ನವದೆಹಲಿ : ಬೆಂಗಳೂರು-ರಾಂಚಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಅಸ್ವಸ್ಥ ತಾಯಿ ಮತ್ತು ಮಗಳಿಗೆ ಕಾದಿರಿಸಲಾಗಿದ್ದ ತಮ್ಮ ವಿಐಪಿ ಸೀಟ್ ಬಿಟ್ಟುಕೊಟ್ಟು ತಾವು ಸಾಮಾನ್ಯ ದರ್ಜೆಯ ಸೀಟ್ನಲ್ಲಿ ಪ್ರಯಾಣಿಸಿ ಎಲ್ಲರ ಶ್ಲಾಘನೆಗೆ ಕೇಂದ್ರ ವಿಮಾನಯಾನ ಖಾತೆ ಸಹಾಯಕ ಸಚಿವ ಜಯಂತ್ ಸಿನ್ಹಾ ಅವರು ಪಾತ್ರರಾಗಿದ್ದಾರೆ.
ಬೆಂಗಳೂರಿನಿಂದ ರಾಂಚಿಗೆ ಹೋಗಲು ಇಂಡಿಗೋ ವಿಮಾನದ ಮಿತವ್ಯಯದ ದರ್ಜೆಯದಲ್ಲಿ ಅಸ್ವಸ್ಥ ತಾಯಿ ಮತ್ತು ಮಗಳು ಟಿಕೆಟ್ ಬುಕ್ ಮಾಡಿದ್ದರು. ಆದರೆ ಕಾಲಿನ ಸಮಸ್ಯೆ ಇದ್ದ ತಾಯಿಗೆ ಕಾಲು ಚಾಚಿಕೊಂಡು ಕುಳಿತುಕೊಳ್ಳುವುದು ಬುಕ್ ಮಾಡಿದ ಸೀಟ್ನಲ್ಲಿ ಕಷ್ಟವಾಗಿತ್ತು. ಮುಂಬಾಗಿಲಿನ ಸಮೀಪವಿರುವ ಸೀಟುಗಳು ಖಾಲಿ ಇದ್ದುದರಿಂದ ತಾಯಿ ಮತ್ತು ಮಗಳು ಹೋಗಿ ಆ ಸೀಟುಗಳಲ್ಲಿ ಕುಳಿತುಕೊಂಡಿದ್ದರು. ಕೊಲ್ಕತ್ತಾದಲ್ಲಿ ವಿಮಾನ ನಿಂತಾಗ, ಜಯಂತ್ ಸಿನ್ಹಾ ಅವರು ವಿಮಾನವನ್ನೇರಿದರು. ಅವರ ಪತ್ನಿ ಮತ್ತು ಅವರಿಗಾಗಿ ಕಾದಿರಿಸಲಾಗಿದ್ದ ವಿಐಪಿ ಸೀಟಿನಲ್ಲಿ ಮತ್ತಿನ್ಯಾರೋ ಇರುವುದನ್ನು ಕಂಡು ಅವರು ಸಹನೆ ಮತ್ತು ತಾಳ್ಮೆಯಿಂದ ವಿಷಯವನ್ನು ಅರಿತುಕೊಂಡರು. ನಂತರ ತಾಯಿ ಮತ್ತು ಮಗಳು ಅದೇ ಸೀಟಿನಲ್ಲಿ ಪ್ರಯಾಣ ಮುಂದುವರೆಸಲು ಹೇಳಿ ತಾವು ಮಿತವ್ಯಯದ ದರ್ಜೆಯ ಸೀಟಿನಲ್ಲಿ ಕುಳಿತುಕೊಳ್ಳುವುದಾಗಿ ತಾಯಿ-ಮಗಳಿಗೆ ಹೇಳಿದರು.
ಸಚಿವರು ತೋರಿದ ಔದಾರ್ಯತೆಗಾಗಿ ತನ್ನ ಅಸ್ವಸ್ಥ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದ ಮಗಳು ಶ್ರೇಯಾ ಪ್ರದೀಪ್, ಇದು ನಿಜಕ್ಕೂ ಅಚ್ಛೇ ದಿನ್ ಎಂದು ಅವರಿಗೆ ತುಂಬು ಹೃದಯದ ಧನ್ಯವಾದವನ್ನು ಅರ್ಪಿಸಿದ್ದಾಳೆ. ಸಚಿವ ಜಯಂತ್ ಸಿನ್ಹಾ ಅವರೊಂದಿಗೆ ವಿಮಾನದಲ್ಲಿ ಸೆಲ್ಫಿಯನ್ನು ತೆಗೆದುಕೊಂಡು ಇದನ್ನು ಅಪ್ಲೋಡ್ ಮಾಡಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ಗೆ ಬಹಳಷ್ಟು ಮೆಚ್ಚುಗೆಗಳು ದೊರೆತಿದೆ.
@jayantsinha @IndiGo6E Ache din is wen Aviation Minister gives his 1st class seat 2 me n my ill mother, sits in d eco class himself Thnx Sir pic.twitter.com/A8Ys7hJ8Wa
— SHREYA PRADIP (@ShreyaPradip) November 6, 2016
ಸಚಿವ ಜಯಂತ್ ಸಿನ್ಹಾ ಅವರು ಕೂಡಾ ಶ್ರೇಯಾಳ ಟ್ವೀಟ್ಗೆ ಮರು ಉತ್ತರಿಸಿದ್ದಾರೆ. ಜಯಂತ್ ಸಿನ್ಹಾ ಅವರು ಈಗಾಗಲೇ ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿ ಸೂಕ್ತ ಸಹಾಯವನ್ನು ಮಾಡುವುದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅನೇಕ ಪ್ರಶಂಸೆಗಳನ್ನು ಪಡೆದಿದ್ದಾರೆ. ಈ ಪ್ರಶಂಸೆಗಳ ಪಟ್ಟಿಗೆ ಇದೀಗ ಇನ್ನೊಂದು ಸೇರ್ಪಡೆಯಾಗಿದೆ.
You are very welcome! https://t.co/fLlQp4Lzmn
— Jayant Sinha (@jayantsinha) November 6, 2016
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.