ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಸೋಮವಾರ ಎರಡು ಕಕ್ಷೆಗಳಿಗೆ ಏಕಕಾಲದಲ್ಲಿ 8 ಉಪಗ್ರಹಗಳ ಉಡಾವಣೆ ಮಡುವ ಮೂಲಕ ಮತ್ತೊಂದು ಸಾಧನೆ ಮಾಡಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಹವಾಮಾನ ಉಪಗ್ರಹ (Scatsat-1) ಸೇರಿಂದಂತೆ 3 ಸ್ವದೇಶಿ ಮತ್ತು 5 ವಿದೇಶಿ ಉಪಗ್ರಗಳನ್ನು ಹೊತ್ತ ಪಿಎಸ್ಎಲ್ವಿ (C-35) ರಾಕೆಟ್ ಇಂದು ಬೆಳಗ್ಗೆ 9.12ಕ್ಕೆ ಯಶಸ್ವಿ ಉಡಾವಣೆಗೈದಿದೆ.
ಭಾರತದ 371 ಕೆ.ಜಿ ತೂಕದ Scatsat-1 ಉಪಗ್ರಹ ಉಡಾವಣೆಯ 17 ನಿಮಿಷಗಳಲ್ಲಿ ಪಿಎಸ್ಎಲ್ವಿ ರಾಕೆಟ್ ಇದನ್ನು ಕಕ್ಷೆಗೆ ಸೇರಿಸಿದ್ದು, ಸಾಗರೋತ್ತರ ಮತ್ತು ಹವಾಮಾನ ಸಂಬ<ಧಿತ ಅಧ್ಯಯನಕ್ಕೆ ಬಳಸಲಿದೆ.
Scatsat-1 ಉಪಗ್ರಹ ಗಾಳಿಯ ಅಣುಗಳ ಸಹಾಯದಿಂದ ಹವಾಮಾನ ಮುನ್ಸೂಚನೆ, ಚಂಡಮಾರುತ ಪತ್ತೆ ಮತ್ತಿತರ ಸೇವೆಗಳನ್ನು ಒದಗಿಸಲಿದೆ. ಇದು ಓಷಿಯನ್ ಸ್ಕಾಟ್-2 ಯೋಜೆನೆಯ ಮುಂದುವರಿದ ಭಾಗವಾಗಿದೆ ಎಂದು ಇಸ್ರೋ ಹೇಳಿದೆ.
Scatsat-1ನ್ನು 730 ಕಿ.ಮೀ. ಎತ್ತದಲ್ಲಿ ಸನ್ ಸಿಕ್ರೋನಸ್ ಕಕ್ಷೆಗೆ ಬಿಡಲಾಗುತ್ತಿದ್ದು, ಇತರ ಉಪಗ್ರಹಗಳನ್ನು 689 ಕಿ.ಮೀ. ಎತ್ತರದಲ್ಲಿ ಕಕ್ಷೆಗೆ ಬಿಡುವುದಾಗಿ ಇಸ್ರೋ ತಿಳಿಸಿದೆ.
371 ಕೆಜಿ ತೂಕದ Scatsat-1 ಸೇರಿದಂತೆ 8 ಉಪಗ್ರಹಗಳು 675 ಕೆ.ಜಿ. ತೂಕ ಹೊಂದಿವೆ. ಸ್ಕಾಟ್ಸ್ಯಾಟ್ ಅಲ್ಲದೇ ಪ್ರಥಮ್ ಮತ್ತು ಪಿಸ್ಯಾಟ್, ಎರಡು ಶೈಕ್ಷಣಿಕ ಉಪಗ್ರಹಗಳು, ಆಲ್ಜೀರಿಯಾದ Alsat- 1B, Alsat-2B ಮತ್ತು Alsat- 1N, ಅಮೇರಿಕಾದ Pathfinder ಮತ್ತು ಕ್ಯಾನಡಾದ NLS 19 ಇತರ ಉಪಗ್ರಹಗಳಾಗಿವೆ.
5 ವಿದೇಶಿ ಉಪಗ್ರಹಗಳ ಉಡಾವಣೆಯೊಂದಿಗೆ ಭಾರತ ಈಗಾಗಲೇ 20 ರಾಷ್ಟ್ರಗಳ 79 ಉಪಗ್ರಹಗಳನ್ನು ಬಿಡುಗಡೆ ಮಾಡಿದೆ. ಮುಂದಿನ ತಿಂಗಳು ಭಾರತ ಇನ್ನೆರಡು ವಿದೇಶಿ ಉಪಗ್ರಹಗಳನ್ನು ಬಿಡುಗಡೆ ಮಾಡಲಿದ್ದು, ಅತಿ ಶೀಘ್ರದಲ್ಲೇ ಇದು 100ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ ಎಂದು ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಸ್ಎಲ್ವಿ C-35, ಆಧುನಿಕ ಹವಾಮಾನ ಉಪಗ್ರಹ Scatsat-1 ಹಾಗೂ ಇತರ 7 ಸಹ ಪ್ರಯಾಣಿಕ ಉಪಗ್ರಹಗಳ ಯಶಸ್ವಿ ಉಡಾವಣೆಗಾಗಿ ಇಸ್ರೋ ಮತ್ತು ಅದರ ವಿಜ್ಞಾನಿಗಳಿಗೆ ಅಭಿನಂದಿಸಿದ್ದಾರೆ.
ಭಾರತಕ್ಕೆ ಇದು ಅಪಾರ ಸಂತೋಷ ಮತ್ತು ಹೆಮ್ಮೆಯ ಕ್ಷಣವಾಗಿದೆ. ಪಿಎಸೆಲ್ವಿ-C-35 ಯಶಸ್ಸಿಗೆ ಇಸ್ರೋಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ಹೊಸ ಹೊಸ ಇತಿಹಾಸ ನಿರ್ಮಿಸುತ್ತಲೇ ಇದ್ದಾರೆ. ಅವರ ಹುರುಪು 125 ಕೋಟಿ ಭಾರತೀಯರ ಹೃದಯ ತಟ್ಟಿದೆ ಮತ್ತು ವಿಶ್ವದಾದ್ಯಂತ ಭಾರತ ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.