ನವದೆಹಲಿ: ಪಾಕಿಸ್ಥಾನಿ ಕಲಾವಿದರನ್ನು ಬೆಂಬಲಿಸುತ್ತಿರುವ ಕರಣ್ ಜೋಹರ್, ಮಹೇಶ್ ಭಟ್ ಮತ್ತಿರರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಮೇಜರ್ ಗೌರವ್ ಅರ್ಯ ಬರೆದಿರುವ ಬಹಿರಂಗ ಪತ್ರ ಈಗ ವೈರಲ್ ಆಗಿದೆ.
ಭಾರತ ಮತ್ತು ಪಾಕಿಸ್ಥಾನದ ನಡುವಿನ ಯುದ್ಧ ಯೋಧರ ವೈಯಕ್ತಿಕ ಯುದ್ಧವಲ್ಲ. ಪ್ರತಿ ಯೋಧನು ನನಗೆ ಮತ್ತು ನಿಮಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾನೆ ಹಾಗೂ ಶತ್ರುಗಳನ್ನು ಕೊಲ್ಲುತ್ತಿದ್ದಾನೆ. ಓರ್ವ ಯೋಧ ಅನುಭವಿಸಿದ ಪರಿಸ್ಥಿತಿ ಮತ್ತು ವರ್ತಿಸಿದ್ದನ್ನು ಯೋಚಿಸಿ, ಕರಣ್ ಜೋಹರ್ ಮತ್ತು ಮಹೇಶ್ ಭಟ್ ಅವರೇ, ಯೋಧ ತನ್ನ ಉನ್ನತ ಅಧಿಕಾರಿ ಬಳಿ ಹೋಗಿ, ಸರ್, ನಾನು ಗಡಿ ನಿಯಂತ್ರಣ ರೇಖೆಯಲ್ಲಿ ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ಬಂದೊದಗಿದ್ದರೆ, ಜನರು ಎರಡೂ ದೇಶಗಳ ನಡುವೆ ಏನೂ ನಡೆದೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದರ ಪರಿಣಾಮವನ್ನು ಅರ್ಥೈಸಿ ಎಂದು ಕರಣ್ ಜೋಹರ್ ಮತ್ತು ಮಹೇಶ್ ಭಟ್ ಅವರನ್ನುದ್ದೇಶಿಸಿ ಬರೆದಿದ್ದಾರೆ.
ಭಾರತೀಯ ಸೇನೆ ಸೀಮಿತ ದಾಳಿ ನಡೆಸಿರುವುದು ದೇಶವನ್ನು ಭಾವುಕಗೊಳಿಸಿದೆ ಮತ್ತು ಸಂತೋಷವನ್ನು ತಂದಿದೆ. ಆದರೆ ಇದಕ್ಕೆ ಕೆಲವರು ಹೊರತಾಗಿದ್ದಾರೆ.
ಜೆಎನ್ಯುದಲ್ಲಿ ನಡೆದ ಚರ್ಚಾಕೂಟ ‘ಬೌದ್ಧಿಕ ಭಯೋತ್ಪಾದನೆ’ ವಿಚಾರವಾಗಿ ಉದಾಹರಣೆ ನೀಡಿದ ಗೌರವ್ ಆರ್ಯ, ಕರಣ್ ಜೋಹರ್ ಅವರು ಫವಾದ್ ಖಾನ್ರನ್ನು ಪಾಕಿಸ್ಥಾನಕ್ಕೆ ಹೋಗಲು ಬಿಟ್ಟರೆ ಭಯೋತ್ಪಾದನೆ ನಿಲ್ಲಲು ಸಾಧ್ಯವೇ ಎಂದು ಕೇಳುತ್ತಾರೆ. ಭಯೋತ್ಪಾದನೆ ನಿಲ್ಲಿಸಿ, ಮಾತುಕತೆಯನ್ನಲ್ಲ, ನಾವು ಪಾಕ್ ಜೊತೆ ಮಾತುಕತೆ ಮುಂದುವರೆಸಬೇಕು ಎಂದು ಮಹೇಶ್ ಭಟ್ ಅದಕ್ಕೆ ಧ್ವನಿಗೂಡಿಸುತ್ತಾರೆ. ಇನ್ನೊಂದೆಡೆ ಕ್ರಿಕೆಟ್ ಮಂಡಳಿ ಕ್ರಿಕೆಟ್ ಪಂದ್ಯಗಳನ್ನು ಆಡಿಸಲಿದೆ. ವ್ಯಾಪಾರ ಕೇಂದ್ರಗಳು ವ್ಯಾಪಾರ ವಹಿವಾಟನ್ನು ನಡೆಸಲಿವೆ. ಆದರೆ ನಮ್ಮ ಸೈನಿಕರು ಮಾತ್ರ ಗಡಿಯಲ್ಲಿ ಸಾಯುತ್ತಿದ್ದಾರೆ.
