News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಐಎನ್‌ಎ, ಐಐಎಲ್‌ನ ದೇಣಿಗೆ ಪಾಕ್‌ನೊಂದಿಗೆ ಹಂಚಿಕೊಳ್ಳಲು 1953 ರಲ್ಲಿ ಭಾರತ ಒಪ್ಪಿತ್ತು

Netaji

ನವದೆಹಲಿ : ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಮತ್ತು ಇಂಡಿಯನ್ ಇಂಡಿಪೆಡೆನ್ಸ್ ಲೀಗ್‌ನ ದೇಣಿಗೆಗಳನ್ನು ಪಾಕಿಸ್ಥಾನದೊಂದಿಗೆ ಹಂಚಿಕೊಳ್ಳಲು 1953 ರಲ್ಲಿ ಭಾರತ ಒಪ್ಪಿಕೊಂಡಿತ್ತು ಎನ್ನಲಾಗಿದೆ.

ಮಂಗಳವಾರ ಬಹಿರಂಗಗೊಂಡ ನೇತಾಜಿಗೆ ಸಂಬಂಧಿಸಿದ ದಾಖಲೆಗಳಿಂದ ಈ ಅಂಶ ಬಹಿರಂಗಗೊಂಡಿದೆ.

1953 ರ ಆಗಸ್ಟ್ 18 ರಂದು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಆಗಿನ ಪಶ್ಚಿಮಬಂಗಾಳ ಮುಖ್ಯಮಂತ್ರಿ ಬಿ.ಸಿ.ರಾಯ್ ಅವರಿಗೆ ಬರೆದ ಪತ್ರದಲ್ಲಿ ಪಾಕಿಸ್ಥಾನದೊಂದಿಗೆ ದೇಣಿಗೆ ಹಂಚಿಕೆ ಬಗ್ಗೆ ಉಲ್ಲೇಖವಿದೆ ಎನ್ನಲಾಗಿದೆ.

ನೇತಾಜಿ ಮತ್ತು ಅವರ ಆಜಾದ್ ಹಿಂದ್ ಗರ್ವನ್‌ಮೆಂಟ್‌ಗೆ ಸಂಬಂಧಿಸಿದ ದೇಣಿಗೆಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ಸಲುವಾಗಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರಸ್ತಾವನೆಯನ್ನು ಅನುಮೋದನೆಗೊಳಿಸಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆಯಾಗಿ ನೆಹರೂ ಅವರು ಬಿ.ಸಿ.ರಾಯ್ ಅವರಿಗೆ ಪತ್ರ ಬರೆದಿದ್ದರು.

ಐಎನ್‌ಎ, ಐಐಎಲ್‌ನ ಅಧಿಕಾರಿಗಳು ಮತ್ತು ಇತರರಿಂದ ಅದಕ್ಕೆ ಸಂಬಂಧಿಸಿದ ಹಲವಾರು ಬಂಗಾರ, ಆಸ್ತಿ, ಅಮೂಲ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಇದರಲ್ಲಿ ಭಾಗವನ್ನು ತನಗೆ ಬೇಕೆಂದು ಪಾಕಿಸ್ಥಾನ ಕೂಡಾ ಕೇಳಿತ್ತು. ಹೀಗಾಗಿ ಅದರೊಂದಿಗೆ ಮಾತುಕತೆ ನಡೆದಿದ್ದು, ದೇಣಿಗೆಯನ್ನು 2:1 ಪ್ರಮಾಣದಲ್ಲಿ ಉಭಯ ದೇಶಗಳ ನಡುವೆ ಪಾಲು ನಡೆಸುವ ನಿರ್ಧಾರಕ್ಕೆ ಪಾಕಿಸ್ಥಾನ ಮತ್ತು ಭಾರತ ಒಪ್ಪಿಕೊಂಡಿತ್ತು ಎಂದು ಪತ್ರದಲ್ಲಿ ನೆಹರು ಉಲ್ಲೇಖಿಸಿದ್ದರು.

ಮಂಗಳವಾರ 7ನೇ ಹಂತವಾಗಿ 25 ದಾಖಲೆಗಳುಳ್ಳ ನೇತಾಜಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಸಂಸ್ಕೃತಿ ಸಚಿವ ಎನ್. ಕೆ. ಸಿನ್ಹಾ ಅವರು ಬಿಡುಗಡೆಗೊಳಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top