ನವದೆಹಲಿ: ಕೊನೆಗೂ ಶೃಂಗ ಸಭೆ ರದ್ದಾಗಿದೆ. ಪಾಕಿಸ್ಥಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆಯಬೇಕಿದ್ದ ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸುವವರಿಗಿಂತ ಜಾಸ್ತಿ ಪಾಲ್ಗೊಳ್ಳದೇ ಇರುವವರ ಸಂಖ್ಯೆಯೇ ಅಧಿಕವಾಗಿತ್ತು.
ಉರಿ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿ ಹಿಂದೆ ಪಾಕಿಸ್ಥಾನ ಕೈವಾಡ ಖಚಿತಗೊಂಡ ಬಳಿಕ ಭಾರತ ತೀವ್ರ ಪ್ರತಿರೋಧವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡಿತ್ತು. ವಿಶ್ವಸಂಸ್ಥಯಲ್ಲೂ ಭಾರತದ ನಡೆ ಪಾಕಿಸ್ಥಾನಕ್ಕೆ ಹಿನ್ನಡೆಯಾಗುವಂತೆ ಮಾಡಿತ್ತು. ಆದರೂ ಮೊಂಡು ಹಠ ಮಾಡುತ್ತಿರುವ ಪಾಕ್, ಸಮರಕ್ಕೆ ಸನ್ನದ್ಧವಾಗುತ್ತಿದ್ದೇವೆ ಎಂಬ ಹೇಳಿಕೆಗಳನ್ನು ನೀಡಲಾರಂಭಿಸಿತು.
ಭಾರತ ಮತ್ತು ಪಾಕ್ ಸಂಬಂಧ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಇನ್ನು ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂಬ ತೀರ್ಮಾನಕ್ಕೆ ಭಾರತ ಬಂತು. ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸದೇ ಇರುವ ತೀರ್ಮಾನಕ್ಕೆ ಬಂದರು.
ಅವರನ್ನು ಬೆಂಬಲಿಸಿ ಇತರ ಸಾರ್ಕ್ ದೇಶಗಳಾದ ಬಾಂಗ್ಲಾದೇಶ, ಭೂತಾನ್, ಆಪ್ಘಾನಿಸ್ಥಾನ ತಾವೂ ಸಮ್ಮೇಳನಕ್ಕೆ ಬಹಿಷ್ಕಾರ ಹಾಕುವುದಾಗಿ ಹೇಳಿದವು. ಬಳಿಕ ನೇಪಾಳವೂ ಭಾರತದ ನಡೆಗೆ ಸಾಥ್ ನೀಡಿತು. ತೀವ್ರ ಮುಖಭಂಗ ಅನುಭವಿಸಿದ ಪಾಕಿಸ್ಥಾನ ಸಾರ್ಕ್ ಸಮ್ಮೇಳನವನ್ನೇ ರದ್ದುಮಾಡಿತು. ಇದು ಅಂತಾರಾಷ್ಟ್ರೀಯವಾಗಿಯೂ ಪಾಕಿಸ್ಥಾನಕ್ಕೆ ತೀವ್ರ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.