ನವದೆಹಲಿ: ಭಾರತ ಚಬಹಾರ್ ಮುಕ್ತ ವಲಯದಲ್ಲಿ ಹೂಡಿಕೆಯನ್ನು ತ್ವರಿತಗೊಳಿಸಲಿದೆ ಕೇಂದ್ರ ಸರ್ಕಾರ ಹೇಳಿದೆ.
ಭಾರತ ಮತ್ತು ಇರಾನ್ ಚಬಹಾರ್ ಪೋರ್ಟ್ ಸಮೀಕ್ಷೆ ನಡೆಸಲು ಇರಾನ್ನ ರಸ್ತೆ ಮತ್ತು ನಗರಾಭಿವೃದ್ಧಿ ಸಚಿವ ಅಬ್ಬಾಸ್ ಅಖೌಂಡಿ ಹಾಗೂ ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರೆ ಸಚಿವ ನಿತಿನ್ ಗಡ್ಕರಿ ಅವರನೊಳಗೊಂಡ ದ್ವಿಪಕ್ಷೀಯ ಸಭೆಯಲ್ಲಿ ಈ ಬಗ್ಗೆ ಮಾತುಕತೆ ನಡೆಸಲಾಗಿದೆ.
ಚಬಹಾರ್-ಜೆಹ್ದಾನ್ ರೈಲ್ವೆ ನಿರ್ಮಾಣ, ಚಬಹಾರ್ ಮುಕ್ತ ವಲಯದಲ್ಲಿ ಭಾರತದ ಹೂಡಿಕೆ, ಭಾರತ ಮತ್ತು ಇರಾನ್ ನಡುವೆ ಪ್ರಾದೇಶಿಕ ಸಂಪರ್ಕ ಸೇರಿಂತೆ ಇನ್ನಿತರ ಯೋಜನೆಗಳ ಕಾರ್ಯವನ್ನು ತ್ವರಿತ ಗತಿಯಲ್ಲಿ ನಡೆಸುವ ಬಗ್ಗೆಯೂ ಚರ್ಚಿಸಲಾಗಿದೆ.
ಭಾರತ, ಇರಾನ್ ಮತ್ತು ಅಫ್ಘಾನಿಸ್ಥಾನ ಗಡಿ ಪ್ರದೇಶದಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಸಾರಿಗೆಗೆ ಚಬಹಾರ್ ಒಪ್ಪಂದ ಅಗತ್ಯ ಕಾನೂನು ಚೌಕಟ್ಟನ್ನು ಒದಗಿಸಲಿಸಲಿದೆ ಎಂದು ಭಾರತದ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಅಂತಾರಾಷ್ಟ್ರೀಯ ನಾರ್ತ್-ಸೌತ್ ಸಾರಿಗೆ ಕಾರಿಡಾರ್ (INSTC) ಪ್ರಾಮುಖ್ಯತೆಯಆಧಾರದಲ್ಲಿ ಉಭಯ ದೇಶಗಳು ಅದರ ಪ್ರಚಾರಕ್ಕಾಗಿಕ್ರಮ ಕೈಗೊಳ್ಳಲು ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.