ಕೋಝಿಕೋಡ್: ಕಳೆದ ವರ್ಷ ಪ್ಯಾರಿಸ್ನಲ್ಲಿ ಮಾಡಿದ ಕಾಪ್೨೧ ಒಪ್ಪಂದಕ್ಕೆ ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅಕ್ಟೋಬರ್ 2ರಂದು ಅನುಮೋದನೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಕೇರಳದ ಕೋಝಿಕೋಡ್ನಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ಸಭೆಯಲ್ಲಿ ಅವರು ಈ ಬಗ್ಗೆ ತಿಳಿಸಿದ್ದಾರೆ. ಭಾತರತದ ಪಿತಾಮಃ ಮಹಾತ್ಮ ಗಾಂಧಿ ಅವರ ಕಾಲದಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಬಳಕೆಯಾಗಿತ್ತು, ಆದ್ದರಿಂದ ಈ ದಿನಾಂಕವನ್ನು ಆಯ್ದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತ ಪ್ಯಾರಿಸ್ ಹವಾಮಾನ ಶೃಂಗಸಭೆಯಲ್ಲಿ ಪ್ರಮುಖ ಪಾತ್ರ ವಹಸಿವುದರ ಜೊತೆಗೆ ಅಮೇರಿಕಾದ ಪರಮಾಣು ಶಕ್ತಿ ಒಪ್ಪಂದ ಮತ್ತು ನವದೆಹಲಿಯನ್ನು ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್ಗೆ ಸೇರಿಸಲು ಹೆಚ್ಚಿನ ಒತ್ತು ನೀಡಿತ್ತು.
ಭಾರತ ಕಾಪ್೨೧ನ ಅವಧಿಯೊಳಗೆ ಹೊರಸೂಸುವಿಕೆ ಪ್ರಮಾಣ ಕಡಿಮೆ ಮಾಡುವ ಸಾಧ್ಯತೆ ಕಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಸುಮಾರು 90ಕ್ಕೂ ಹೆಚ್ಚು ರಾಷ್ಟ್ರಗಳು ಹೊರಸೂಸುವಿಕೆ ಕಡಿತಗೊಳಿಸಿ ನೈಸರ್ಗಕ ಶಕ್ತಿ ಬಳಕೆಗೆ ಬದ್ಧವಾಗಿದ್ದು, ಕನಿಷ್ಟ 55 ರಾಷ್ಟ್ರಗಳು ಅನುಮೋದನೆ ನೀಡಿದಲ್ಲಿ ಇದು ಜಾರಿಗೆ ಬರಲಿದೆ.
ಅಮೇರಿಕಾ ಮತ್ತು ಚೀನಾ ಸೇರಿದಂತೆ 31 ರಾಷ್ಟ್ರಗಳು ಈ ವರ್ಷ ಒಪ್ಪಂದಕ್ಕೆ ಅನುಮೋದನೆ ನೀಡಿದ್ದು, ಭಾರತ ಅನುಮೋದನೆ ನೀಡಿದಲ್ಲಿ ಒಟ್ಟು 61 ರಾಷ್ಟ್ರಗಳು ಈ ಒಪ್ಪಂದಕ್ಕೆ ಅನುಮೋನೆ ನೀಡಿದಂತಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.