ಮಂಗಳೂರು : ಕೇರಳ ರಾಜ್ಯದಲ್ಲಿ 5-6 ದಶಕಗಳಲ್ಲಿ ನಡೆಯುತ್ತಿರುವ ಕಮ್ಯೂನಿಸ್ಟರ ರಕ್ತಕ್ರಾಂತಿ ನಿಯಂತ್ರಣಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆಗೆ ಮಾತುಕತೆ ನಡೆಸುವುದಾಗಿ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಹೇಳಿದ್ದಾರೆ.
ಭಾನುವಾರ ಮಂಗಳೂರಿನ ಸಿಟಿಜನ್ ಕೌನ್ಸಿಲ್ ವತಿಯಿಂದ ನಗರದ ಸಂಘನಿಕೇತನದಲ್ಲಿ ಏರ್ಪಡಿಸಿದ ಕಮ್ಯೂನಿಸ್ಟರ ರಕ್ತಕ್ರೌರ್ಯಗಳ ಸತ್ಯಕಥನದ ‘ಆಹುತಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಈ ಕುರಿತ ಕಮ್ಯುನಿಷ್ಟ್ ದೌರ್ಜನ್ಯಗಳನ್ನು ಹತ್ತಿಕ್ಕುವ ಕುರಿತು ಆರೆಸ್ಸೆಸ್ ನೇತಾರರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಭರವಸೆ ನೀಡಿದ್ದೇನೆ ಎಂದು ತಿಳಿಸಿದರು.
ಕಮ್ಯೂನಿಸ್ಟ್ ಸಿದ್ಧಾಂತ ಬಹಳ ಉತ್ತಮವಾಗಿತ್ತು. ದಕ್ಷಿಣ ಭಾರತದಲ್ಲಿ ಪಶ್ಚಿಮ ಬಂಗಾಲವನ್ನು ಹೊರತುಪಡಿಸಿದರೆ ಕೇರಳದಲ್ಲಿ ಕಮ್ಯೂನಿಸ್ಟ್ ಮಾದರಿಯಾಗಿತ್ತು ಎಂದ ಅವರು, ಹಾಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ತಮ ಆಡಳಿತಗಾರಾದರೂ, ತಮ್ಮ ಕಣ್ಣೂರಿನಲ್ಲಿ ನಡೆಯುತ್ತಿರುವ ರಾಜಕೀಯ ನರಮೇಧವನ್ನು ಹತ್ತಿಕ್ಕಲು ಅವರಿಂದ ಸಾಧ್ಯವಾಗಿಲ್ಲ ಎಂದರು.
ಕಾಲೇಜು ದಿನಗಳಲ್ಲಿ ತಾನು ಕಮ್ಯುನಿಸ್ಟ್ ಆದರ್ಶಗಳನ್ನು ಮೆಚ್ಚಿಕೊಂಡಿದ್ದೆ, ಬಂಡವಾಳಶಾಹಿಗಳ ವಿರುದ್ಧ ಹೋರಾಟ, ನೆಲಕ್ಕಾಗಿ ಹೋರಾಡುವ ಆದರ್ಶದಿಂದ ಆPರ್ಷಿತನಾಗಿದ್ದೆ.ತತ್ವಗಳಿಗೂ ಕಮ್ಯುನಿಸ್ಟರ ನಿಜ ಜೀವನಕ್ಕೂ ವ್ಯತ್ಯಾಸವಿತ್ತು. ಹೀಗಾಗಿ ಪಕ್ಷ ತ್ಯಜಿಸಿದೆ ಎಂದ ಅವರು, 1999 ರಲ್ಲಿ ಪಾನೂರು ಎಂಬಲ್ಲಿ ಜಯಕೃಷ್ಣನ್ ಮಾಸ್ತರ್ ಹತ್ಯೆಯಾಗಿ ಉದ್ವಿಗ್ನ ಸ್ಥಿತಿಯಾದಾಗ ಚಿತ್ರರಂಗದ ಸದಸ್ಯರೊಡಗೂಡಿ ತಿಳಿಸಿಗೊಳಿಸಿದ್ದನ್ನು ಸ್ಮರಿಸಿದರು.