ಪಾಕಿಸ್ಥಾನಿ ಕಲಾವಿದರನ್ನು ವಾಪಸ್ ಕಳುಹಿಸುವುದರಿಂದ, ಕ್ರಿಕೆಟ್ ಆಟವಾಡುವುದನ್ನು ನಿಲ್ಲಿಸುವುದರಿಂದ, ವ್ಯಾಪಾರ ವಹಿವಾಟು ನಿಲ್ಲಿಸುವುದರಿಂದ ಪಾಕ್ನ ಭಯೋತ್ಪಾದನೆ ನಿಲ್ಲಬಹುದೇ ಎಂಬ ಪ್ರಶ್ನೆಗೆ ನನ್ನ ಉತ್ತರವೇನೆಂದರೆ ಇದು ಖಂಡಿತವಾಗಿಯೂ ಸಾಧ್ಯವಿಲ್ಲ. ಆದರೆ ಇವೆಲ್ಲವೂ ಒಗ್ಗಟ್ಟಿನಿಂದ ಆಗಬೇಕಾದದ್ದು. ಇದೊಂದು ಭಾವನಾತ್ಮಕವಾಗಿ ಎಲ್ಲರಲ್ಲೂ ಐಕಮತ್ಯ ಇರಬೇಕಾದಂತಹುದು. ಏಕೆಂದರೆ ನೀವು ಚಲನಚಿತ್ರ ನಿರ್ಮಿಸಬಹುದು, ಕ್ರಿಕೆಟ್ ಪಂದ್ಯಾಟಗಳನ್ನೂ ನಡೆಸಬಹುದು, ವ್ಯಾಪಾರ ವಹಿವಾಟನ್ನು ಮುಂದುವರೆಸಬಹುದು ಎಂದಾದರೆ, ನಾನು ಒಬ್ಬನೇ ಸಂಘರ್ಷವನ್ನು ಯಾರಿಗಾಗಿ ತಡೆಯಬೇಕು ಎಂಬ ಭಾವನೆ ಸೈನಿಕರಲ್ಲಿ ಮೂಡಬಹುದು.
ಭಾರತ ಮತ್ತು ಪಾಕ್ ನಡುವಿನ ಹೋರಾಟ ಬರೀ ಸೈನಿಕನೊಬ್ಬನ ವೈಯಕ್ತಿಕ ಸಂಘರ್ಷವಲ್ಲ. ಯೋಧರು ನನಗೆ ಮತ್ತು ನಿಮಗಾಗಿ, ದೇಶಕ್ಕಾಗಿ ಹೋರಾಡುತ್ತಾರೆ. ಗಡಿ ಕಾಯುವ ಯೋಧನೊಬ್ಬ ಒಂದೊಮ್ಮೆ ಕರಣ್ ಜೋಹರ್ ಅಥವಾ ಮಹೇಶ್ ಭಟ್, ಪಾಕ್ ಕಲಾವಿದರ ಪರ ವಹಿಸಿರುವವರಂತೆ ಯೋಚಿಸಿದರೆ ಏನಾಗಬಹುದು ಎಂದು ನೀವು ಒಮ್ಮೆ ಯೋಚಿಸಿ. ಯೋಧರು ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೈನಿಕರೊಂದಿಗೆ ಹಸ್ತಲಾಘವ ಮಾಡಬೇಕಿತ್ತೇ ? ಉಳಿದವರೆಲ್ಲರೂ ಏನೂ ನಡೆದೇ ಇಲ್ಲ ಎನ್ನುವ ಭಾವ ಹೊಂದಿರುವಾಗ, ಏತಕ್ಕಾಗಿ ಯೋಧನೊಬ್ಬನೇ ತನ್ನ ಜೀವನವನ್ನು ನಮಗಾಗಿ ತ್ಯಾಗ ಮಾಡಬೇಕು ?
