ನವದೆಹಲಿ: ಭಾರತದ ಗಡಿ ಸುರಕ್ಷತೆಗೆ ಬೇಲಿ ಅಳವಡಿಸಲು ನೆರವು ಸೂಚಿಸಿರುವ ಇಸ್ರೇಲ್, ಎರಡೂ ದೇಶಗಳು ಗಡಿ ಭಯೋತ್ಪಾದನೆ ಸೇರಿದಂತೆ ಇತರ ರಂಗಗಳಲ್ಲಿ ಸಮಾನ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಅದು ಹೇಳಿದೆ.
ಭಾನುವಾರ ಉರಿ ಸೆಕ್ಟರ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಭಯೋತ್ಪಾದಕರು ಪಾಕಿಸ್ಥಾನದಿಂದ ಗಡಿ ನಿಯಂತ್ರಣ ರೇಖೆ ದಾಟಿ ಭಾರತಕ್ಕೆ ನುಸುಳಿರುವುದಾಗಿ ನಂಬಲಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ನ ಭಾರತೀಯ ರಾಯಭಾರಿ ಡೇನಿಯಲ್ ಕಾರ್ಮನ್ ಈ ವಿಚಾರದಲ್ಲಿ ಗಡಿ ಸುರಕ್ಷತೆಗೆ ನೆರವು ನೀಡುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಸ್ರೇಲ್ ತನ್ನ ಅಭಿವೃದ್ಧಿಯ ಕಾಳಜಿ ಹೊಂದಿದ್ದು, ಜೊತೆಗೆ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತದೊಂದಿಗೆ ದ್ವಿಪಕ್ಷೀಯ ಸಹಕಾರ ಶಾಶ್ವತವಾಗಿರಲಿದೆ ಎಂದು ದೃಢಪಡಿಸಿದ್ದಾರೆ.
ಇಸ್ರೇಲ್ ಕೂಡ ಬೆದರಿಕೆಗಳನ್ನು ಎದುರಿಸುತ್ತ ಬಂದಿದೆ. ಇದರಲ್ಲಿ ನಾವು ಪರಿಣತಿ ಹೊಂದಿದ್ದೇವೆ. ಎರಡೂ ದೇಶಗಳ ಸಮಾನ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದು, ಇದಕ್ಕೆ ಪರಿಹಾರ ಹೊಂದ್ದೇವೆ. ಇದನ್ನು ಪರಿಹರಿಸಲು ಜೊತೆಯಾಗಿ ಕಾರ್ಯ ನಿರ್ವಹಿಸಲಿದ್ದೇವೆ.
ನಾವು ಇತರ ಹಲವು ವಿಭಾಗಗಳಲ್ಲಿ ಸಹಕರಿಸಿದ್ದು, ಈ ವಿಚಾರದಲ್ಲೂ ಸಹಕಾರ ನೀಡಲಿದ್ದೇವೆ ಎಂದು ಕಾರ್ಮನ್ ಈ ವೇಳೆ ಹೇಳಿದ್ದಾರೆ.
ಸೈಬರ್ ಬೆದರಿಕೆ ಎದುರಿಸುವುದು ಮತ್ತು ತಂತ್ರಜ್ಞಾನ ವಿಭಾಗದ ಅಭಿವೃದ್ಧಿಯ ಕುರಿತು ನವೆಂಬರ್ 14-17ರ ವರೆಗೆ ಸಮಾವೇಶ ನಡೆಯಲಿದ್ದು, ಭಾರತದ ಕಂಪೆನಿಗಳು ಭಾಗವಹಿಸುವ ಸಾಧ್ಯತೆಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.