ಕಮ್ಯುನಿಷ್ಟ್ ದೌರ್ಜನ್ಯಕ್ಕೊಳಗಾದ ಮತ್ತು ಪ್ರಸ್ತುತ ಕೇರಳ ಆರ್ಎಸ್ಎಸ್ ನೇತಾರರಾಗಿರುವ ಸದಾನಂದ ಮಾಸ್ತರ್ ಮಾತನಾಡಿ, ಕೇರಳದಲ್ಲಿ ಎಲ್ಲರ ವಿರುದ್ದವೂ ಆಕ್ರಮಣ ಮತ್ತು ಮನುಷ್ಯತ್ವವನ್ನೇ ವಿರೋಧಿಸುವ ಕಮ್ಯುನಿಷ್ಟರ ನಿಲುವುಗಳು ಮೇರೆ ಮೀರುತ್ತಿವೆ. ರಾಷ್ಟ್ರೀಯ ವಿಚಾರಗಳನ್ನು ಬಿತ್ತುವ ಆರೆಸ್ಸೆಸ್, ಬಿಜೆಪಿಗರನ್ನೇ ಕೊಲೆ ನಡೆಸಲು ಸಿಪಿಎಂ ಅಲ್ಲಲ್ಲಿ ಕ್ಯಾಡರ್ಗಳನ್ನು ತೆರೆದು ಕಾರ್ಯಕರ್ತರಿಗೆ ವಿಶೇಷ ತರಬೇತಿ ನೀಡುತ್ತಿದೆ. ಆದರೂ ನಾವು ದೃತಿಗೆಟ್ಟಿಲ್ಲ. ನಮ್ಮ ಸಹಸ್ರಾರು ಮಂದಿಯಲ್ಲಿ ಹೋರಾಟದ ಕಾವು ಮತ್ತಷ್ಟು ಜಾಗೃತವಾಗಿದೆ ಎಂದರು.
ಕೇರಳದಲ್ಲಿ ಕಮ್ಯುನಿಸ್ಟ್ ಕ್ರೌರ್ಯUಳಿಗೆ ಸಿಲುಕದಿರುವ ಪಕ್ಷಗಳು ಯಾವುದೂ ಇಲ್ಲ. ಪರಶ್ಶಿನಕಡವು ಉರಗೋದ್ಯಾನವನ್ನೂ ಕೂಡಾ ಬೆಂಕಿಗೆ ಆಹುತಿಯಾಗಿ ಅಪರೂಪದ ಅಳಿವಂಚಿನಲ್ಲಿದ್ದ ಮುಗ್ಧ ಪ್ರಾಣಿಗಳೂ ಹತ್ಯೆಯಾಗಿದ್ದವು. ಈಗಲೂ ಕಣ್ಣೂರು ಕೇಂದ್ರೀತ ಪ್ರದೇಶದಲ್ಲಿ ಪರಿಸ್ಥಿತಿ ಭೀಕರವಾಗಿದೆ ಎಂದರು.
ಇದುವರೆಗೆ ಒಟ್ಟು 87 ಆರೆಸ್ಸೆಸ್ ಪ್ರಮುಖರು ಬಲಿಯಾಗಿದ್ದಾರೆ. ಈ ಪೈಕಿ 60 ಮಂದಿ ಸಿಪಿಐಎಂನಿಂದ ಆರ್ಎಸ್ಎಸ್ಗೆ ಸೇರಿದ ಹಿನ್ನೆಲೆಯಲ್ಲಿ ಸಿಪಿಎಂನವರು ಕೊಲೆ ನಡೆಸಿದ್ದಾರೆ. 40 ಮಂದಿ ಕಾಂಗ್ರೆಸಿಗರು, 7 ಮಂದಿ ಮುಸ್ಲಿಂ ಲೀಗ್,1 ಸಿಪಿಐ ಕಾರ್ಯಕರ್ತ ಹತರಾಗಿದ್ದಾರೆ. ಶಾರೀರಿಕ ಹಾನಿಗಿಂತಲೂ ಸಿಪಿಎಂನ ಅಟ್ಟಹಾಸದಿಂದಾಗಿ ನಿರಾಶ್ರಿತರು, ಅಂಗವಿಕಲರಾದವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಹಾಲಿ ಮುಖ್ಯಮಂತ್ರಿ ಪಿಣರಾಯಿ ಮತ್ತು ಸಚಿವ ಬಾಲಕೃಷ್ಣನ್ ಕೇರಳದಲ್ಲಿ ಸಿಪಿಎಂನಿಂದ ನಡೆದ ಮೊದಲ ಕೊಲೆ ಪ್ರಕರಣದಲ್ಲಿ ಶಾಮೀಲಾದವರು ಎಂದು ತಿಳಿಸಿದರು.
ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಹಿಂದೆ ಲೆನಿನ್ನ ಯೋಜನೆಗೆ ಭಾರತ ಪ್ರತಿರೋಧ ತೋರಿತ್ತು. ಪ್ರಸ್ತುತ ಭಾರತದಲ್ಲಿ ನಡೆಸಲುದ್ದೇಶಿಸಿದ 2047 ರ ವೇಳೆಯ ರೆಡ್ಕಾರ್ನರ್ ಯೋಜನೆಗೆ ತಡೆಯೊಡ್ಡಬೇಕು. ಕಮ್ಯುನಿಷ್ಟರ ಒಡೆದಾಳುವ ನೀತಿಯನ್ನು ಅರ್ಥೈಸಿಕೊಂಡು ಅವರ ವಿವಿಧ ಮುಖಗಳನ್ನು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ಕಮ್ಯುನಿಷ್ಟರ ಕಾರ್ಯಶೈಲಿಯೇ ಒಡೆದಾಳುವ ನೀತಿ. ಮುಗ್ದ ದಲಿತರಲ್ಲಿ ಹಿಂದೂ ವಿರೋಧಿ ನೀತಿ ಹುಟ್ಟುಹಾಕಿದ್ದು ಇವರೇ. ಉಡುಪಿ ಮಠಕ್ಕೆಮುತ್ತಿಗೆ ಯೋಜನೆ ಕಮ್ಯುನಿಷ್ಟರ ಎರಡು ತಿಂಗಳ ಹಿಂದಿನ ತಂತ್ರವಾಗಿತ್ತು. ದಲಿತರನ್ನು ಎದುರು ಹಾಕಿಕೊಂಡು ಉತ್ತರಪ್ರದೇಶದಲ್ಲಿ ನಡೆಯುವ ಚುನಾವಣೆಗೆ ಅಜೆಂಡಾ ರೂಪಿಸಿಕೊಳ್ಳುವುದಾಗಿತ್ತು. ಆದರೆ ಅವರಿಗಿಂತ ಹೆಚ್ಚಾಗಿ ದಲಿತ ಬಂಧುಗಳು ಮಠದ ಪರವಾಗಿದ್ದರು ಎಂದು ತಿಳಿಸಿದರು.
ಸ್ವಾತಂತ್ರ್ಯಪೂರ್ವದಲ್ಲಿ ಗಾಂಧಿವಿಚಾರಧಾರೆಗಳ ಎದುರು ಮಾವೋ ಚಿಂತನೆಗಳು ನಡೆಯಲಿಲ್ಲ. ಆದರೆ ಇದನ್ನು ಅರ್ಥೈಸಿಕೊಂಡ ಬ್ರಿಟಿಷರು ೧೯೩೦ರಲ್ಲಿ ನಿಷೇಧಹೇರಿದಾಗ ಕಾಂಗ್ರೆಸ್ನೊಳಗೆ ನುಸುಳಿಕೊಂಡರು. ಒಡೆದಾಳುವ ನೀತಿಯ ಪರಿಣತರಾಗಿರುವ ಕಮ್ಯುನಿಷ್ಟರು ಕಾಂಗ್ರೆಸ್ಸನ್ನೇ ಪರಾವಲಂಭಿಗಳಾಗಿಸಿ ಕಾರ್ಮಿಕ ಸಂಘಟನೆಗಳನ್ನು ಸ್ಥಾಪಿಸಿ ಮೊದಲು ಕಾಂಗ್ರೆಸ್ಸನ್ನು ಬಳಿಕ ಮುಸ್ಲಿಂ ಲೀಗ್ಗೆ ಒತ್ತು ನೀಡಿ ದೇಶವನ್ನು ಒಡೆದರು. ಕಣ್ಣೂರು ಇಂದು ಕ್ರಿಮಿನಲ್ ರಾಜಕೀಯ ಘಟಾನುಘಟಿಗಳ ತಾಣವಾಗಿದೆ ಎಂದರು.
ಸಿಟಿಜನ್ ಕೌನ್ಸಿಲ್ ಅಧ್ಯಕ್ಷ ಸುನೀಲ್ ಆಚಾರ್ ಸ್ವಾಗತಿಸಿದರು. ಯೋಗೀಶ್ ಶರ್ಮ ವಂದೇ ಮಾತರಂ ಹಾಡಿದರು.
ವೇದಿಕೆಯಲ್ಲಿ ಕಮ್ಯುನಿಷ್ಟ್ ದೌರ್ಜನ್ಯಕ್ಕೊಳಗಾದ ಕಣ್ಣೂರು ಜಿಲ್ಲೆಯ ಎಳು ಕುಟುಂಬಗಳ ಸದಸ್ಯರಾದ ಸುಮೇಶ್, ಪ್ರಜೀಶ್, ಪ್ರಕಾಶ್ ಬಾಬು, ಪ್ರೇಮಜಿತ್ ಪಿಣರಾಯಿ, ಶೈಜೇಶ್ ಪಿಣರಾಯಿ, ಶಾಲಿನ್, ಪ್ರಕಾಶ್ ಕೂತುಪರಂಬ ಉಪಸ್ಥಿತರಿದ್ದರು.
