ನವದೆಹಲಿ: ಭಾರತ ಮತ್ತು ಅಮೇರಿಕಾ ಜನರಿಂದ-ಜನರಿಗಾಗಿ ಎಂಬ ವಿನಿಮಯ ಕಾರ್ಯಕ್ರಮದ ಮೂಲಕ ವಿಶ್ವದ ಅತ್ಯಂತ ಕಠಿಣ ಸವಾಲುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ಅಮೇರಿಕಾ ರಾಜ್ಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವ್ಯವಹಾರಗಳ ಉಪ ಕಾರ್ಯದರ್ಶಿ ಇವಾನ್ ರಿಯಾನ್ ಹೇಳಿದ್ದಾರೆ.
ಕಳೆದ ಬಾರಿಯ ಭಾರತ ಭೇಟಿಯಿಂದ ಇಂಡೋ-ಯುಎಸ್ ಸಂಬಂಧಗಳಿಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿನಿಮಯ ಬಹಳ ಅಮೂಲ್ಯವಾದುದು ಎಂದು ತಿಳಿದಿದೆ. ಅದು ವಿಕಸನಗೊಂಡಿದೆ ಎಂದು ರಿಯಾನ್ ಹೇಳಿದ್ದಾರೆ.
ಯೂರೋಪ್ ಹೊರತುಪಡಿ ಭಾರತ ದೇಶ ಅಮೇರಿಕನ್ನರ ಅತಿ ದೊಡ್ಡ ವಿದೇಶಿ ಅಧ್ಯಯನ ತಾಣವಾಗಿದೆ. ಅಮೇರಿಕಾದ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಭಾರತದ ಸುಮಾರು ೧,೩೦,೦೦೦ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ ಎಂದು ರಿಯಾನ್ ಹೇಳಿರುವುದಾಗಿ ಡಿಪ್ಲೊಮೆಸಿ ಇಂಡಿಯಾ.ಕಾಂ ಪ್ರಕಟಿಸಿದೆ.
ಅಮೇರಿಕಾದ ಸುಮಾರು ೧೫೦ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಯುವಕರ ರಾಷ್ಟ್ರೀಯ ಭಾಷಾ ಭದ್ರತೆ ಉಪಕ್ರಮದ ಅಡಿಯಲ್ಲಿ ಹಿಂದಿ ಭಾಷೆಯನ್ನು ಕಲಿತಿದ್ದಾರೆ. ಅಮೇರಿಕಾದ ೧೬,೦೦೦ ರಾಜ್ಯ ಇಲಾಖೆಯ ವಿನಿಮಯ ಕಾರ್ಯಕ್ರಮ ಭಾರತದ ಸಂಖ್ಯೆ ಅತೀ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ಎರಡು ರಾಷ್ಟ್ರಗಳ ನಡುವೆ ಪ್ರಸ್ತುತ ಸವಾಲುಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಿದೆ ಎಂದು ರಿಯಾನ್ ಹೇಳಿದ್ದಾರೆ.
೧೯೫೦ರಲ್ಲಿ ಪ್ರಾರಂಭಿಸಲಾದ ಫುಲ್ಬ್ರೈಟ್-ನೆಹರೂ ಪ್ರೋಗ್ರಾಂನಲ್ಲಿ ಭಾರತೀಯ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿದೆ.
ನಮ್ಮ ಸರ್ಕಾರಗಳು ಪ್ರಮುಖ ವಲಯಗಳ ಗಣನೀಯ ವಿಚಾರಗಳತ್ತ ಗಮನ ಹರಿಸುತ್ತಿದೆ ಎಂದು ಅಮೇರಿಕಾದ ಕಾರ್ಯದರ್ಶಿ ಜಾನ್ ಕೆರ್ರಿ ಹೇಳಿರುವುದಾಗಿ ರಿಯಾನ್ ಹೇಲಿದ್ದಾರೆ.
ಶಿಕ್ಷಣ, ಹವಾಮಾನ ಬದಲಾವಣೆ ನೀತಿ, ವ್ಯಾಪಾರ ಮತ್ತು ಹೂಡಿಕೆ, ರಾಜತಂತ್ರಗಳಲ್ಲಿ ಸಹಕಾರದ ಜೊತೆಗೆ ಸಂಬಂಧಗಳು ಹೆಚ್ಚಾಗಿದೆ. ಜನರಿಂದ-ಜನರಿಗಾಗಿ ವಿನಿಮಯ ಕಾರ್ಯಕ್ರಮ ನಗರಗಳು, ರಾಜ್ಯಗಳು ಅನಂತರ ಸರ್ಕಾರಗಳ ನಡುವಿನ ವ್ಯವಹಾರ, ಖಾಸಗಿ ವಿಭಾಗಗಳ ಪಾಲುದಾರಿಕೆಯನ್ನು ಹೆಚ್ಚಿಸಲಿದೆ ಎಂದು ಇವಾನ್ ರಿಯಾನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.