ನವದೆಹಲಿ: ತಾಂತ್ರಜ್ಷಾನದ ಬಳಕೆ, ಪಾರದರ್ಶಕ ಪ್ರಕ್ರಿಯೆ, ವ್ಯವಹಾರದಲ್ಲಿ ವಿನಾಯಿತಿಯಿಂದ ಭವಿಷ್ಯದಲ್ಲಿ ಭಾರತದಲ್ಲಿ ಶೇ.8ರಷ್ಟು ಬೆಳವಣಿಗೆ ಸಾಧ್ಯವಾಗಲಿದೆ ಎಂದು ಸರ್ಕಾರ ಹೇಳಿದೆ.
ರಾಜ್ಯ ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಕೇದ್ರದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಾಮಗೆ ಶೇ. ೮ರಷ್ಟು ಬೆಳವಣಿಗೆ ಹೊಂದಲು ಸಾಧ್ಯವಿದೆ ಮತ್ತು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯಗಳು ಕೂಡ ಈ ಪ್ರಲಾಪದಿಂದ ಹೊರಬಂದು ಹೊಸತನವನ್ನು ಬಯಸುತ್ತಿವೆ ಎಂದು ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಾಗೃತಿ ಮೂಡಿಸುವುದರಿಂದ ರಾಜಕೀಯವಾಗಿ ಸಹಾಯಕವಾಗಿದೆ. ನೀವು ಸಮಸ್ಯೆಗಳು ಮತ್ತು ಪ್ರತಿರೋಧಗಳನ್ನು ತೊಡೆದು ಹಾಕಲು ಯಶಸ್ವಿಯಾದಲ್ಲಿ ಮತ್ತು ತಂತ್ರಜ್ಙಾನವನ್ನು ಬಳಸಿ ಪಾರದರ್ಶಕ ಪ್ರಕ್ರಿಯೆಯನ್ನು ಸ್ಥಾಪಿಸಲು ಬದ್ಧವಾಗಿದ್ದಲ್ಲಿ ಶೇ.8 ಬೆಳವಣಿಗೆ ಕಾಣಲು ಸಾಧ್ಯ.
ಕೇಂದ್ರ ಸರ್ಕಾರ 3 ಪ್ರಮುಖ ವಿಷಯಗಳಾದ ಜಿಎಸ್ಟಿ, ಜನ್ ಧನ್, ಮೊಬೈಲ್, ಆಧಾರ್ ಯೋಜನೆ, ಬೆಖವಣಿಗೆ ಮತ್ತು ಹೂಡಿಕೆಗೆ ವ್ಯವಹಾರದಲ್ಲಿ ವಿನಾಯಿತಿ ನೀಡುವ ಬಗ್ಗೆ ಕಾರ್ಯ ನಿರ್ಯ ನಿರ್ವಹಿಸುತ್ತಿದೆ.
ಮುಂದಿನ 4-5 ತಿಂಗಳುಗಳಲ್ಲಿ ವಿದೇಶಿ ನೇರ ಹೂಡಿಕೆ ಆರಂಭವಾಗಲಿದ್ದು, ಇದನ್ನು ಅರ್ಥಪೂರ್ಣ ಹೂಡಿಕೆಯಾಗಿ ಪರಿವರ್ತಿಸಿ ಉದ್ಯೋಗ ಸೃಷ್ಟಿ ರೂಪಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.