ಕಠ್ಮಂಡು: ನೇಪಾಳದ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆಯಲು ಮುಂದಿನ ವರ್ಷದಿಂದ ಕಠ್ಮಂಡುನಲ್ಲಿ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪ್ರವೇಶ ಪರೀಕ್ಷೆಗಳನ್ನು ಬರೆಯಲು ಅನುಮತಿ ಪಡೆಯಲಿದ್ದಾರೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಮೂರು ದಿನಗಳ ನೇಪಾಳ ಪ್ರವಾಸದಲ್ಲಿರುವ ಅವರು ಇಂಡಿಯಾ ಫೌಂಡೇಶನ್ ಮತ್ತು ನೀತಿ ಅನುಸಂಧಾನ್ ಪ್ರತಿಷ್ಠಾನ ನೇಪಾಳ ಆಯೋಜಿಸಿದ್ದ ‘ನೇಪಾಳ ಮತ್ತು ಭಾರತ: ಹೊಸ ಅನ್ವೇಷಣೆಗಳ ದೃಷ್ಟಿಕೋನ’ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡುತ್ತ ಭಾರತ ಮತ್ತು ನೇಪಾಳ ದೀರ್ಘ ಕಾಲದಿಂದಲೂ ಸಾಂಪ್ರದಾಯಿಕ ಶೈಕ್ಷಣಿಕ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯವನ್ನು ಹಂಚಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ದೀಯಲ್ಲಿ ನೇಪಾಳಕ್ಕೆ ಸಹಾಯ ನೀಡಲು ಸಂತೋಷವಿದೆ. ನೇಪಾಳದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸುಮಾರು 3 ಸಾವಿರ ವಿದ್ಯಾರ್ಥಿವೇತನ ಒದಗಿಸಲು ನಾವು ಬದ್ಧರಾಗಿದ್ದೇವೆ. ಭಾರತದ ತಾಂತ್ರಿಕ ಸಂಸ್ಥೇಗಳಲ್ಲಿ ತರಬೇತಿ ಪಡೆಯುವ ನೇಪಾಳದ ಸರ್ಕಾರಿ ಮತ್ತು ಸರ್ಕಾರೇತರ ಉದ್ಯೋಗಿಗಳಿಗೆ ಪ್ರತಿ ವರ್ಷ 250 ವಿದ್ಯಾರ್ಥಿವೇತನ ಅನುದಾನ ಮಾಡಲಿದ್ದೇವೆ ಎಂದು ಮುಖರ್ಜಿ ಹೇಳಿದ್ದಾರೆ.
ನೇಪಾಳದ ವೇಗದ ಅಭಿವೃದ್ಧಿಯಲ್ಲಿ ಜಲ ಸಂಪನ್ಮೂಲದ ಮಹತ್ವವನ್ನು ಪರಿಗಣಿಸಿ ಭಾರತವು ಈ ವರ್ಷ ಐಐಟಿ ರೂರ್ಕಿಯಲ್ಲಿ ನೇಪಾಳದ ಇಂಜಿನಿಯರ್ಗಳು ಮತ್ತು ತಜ್ಞರಿಗೆ ವಿದ್ಯುತ್ಚಕ್ತಿ ಮತ್ತು ಜಲ ಸಂಪನ್ಮೂಲ ನಿರ್ವಹಣೆಯ ಸ್ನಾತಕೋತ್ತರ ವಿದ್ಯಾರ್ಥಿವೇತನವನ್ನು ನೀಡಲಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.