ನವದೆಹಲಿ: ಪ್ರಯಾಣಿಕರಿಗೆ 92 ಪೈಸೆ ಪ್ರಯಾಣ ವಿಮೆ ನೀತಿ ಯಶಸ್ಸು ಸಾಧಿಸಿದ್ದು, ಇದೀಗ ಐಆರ್ಸಿಟಿಸಿ ಪ್ರಯಾಣಿಕರ ಮೊಬೈಲ್, ಲ್ಯಾಪ್ಟಾಪ್ ಮತ್ತಿತರ ಉಪಕರಣಗಳಿಗೂ ವಿಮೆ ಯೋಜನೆ ಜಾರಿಗೆ ತರಲು ಐಆರ್ಸಿಟಿಸಿ ಚಿಂತನೆ ನಡೆಸಿದೆ.
ಐಆರ್ಸಿಟಿಸಿ ಅಧಿಕಾರಿಗಳು, ವಿಮಾ ಕಂಪೆನಿಗಳ ಅಧಿಕಾರಿಗಳು ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಈ ಯೋಜನೆ ಜಾರಿಗೆ ತರಲು ಐಆರ್ಸಿಟಿಸಿ ಮುಂದಾಗಿದೆ.
ಪ್ರಯಾಣಿಕರು ಕೆಲವು ಸಂದರ್ಭಗಳಲ್ಲಿ ವಿಮೆ ಪಡೆಯಲು ವಂಚಿಸುವ ಬಗ್ಗೆ ವಿಮಾ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿದ್ದು, ಇದಕ್ಕಾಗಿ ಆರಂಭದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರು, ಸರ್ಕಾರಿ ಅಧಿಕಾರಿಗಳಿಗೆ ಮೊದಲ ಹಂತದಲ್ಲಿ ಈ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಲಹೆ ನೀಡಲಾಗಿದೆ ಎಂದು ಐಆರ್ಸಿಟಿಸಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ಮನೋಚಾ ಹೇಳಿದ್ದಾರೆ.
ಮೊಬೈಲ್, ಲ್ಯಾಪ್ಟಾಪ್ ಕಳವು ಅಥವಾ ರೈಲು ಅಪಘಾತ ಈ ಎರಡೂ ಸಂದರ್ಭಗಳಲ್ಲೂ ವಿಮಾ ಯೋಜನೆ ಲಭ್ಯವಾಗುವಂತೆ ಐಆರ್ಸಿಟಿಸಿ ಬಯಸಿದೆ.
ಐಆರ್ಸಿಟಿಸಿ ಕಳೆದ ತಿಂಗಳು ಪ್ರಯಾಣ ವಿಮಾ ಯೋಜನೆ ಬಿಡುಗಡೆ ಮಾಡಿದ್ದು, ಈಗಾಗಲೇ ಸುಮಾರು 1 ಕೋಟಿ ನಾಗರಿಕರು ಇದನ್ನು ಆಯ್ಕೆ ಮಾಡಿಕೊಂಡಿದ್ದಾರೆ. 92 ಪೈಸೆ ಪ್ರೀಮಿಯಂನ ಪ್ರಯಾಣ ವಿಮೆ ಯೋಜನೆ ರೈಲು ಅಪಘಾತ, ಅಹಿತಕರ ಘಟನೆ, ಡರೋಡೆ, ಭಯೋತ್ಪಾದಕ ದಾಳಿ ಮತ್ತಿತರ ಸಂದರ್ಭಗಳಲ್ಲಿ ರೂ.10 ಲಕ್ಚದ ವರೆಗೆ ವಿಮೆ ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.