ಆದರೆ ಯೋಧನೊಬ್ಬನು ದೇಶದ್ರೋಹದ ಚಿಂತನೆಗೂ ಮೊದಲು ತನ್ನ ಪ್ರಾಣಾರ್ಪಣೆ ಮಾಡುತ್ತಾನೆ.
ದೇಶಭಕ್ತಿ ಮತ್ತು ತ್ಯಾಗ ಕೇವಲ ಯೋಧನೊಬ್ಬನಿಗಿರಬೇಕಾದುದು ಮಾತ್ರವಲ್ಲ, ಭಾರತ ಮಹೇಶ್ ಭಟ್ ಅವರಿಗೂ ಸೈನಿಕರಂತೆ ಅವರದೇ ದೇಶ.
70 ವರ್ಷಗಳಿಂದ ಪಾಕಿಸ್ಥಾನ ಭಾರತೀಯರನ್ನು ಹತ್ಯೆಗೈಯ್ಯುತ್ತಿದೆ. ನಮ್ಮ ಸಹೋದರರ ಮನೆಯಲ್ಲಿನ ಶೋಕಾಚರಣೆಗಿಂತೆ ಚಲನಚಿತ್ರ ತಯಾರಿಸುವುದು, ಕ್ರಿಕೆಟ್ ಆಡುವುದು ಮುಖ್ಯವಾಯಿತಲ್ಲವೇ ?
ಉರಿ ದಾಳಿಯಲ್ಲಿ ಹುತಾತ್ಮರಾದ 18 ಯೋಧರ ಕುಟುಂಬಗಳ ಕನಸುಗಳು ಗಾಜಿನಂತೆ ಪುಡಿಯಾಗಿವೆ. ಆದರೆ ನಿಮ್ಮಂತಹವರಿಂದ ಒಂದಾದರೂ ಸಾಂತ್ವನದ ಮಾತುಗಳು ಬಂದಿವೆಯೇ ? ಅದೇ ಪಾಕ್ ಕಲಾವಿದರಾದ ಫವಾದ್ ಖಾನ್ರನ್ನು ವಾಪಾಸ್ ಕಳುಹಿಸಿ ಎಂದಾಗ ನಿಮಗೆ ಎಷ್ಟು ನೋವಾಗಿದೆ. ನಮ್ಮ ಸೈನಿಕರ ನೋವಿಗಿಂತ ಅವರನ್ನು ವಾಪಾಸ್ ಕಳುಹಿಸುವ ನೋವು ನಿಮಗೆ ಹೆಚ್ಚಾಯಿತಲ್ಲವೇ ?
ಗಡಿಯಿಂದ ಸಾವಿರಾರು ಕಿಲೋ ಮೀಟರ್ ದೂರದಲ್ಲಿರುವ ನಿಮಗೆ ಶಾಂತಿಯನ್ನು ಕಾಪಾಡಿ ಎಂದು ಹೇಳುವುದು ಸುಲಭ. ಆದರೆ ಅಲ್ಲಿರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಇದೀಗ ನಮಗೆ ಯುದ್ಧವೊಂದೇ ದಾರಿ.
10 ವರ್ಷದ ಪುಟ್ಟ ಬಾಲಕಿ ಯೋಧರ ಪರವಾಗಿ ಒಂದು ಪತ್ರವನ್ನು ಬರೆದಿದ್ದಾಳೆ. ಸೈನಿಕರ ಬೆಂಬಲ ಕೋರುವ ಈ ಪತ್ರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅದೇ ಮಹೇಶ್ ಭಟ್ ಅವರೂ ತಮ್ಮ ಅಭಿಪ್ರಾಯವನ್ನು ಪತ್ರದಲ್ಲಿ ಬರೆದು ಹೆಮ್ಮೆಯಿಂದ ಟ್ವೀಟ್ ಮಾಡಿದ್ದಾರೆ. ನೀವೇ ಈ ಎರಡೂ ಪತ್ರಗಳನ್ನು ಹೋಲಿಸಿ ನೋಡಿ ನಿಮಗೇ ತಿಳಿಯುತ್ತದೆ.
ನಾನು ಅದಿತಿಯನ್ನು ಬೆಂಬಲಿಸುತ್ತೇನೆ ಎಂದು ಮೇಜರ್ ಗೌರವ್ ಅರ್ಯ ಅವರು ಬಹಿರಂಗ ಪತ್ರವನ್ನು ಬರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.