ನವದೆಹಲಿ: ಭಾರತದ ಅಂಧ ಪುರುಷರ ಕ್ರಿಕೆಟ್ ತಂಡ ಈಗಾಗಲೇ ಟಿ20 ವಿಶ್ವಕಪ್, ಟಿ 20 ಏಷ್ಯಾ ಕಪ್ ಹಾಗೂ ಏಕದಿನ ವಿಶ್ವ ಕಪ್ ಗೆದ್ದು ಯಶಸ್ಸು ಕಂಡಿದ್ದು, ಭಾರತದ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಭಾರತದಲ್ಲಿ ಅಂಧರ ಮಹಿಳಾ ಕ್ರಿಕೆಟ್ ತಂಡ ಆರಂಭಿಲಸಲು ನಿರ್ಧರಿಸಿದೆ.
ಮಹಿಳಾ ತಂಡದ ಆಯ್ಕೆ ಸಮಿತಿ ಅಧ್ಯಕ್ಷೆ ಹಾಗೂ ಭಾರತೀಯ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ 41 ಸದಸ್ಯರನ್ನು ಒಳಗೊಂಡ ಅಂಧರ ಮಹಿಳಾ ತಂಡದ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ.
ಅಂಧರ ಮಹಿಳಾ ತಂಡ ರಚನೆಗೆ ಭಾರೀ ಬೇಡಿಕೆ ಇದ್ದು, ಮಹಿಳೆಯರೂ ಕ್ರಿಕೆಟ್ ಆಡಲು ಉತ್ಸುಕತೆ ತೋರುತ್ತಿದ್ದಾರೆ. ಆದ್ದರಿಂದ ಈ ತಂಡ ಆರಂಭಿಸಲಾಗಿದೆ ಎಂದು ಸಿಎಬಿಐ ಕಾರ್ಯದರ್ಶಿ ಜಾನ್ ಡೇವಿಡ್ ಹೇಳಿದ್ದಾರೆ.
ಶಾಂತಾ ರಂಗಸ್ವಾಮಿ ಅವರು ಉತ್ತಮ ಯೋಜನೆ ಕೈಗೊಂಡಿದ್ದಾರೆ. ಮಹಿಳಾ ತಂಡಕ್ಕೂ ಪುರುಷರ ತಂಡದಷ್ಟೇ ಮಾನ್ಯತೆ ದೊರೆಯಬೇಕು. ಮಹಿಳಾ ತಂಡ ಕೂಡ ವಿಶ್ವಕಪ್ ಮತ್ತಿತರ ಸರಣಿಗಳಲ್ಲಿ ಪಾಲ್ಗೊಳ್ಳಬೇಕು ಎಂದು ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ ಹೇಳಿದ್ದಾರೆ.
ಪುರುಷರ ತಂಡದ ಸದಸ್ಯರು ಮಹಿಳಾ ತಂಡಕ್ಕೆ ತರಬೇತಿ ನೀಡಲಿದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.