“ನಾವು ಮಾನವಿರೋಧಿ ಕಮ್ಯುನಿಷ್ಟ್ ಕ್ರೂರಿಗಳ ಕೃತ್ಯಕ್ಕೆ ತಡೆಯೊಡ್ಡುವ ಹೋರಾಟಗಾರರು, ಅವರ ಅಕ್ರಮಗಳನ್ನು ತಡೆಯಲು ಬೇಕಾದಾಗ ಅನಿವಾರ್ಯವಾಗಿ ಅಪರಾಧಿಗಳನ್ನು ಮಾಡುತ್ತೇವೆ. ಆದರೆ ನಾವು ಅಪರಾಧಿಗಳಲ್ಲ.ನಾವು ಬಿಕ್ಷೆಯನ್ನು ಬೇಡುತ್ತಿಲ್ಲ. ನಾವು ಮಾಡುವ ಹೋರಾಟಗಳು ಕಾನುನು ದೃಷ್ಟಿಯಲ್ಲಿ ತಪ್ಪಾದರೂ ಮುಂದೆ ಅದು ಸರಿ ಎನಿಸಬಹುದು. ರಕ್ತರಂಜಿತ ಕ್ರೂರಕೃತ್ಯಗಳಿನ್ನು ಮಾನವ ವಿರೋಧಿಗಳಿಗೆ ತಡೆಯೊಡ್ಡುವ ಪ್ರಯತ್ನಕ್ಕೆ ನಿಮ್ಮ ಸಹಕಾರ ಬೇಕು. ರಾಜಕೀಯ ಕೊಲೆ ಕೃತ್ಯ ಅವಸಾನವಾಗಬೇಕು.
ಸದಾನಂದ ಮಾಸ್ತರ್, ಸಿಪಿಎಂ ದೌರ್ಜನ್ಯಕ್ಕೊಳಗಾಗಿ ಎರಡು ಕಾಲುಗಳನ್ನು ಕಳೆದುಕೊಂಡವರು
ಕೊಂದು ಓಡುವುದು ರಾಜಕೀಯವಾಗಬಾರದು, ಬದಲು ರಾಜಕೀಯ ಓಟದಲ್ಲಿ ಗೆಲ್ಲುವ ಕಡೆಗೆ ಗುರಿಯನ್ನು ಹೊಂದಬೇಕು. ವಾದಕ್ಕೆ ವಾದದ ಮೂಲಕವೇ ಉತ್ತರಿಸಬೇಕು ಹೊರತು, ವಾದದಲ್ಲಿ ಸೋಲುವ ಹಂತಕ್ಕಾಗುವಾಗ ವಾದಿಯನ್ನು ಕೊಲೆ ನಡೆಸುವುದು ಸಭ್ಯ ಸಿದ್ದಾಂತವಲ್ಲ.
ಸುರೇಶ್ ಗೋಪಿ, ರಾಜ್ಯಸಭಾ ಸದಸ್ಯ
ಕಮ್ಯುನಿಷ್ಟರು ಚೀನಾ ಚೇಲಾಗಳು. ಚೀನಾದಲ್ಲಿ ತೀವ್ರ ಚಳಿಯಾದಾಗ ಕೇರಳದಲ್ಲಿ ಅಕ್ಷಿ ಬರುತ್ತಿದೆ. ದೇಶಕ್ಕಿಂತ ಸೈದ್ದಾಂತಿಕ ನೆಲೆಗಟ್ಟೇ ಮುಖ್ಯ ಇವರಿಗೆ. ಕೇಜ್ರಿವಾಲ್ಗಿಂದ ಮೊದಲು ಯೂಟರ್ನ್ ಹೊಡೆಯುವವರು ಇವರೇ. ರಾಜಕೀಯವಾಗಿ ಗೆಲ್ಲೋದು ಅಂದರೆ ಕೊಲ್ಲುವುದಲ್ಲ. ಆದರೆ ಕಮ್ಯುನಿಷ್ಟರು ಕೊಲ್ಲುವುದೇ ಸಾಧನೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಅದು ಆರುವ ದೀಪ, ಇನ್ನು ಮಾವೋಗಳ ಆಟ ನಡೆಯುವುದಿಲ್ಲ. ಮಾಯಾನ್ಮಾರ್ ಕಾರ್ಯಚರಣೆ ನೆನಪಿಸಿಕೊಳ್ಳಿ. ಮಾವೋಗಳ ಹತ್ಯೆ ನಡೆಯುತ್ತಿದೆ.
ಚಕ್ರವರ್ತಿ ಸೂಲಿಬೆಲೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.