ನವದೆಹಲಿ: ಬಿಜೆಪಿ ಸಂಸದ ವರುಣ್ ಗಾಂಧಿ ಅವರು ವಿದೇಶಿ ಶಸ್ತ್ರಾಸ್ತ್ರ ದಲ್ಲಾಳಿಗಳ ಹನಿಟ್ರ್ಯಾಪ್ಗೆ ಒಳಗಾಗಿದ್ದು, ದಲ್ಲಾಳಿಗಳು ಅವರಿಂದ ದೇಶದ ಅಮೂಲ್ಯ ಮತ್ತು ತೀರಾ ಗೌಪ್ಯವಾದ ರಕ್ಷಣಾ ಮಾಹಿತಿಗಳನ್ನು ಕಳವು ಮಾಡಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ.
ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ದಲ್ಲಾಳಿ ಅಭಿಷೇಕ್ ವರ್ಮಾ ಅವರಿಗೆ ದೇಶದ ತೀರಾ ಗೌಪ್ಯವಾದ ಮತ್ತು ಅಮೂಲ್ಯ ರಕ್ಷಣಾ ಮಾಹಿತಿಗಳನ್ನು ಕಳವು ಮಾಡಿ ರವಾನಿಸಿದ್ದಾರೆ ಎನ್ನಲಾಗಿದೆ. ಮಹಿಳೆಯರನ್ನು ಮುಂದಿಟ್ಟುಕೊಂಡು ಅವರ ಮೂಲಕ ವರುಣ್ ಗಾಂಧಿ ಅವರನ್ನು ಬಲೆಗೆ ಸಿಲುಕಿಸಿ ಅಭಿಷೇಕ್ ರಕ್ಷಣಾ ಮಾಹಿತಿಯನ್ನು ಕಳವು ಮಾಡಿಸಿದ್ದಾನೆ ಎಂದು ಖಾಸಗಿ ಪತ್ರಿಕಾ ವರದಿ ತಿಳಿಸಿದೆ.
ಅಮೆರಿಕದ ಖ್ಯಾತ ಮಾಹಿತಿ ಹಕ್ಕು ಹೋರಾಟಗಾರ ಸಿ. ಎಡ್ಮಂಡ್ಸ್ ಅಲೆನ್ ಅವರು ಹನಿಟ್ರ್ಯಾಪ್ ಬಗ್ಗೆ ಪ್ರಧಾನಿ ಸಚಿವಾಲಯಕ್ಕೆ ಪತ್ರವೊಂದರ ಮೂಲಕ ತಿಳಿಸಿದ್ದು, ರಾಷ್ಟ್ರೀಯ ಭದ್ರತೆ ಮಾಹಿತಿ ನೀಡಿರುವ ಸಾಧ್ಯತೆ ಇದೆ. ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿ ಸದಸ್ಯರೂ ಆಗಿರುವ ವರುಣ್ ಗಾಂಧಿ ಅವರನ್ನು ಅಭಿಷೇಕ್ ವರ್ಮಾ ಹನಿಟ್ರ್ಯಾಪ್ ಬಲೆಗೆ ಸಿಲುಕಿಸಿ ಬ್ಲ್ಕಾಕ್ ಮೇಲ್ ಮಾಡಿರುವ ಸಾಧ್ಯತೆ ಇದೆ. ಈ ಮೂಲಕ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ಕಳವು ಮಾಡಿ ವಿದೇಶಗಳಿಗೆ ನೀಡಿರುವ ಸಾಧ್ಯತೆ ಬಗ್ಗೆ ಪತ್ರದಲ್ಲಿ ತಿಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಎಡ್ಮಂಡ್ಸ್ ಅವರು ಇದರ ಪೂರಕ ಮಾಹಿತಿಗಳಿರುವ ಸಿಡಿ ಹಾಗೂ ಕೆಲ ಫೋಟೋಗಳನ್ನೂ ಪಿಎಂಒ ಸಚಿವಾಲಯಕ್ಕೆ ಕಳುಹಿಸಿದ್ದು, ಹನಿಟ್ರ್ಯಾಪ್ಗೆ ಒಳಗಾದ ಪತ್ರದ ಪ್ರತಿಯನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೂ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.