ವಿಯೆನ್ಟಿಯಾನ್: ಭಯೋತ್ಪಾದನೆಯ ರಫ್ತಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಯೋತ್ಪಾದನೆ ಮತ್ತು ಬೆಳೆಯುತ್ತಿರುವ ಹಿಂಸಾಚಾರ ನಮ್ಮ ಸಮಾಜಕ್ಕೆ ಒಂದು ಸಾಮಾನ್ಯ ಭದ್ರತಾ ಬೆದರಿಕೆಯಾಗಿದೆ. ಇದನ್ನು ವಿರುದ್ಧ ಹೋರಾಡಲು ಏಷಿಯಾನ್ ಒಕ್ಕೂಟ ರಾಷ್ಟ್ರಗಳು ಸಂಘಟಿತರಾಗಿ ಹೋರಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
೧೪ನೇ ಏಷಿಯಾನ್ ಒಕ್ಕೂಟ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಇದು ಸ್ಥಳೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಬೆದರಿಕೆಯಾಗಿದೆ. ಏಷಿಯಾನ್ ಜೊತೆಗಿನ ನಮ್ಮ ಪಾಲುದಾರಿಕೆ ಅನೇಕ ಹಂತಗಳಲ್ಲಿ ಸಮನ್ವಯ, ಸಹಕಾರದ ಪ್ರತಿಕ್ರಿಯೆ ಅನ್ವಯಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಬೆಳೆಯುತ್ತಿರುವ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಸವಾಲುಗಳಿಗೆ ರಾಜಕೀಯ ಸಹಕಾರ ಸಂಬಂಧಗಳು ಅಗತ್ಯ. ನಾವು ಸೈಬರ್ ಭದ್ರತಾ ಸಹಕಾರ, ಭಯೋತ್ಪಾದಕ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಾರತದ ಆಕ್ಟ್ ಈಸ್ಟ್ ನೀತಿಗೆ ಏಷಿಯಾನ್ ಒಂದು ಕೇಂದ್ರವಾಗಿದೆ ಎಂದು ಅವರು ಈ ವೇಳೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.