ಮುಂಬಯಿ: ಪಾಕಿಸ್ಥಾನದ ಚಲನಚಿತ್ರ ಮತ್ತು ಟಿವಿ ಕಲಾವಿದರು 48 ತಾಸುಗಳಲ್ಲಿ ಭಾರತವನ್ನು ತೊರೆಯಬೇಕು ಇಲ್ಲವಾದಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಖಡಕ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರಪ್ರಥಮವಾಗಿ ಪಾಕಿಸ್ಥಾನಿ ಟಿವಿ ಕಾರ್ಯಕ್ರಮ ಆರಂಭಿಸಿದ ಜಿಂದಗಿ ಚಾನೆಲ್ ಭಾರತದಲ್ಲಿ ಪ್ರಸಾರ ಮಡುತ್ತಿರುವ ಎಲ್ಲ ಟಿವಿ ಕಾರ್ಯಕ್ರಮಗಳನ್ನು ನಿಷೇಧಿಸಲು ಚಿಂತಿಸುತ್ತಿದೆ ಎನ್ನಲಾಗಿದೆ.
ಅಮೇರಿಕಾದ ವಿಶ್ವಸಂಸ್ಥೆಯಲ್ಲಿ 71ನೇ ಯುಎನ್ಇಎ ಮಹಾಸಭೆಯಲ್ಲಿ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರ ಭಾಷಣವನ್ನು ಉಲ್ಲೇಖಿಸುತ್ತ ‘ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಮಿಯಾ ಶರೀಫ್ರ ನಿಲುವು ದುರಾದೃಷ್ಟಕರ. ಪಾಕಿಸ್ಥಾನದಿಂದ ಪ್ರಸಾರವಾಗುತ್ತಿರುವ ಜಿಂದಗಿ ಕಾರ್ಯಕ್ರಮಗಳನ್ನು ಪರಿಗಣನೆಗೆ ತೆಗೆದುಕೊಂಡು ನಿಲ್ಲಿಸುವ ಬಗ್ಗೆ ಝೀ ಚಿಂತಿಸುತ್ತಿದೆ. ಅಲ್ಲಿಯ ಕಲಾವಿದರು ಭಾರತವನ್ನು ಬಿಡಬೇಕಿದೆ ಎಂದು Zee ಮತ್ತು ಎಸ್ಸೆಲ್ ಗ್ರೂಪ್ನ ಅಧ್ಯಕ್ಷ ಸುಭಾಷ್ ಚಂದ್ರ ಟ್ವೀಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉರಿ ಉಗ್ರ ದಾಳಿಯಲ್ಲಿ ಭಾರತದ 18 ಯೋಧರು ಮೃತಪಟ್ಟಿದ್ದು, ಭಾರತದಲ್ಲಿ ‘ಪಾಕಿಸ್ಥಾನ ವಿರೋಧಿ’ ಕೂಗು ಕೇಳಿ ಬರುತ್ತಿದ್ದು, ಎಂಎನ್ಎಸ್ ಈ ಆದೇಶ ನೀಡಿತ್ತು.
ಜೊತೆಗೆ ಪಾಕಿಸ್ಥಾನಿ ತಾರೆಯರು ನಟಿಸಿರುವ ಬಾಲಿವುಡ್ ಚಲನಚಿತ್ರಗಳಾದ ‘ಯೇ ದಿಲ್ ಹೈ ಮುಷ್ಕಿಲ್’ ಮತ್ತು ‘ರಯೀಸ್’ ಬಿಡುಗಡೆಗೆ ಅನುಮತಿಸುವುದಿಲ್ಲ ಎಂದು ಎಂಎನ್ಎಸ್ ಪಕ್ಷ ಎಚ್ಚರಿಕೆ ನೀಡಿದೆ.
ಜಿಂದಗಿ ಚಾನೆಲ್ ಪಾಕಿಸ್ಥಾನದ ಟಿವಿ ಕಾರ್ಯಕ್ರಮ ‘ಜಿಂದಗಿ ಗುಲ್ಜಾರ್ ಹೈ’, ‘ವಕ್ತ್ ನೇ ಕಿಯಾ ಕ್ಯಾ ಹಸೀನ್ ಸಿತಮ್’, ‘ಸಸುರಾಲ್ ಕಿ ಗಲ್ಲಿ’ ‘ನೂರ್ ಬನೋ’ ಮುಂತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.