News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಟೀಲು ದೇವಿಗೆ ಅವಹೇಳನ ಮಾಡಿದವರ ಶೀಘ್ರ ಬಂಧಿಸಿ – ಆಸ್ರಣ್ಣ ಮನವಿ

ಬಜಪೆ ಪೊಲೀಸ್, ಸಂಸದ ಕಟೀಲ್ ಗೆ ಆಸ್ರಣ್ಣ ಮನವಿ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಬಗ್ಗೆ ಅತ್ಯಂತ ಅವಾಚ್ಯ ಹಾಗೂ ಅನಾಗರಿಕ ಶಬ್ದಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿ ಹಿಂದು ಧಾರ್ಮಿಕ ಭಾವನೆಗೆ ಘಾಸಿ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನಿನಡಿ ಸೂಕ್ತ ಶಿಕ್ಷೆ ನೀಡಬೇಕು ಎಂದು ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಕೆ.ವಾಸುದೇವ ಆಸ್ರಣ್ಣ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೂ ಸಲ್ಲಿಸಿದ್ದಾರೆ.

WhatsApp Image 2016-09-02 at 10.54.11

WhatsApp Image 2016-09-02 at 10.54.13

WhatsApp Image 2016-09-02 at 11.30.36
WhatsApp Image 2016-09-02 at 11.30.55

ಜಬ್ಬಾರ್ ಬಿ.ಸಿ.ರೋಡ್, ಇಮ್ರಾನ್ ಆಜ್ಮಿ, ಗೌಡ ಮಹೇಶ್, ಅಮೀರ್ ಅಮ್ಮಿ, ಮನ್ಸೂರ್ ಅಮಾನ್, ಟೈಗರ್ ಮುಜೈನ್ ಮಂಗಳೂರು, ಶೇಖ್ ಶಾ, ರಾಮ ಲಕ್ಷ್ಮಣ ಶಕ್ಕುಶೈನ್ ಮಂಗಳೂರು ಎಂಬಿತ್ಯಾದಿ ಹೆಸರಲ್ಲಿ ಖಾತೆ ಹೊಂದಿರುವ ವ್ಯಕ್ತಿಗಳು ಇಂಥ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ಕಿನಲ್ಲಿ ಹಾಕಿ ಅಶಾಂತಿಗೆ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಹಾಕಿದ್ದಾರೆ ಎಂದು ಆಸ್ರಣ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top