ್ರ ಅವರಿಗೆ ಪುನಃ ಸರ್ಕಾರದಿಂದ ಸಹಾಯಧನ ದೊರಕುತ್ತದೆ. ಆದರೆ ಚಮತ್ಕಾರ ಮಾಡುವವರು ಯಾರು?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.