ಮಂಗಳೂರು : ಕೇರಳದಲ್ಲಿ ಎಡರಂಗದ ಸರಕಾರ ಸ್ಥಾಪನೆಯಾದ ಬಳಿಕ ರಾಜಕೀಯ ಹಾಗೂ ಸೈದ್ದಾಂತಿಕ ವೈಷಮ್ಯದ ಹತ್ಯೆಗಳು ಹೆಚ್ಚಾಗಿರುವುದು ಅತ್ಯಂತ ಅಮಾನವೀಯ ಹಾಗೂ ಅಕ್ಷಮ್ಯ. ಇದೀಗ ಎಡರಂಗದ ಗೂಂಡಾ ಪಡೆಯ ರಕ್ತದಾಹಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರವರ ತವರಿನಲ್ಲಿಯೇ ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತ ರಮಿತ್ ಬಲಿಯಾಗಿದ್ದಾರೆ. ರಮಿತ್ರವರ ತಂದೆಯೂ ಸಹ ಪರಿವಾರದ ಸಕ್ರಿಯ ಸ್ವಯಂಸೇವಕರಾಗಿದ್ದರು ಎಂಬ ಕಾರಣಕ್ಕೆ 2002ರಲ್ಲಿ ಇದೇ ಕಮ್ಯೂನಿಸ್ಟರು ಅವರನ್ನು ಕೊಂದಿದ್ದರು. ಇದೀಗ ಅವರ ಮಗನನ್ನು ಕೊಂದು ಅವರ ವಿಕೃತ ಹಾಗೂ ರಾಕ್ಷಸಿ ಮಾನಸೀಕತೆಯನ್ನು ಎತ್ತಿತೋರಿಸಿದ್ದಾರೆ. ಇದು ಎಡರಂಗ ಸರಕಾರದ ಕೃಪಾಪೋಷಿತ ಈ ವರ್ಷದ ಆರನೇ ಹತ್ಯೆ.
ಕೇರಳದ ದೇಶಭಕ್ತರು ಈ ಸರಣಿ ಕೊಲೆಗಳ ವಿರುದ್ಧ ಅನೇಕ ಪ್ರತಿಭಟನೆಗಳನ್ನು ಹಾಗೂ ಹರತಾಳಗಳನ್ನು ಮಾಡಿದರೂ ಸರಕಾರ ಯಾವ ಕ್ರಮಗಳನ್ನು ಇವರೆಗೂ ಕೈಗೊಂಡಿಲ್ಲ. ಈ ಮಾದರಿಯ ಅಪ್ರಚೋದಿತ ದಾಳಿಗಳು ಹಾಗೂ ದೌರ್ಜನ್ಯಗಳನ್ನು ತಡೆಯುವಂತೆ 2016ರ ಸಪ್ಟೆಂಬರ್ನಲ್ಲಿ ಕೇರಳದ ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಮನವಿ ಸಲ್ಲಿಸಿದ್ದರೂ ಅದ್ಯಾವುದನ್ನು ಪರಿಗಣಿಸದೆ, ಇದೀಗ ಸ್ವ ಕ್ಷೇತ್ರದಲ್ಲೇ ಹತ್ಯೆಯಾಗಿರುವುದು ಮುಖ್ಯಮಂತ್ರಿ ಸ್ಥಾನದ ಬದ್ಧತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.
ಇಷ್ಟಕ್ಕೂ ಈ ಕಮ್ಯೂನಿಸ್ಟರು ಭಯೋತ್ಪಾದಕರಿಗಿಂತ ಕಡಿಮೆ ಏನಿಲ್ಲ. ಸಿ.ಪಿ.ಎಂ ಪಕ್ಷದ ಕೇಡರ್ಗಳು ಬಾಂಬ್ ತಯಾರಿಕೆಯಲ್ಲಿ ಸಿಕ್ಕಿಬಿದ್ದ ನೂರಾರು ಉದಾಹರಣೆಗಳು ಹಾಗೂ ದಾಖಾಲಾತಿಗಳು ಕೇರಳದಲ್ಲಿ ಇಗಲೂ ಲಭ್ಯವಿದೆ. ಆಗಸ್ಟ್ ತಿಂಗಳಲ್ಲಿ ಎಡರಂಗದ ಪ್ರಮುಖರೊಬ್ಬರು ಕಚ್ಚಾ ಬಾಂಬ್ ತಯಾರಿಸುತ್ತಿದ್ದಾಗ ಅಕಸ್ಮಿತವಾಗಿ ಸಿಡಿದು ಅವರ ಸಾವನ್ನು ಅವರೇ ಆಹ್ವಾನಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಕೇವಲ ಕಣ್ಣೂರು ಜಿಲ್ಲೆಯೊಂದರಲ್ಲಿಯೇ ಕಳೆದ ಆರೇಳು ತಿಂಗಳುಗಳಿಂದ 15ಕ್ಕೂ ಹೆಚ್ಚು ಕಚ್ಚಾ ಬಾಂಬ್ಗಳು ವಶಕ್ಕೆ ಸಿಕ್ಕಿರುವುದು ಕಮ್ಯೂನಿಸ್ಟರ ರಾಕ್ಷಸೀ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ರಮಿತ್ರ ಕೊಲೆಗಾರರನ್ನು ಸರಕಾರ ಕೂಡಲೆ ಬಂಧಿಸಿ ಮುಂಬರುವ ದಿನಗಳಲ್ಲಿ ಈ ಕೃತ್ಯಗಳು ಜರುಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಎಡರಂಗದ ಕ್ರೂರ ರಾಜಕೀಯ ನಡೆ ಹೀಗೆ ಮುಂದುವರೆದಲ್ಲಿ ಬಿಜೆಪಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಿದೆ ಹಾಗೆಯೇ ಕೇರಳದ ಎಲ್ಲಾ ಸ್ವಯಂಸೇವಕರೊಂದಿಗೆ ಹಾಗೂ ರಾಷ್ಟ್ರ ಭಕ್ತ ಕಾರ್ಯಕರ್ತರೊಂದಿಗೆ ಬಿಜೆಪಿ ಸದಾಜೊತೆಯಲ್ಲಿರುತ್ತದೆ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.