ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 71ನೇ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೀಡಿದ ಸಂದೇಶ ಪ್ರತಿಯೊಬ್ಬ ಭಾರತೀಯನು ಬೆಂಬಲ ಸೂಚಿಸುವಂತಿದೆ ಎಂದು ಕಾಂಗ್ರೆಸ್ ಪಕ್ಷದ ಸಚಿವ ಶಶಿ ತರೂರ್ ಹೇಳಿದ್ದಾರೆ.
ವಿದೇಶಾಂಗ ಸಚಿವಾಲಯದ ಇತರ ಭಾಷಣಗಳಂತೆ ಈ ಭಾಷಣವನ್ನೂ ಕೂಡ ಉತ್ತಮವಾಗಿ ರಚಿಸಿ ವಿಶ್ಲೇಷಿಸಲಾಗಿದೆ. ಈ ಭಾಷಣದಲ್ಲಿ ನಾವು ನೆನಪಿನಲ್ಲಿಡಬೇಕಾದ ಹಲವು ಮೌಲ್ಯಗಳಿವೆ ಎಂದು ತರೂರ್ ಹೇಳಿದ್ದಾರೆ.
ತಮ್ಮ ಭಾಷಣವನ್ನು ಹಿಂದಿಯಲ್ಲಿ ಆರಂಭಿಸಿ ಭಾರತೀಯರು ಮತ್ತು ಪಾಕಿಸ್ಥಾನದ ಪ್ರೇಕ್ಷಕರನ್ನು ಉದ್ದೇಶಿಸಿ ಕೆಲವು ಪ್ರಮುಖ ಮನವಿಗಳನ್ನು ಸುಷ್ಮಾ ಸ್ವರಾಜ್ ಅವರು ಮಾಡಿದ್ದಾರೆ. ಈ ಭಾಷಣ ಏಷ್ಯಾ ಉಪಖಂಡದ ರಾಷ್ಟ್ರವನ್ನು ಉದ್ದೇಶಿಸಿಯೇ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಜಾಗತಿಕ ವಿಚಾರಗಳಲ್ಲಿ ಭಾರತದ ಪಾತ್ರ ಮತ್ತು ಪಾಕಿಸ್ಥಾನದ ಭಯೋತ್ಪಾದನೆಯಿಂದ ಭಾರತ ಎದುರಿಸುತ್ತಿರುವ ಸವಾಲುಗಳು, ಇದು ಕೇವಲ ಭಾರತದ ಸಮಸ್ಯೆಯಲ್ಲ. ಇದು ಇಡೀ ವಿಶ್ವವೇ ಎದುರಿಸುತ್ತಿರುವ ಸಮಸ್ಯೆ. ಸುಷ್ಮಾ ಸ್ವರಾಜ್ ಅವರು ನೀಡಿದ ಸಂದೇಶ ಉತ್ತಮವಾಗಿತ್ತು. ಭಾರತ ವಿಶ್ವಕ್ಕೆ ಬಲವಾದ ಸಂದೇಶವನ್ನು ನೀಡಬೇಕಿದೆ. ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಯುತ್ತಿರುವ ಪ್ರದೇಶಗಳನ್ನು ಗುರುತಿಸಿದ್ದು, ಭಾರತವೂ ಭಯೋತ್ಪಾದನೆಗೆ ತುತ್ತಾಗಿದೆ ಎಂದು ತರೂರ್ ಈ ವೇಳೆ ಹೇಳಿದ್ದಾರೆ.
ಪಾಕಿಸ್ಥಾನ ಕಾಶ್ಮೀರ ವಿಚಾರವನ್ನು ಜಾಗತೀಕರಿಸಲು ಪ್ರಯತ್ನಿಸುತ್ತಿದೆ. ಆದರೆ ಅದಕ್ಕಿಂತ ಪ್ರಮುಖವಾದ ಭಯೋತ್ಪಾದನೆಯ ವಿಚಾರವನ್ನು ಭಾರತ ಜಾಗತೀಕರಕರಿಸಲು ಉದ್ದೇಶಿಸಿದೆ. ಭಯೋತ್ಪಾದನೆ ಜೊತೆ ಪಾಕಿಸ್ಥಾನದ ಸಂಪಕರ್ಪ ಈ ಸಂದೇಶದ ಒಂದು ಮುಖ್ಯ ಅಂಶವಾಗಿದೆ. ಇದನ್ನು ಜಗತ್ತಿಗೆ ತಿಳಿಸುವುದು ಅತೀ ಅಗತ್ಯ. ಆದ್ದರಿಂದ ಈ ಸಂದೇಶ ಬಹಳ ಮಹತ್ವದ್ದಾಗಿದೆ ಎಂದು ತರೂರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.